ಆ್ಯಪ್ನಗರ

ಅಜಂ ಖಾನ್‌ ಬಂಧನ ಸಾಧ್ಯತೆ

ಖಾನ್‌ ಅವರ ವಿರುದ್ಧ ಸಾಕಷ್ಟು ಪ್ರಬಲ ಸಾಕ್ಷ್ಯಗಳಿವೆ. ಅವರ ಬಂಧನಕ್ಕೆ ಇಷ್ಟು ಸಾಕು ಎಂದು ರಾಮ್‌ಪುರ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಪಾಲ್‌ ಶರ್ಮಾ ಹೇಳಿದ್ದಾರೆ.

PTI 11 Aug 2019, 5:00 am
ಲಖನೌ: ತಮ್ಮ ಒಡೆತನದ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಮದರಸಾ ಆಲಿಯಾದಿಂದ ಅಪರೂಪದ ಪುಸ್ತಕಗಳನ್ನು ಕದ್ದಿರುವುದು, ವಿವಿಗಾಗಿ 26 ರೈತರ ಕೃಷಿ ಭೂಮಿಯನ್ನು ದಾಖಲೆ ತಿದ್ದಿ ವಶಕ್ಕೆ ಪಡೆದಿರುವುದು ಹಾಗೂ ಡೆಪ್ಯುಟಿ ಸ್ಪೀಕರ್‌ ಮತ್ತು ಮಾಜಿ ಸಂಸದೆ ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಸಮಾಜವಾದಿ ಪಕ್ಷದ ಹಿರಿಯ ಸಂಸದ ಅಜಂ ಖಾನ್‌ ಶೀಘ್ರವೇ ಬಂಧಕ್ಕೆ ಒಳಗಾಗುವ ಸಾಧ್ಯತೆಯಿದೆ.
Vijaya Karnataka Web azam khan


ಖಾನ್‌ ಅವರ ವಿರುದ್ಧ ಸಾಕಷ್ಟು ಪ್ರಬಲ ಸಾಕ್ಷ್ಯಗಳಿವೆ. ಅವರ ಬಂಧನಕ್ಕೆ ಇಷ್ಟು ಸಾಕು ಎಂದು ರಾಮ್‌ಪುರ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಪಾಲ್‌ ಶರ್ಮಾ ಹೇಳಿದ್ದಾರೆ.
ಕೂಲಂಕಷ ತನಿಖೆ ಜಾರಿಯಲ್ಲಿದೆ. ಆರೋಪಗಳ ಎಲ್ಲ ಆಯಾಮಗಳನ್ನು ಪೊಲೀಸರು ಪರಿಶೀಲಿಸಿ ಚಾರ್ಜ್‌ಶೀಟ್‌ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಬಂಧನ ಆಗಬಹುದು ಎಂದು ಶರ್ಮಾ ತಿಳಿಸಿದ್ದಾರೆ.
ವಿವಿಗಾಗಿ ಭೂಮಿ ಖರೀದಿ ವೇಳೆ ಹಣ ಅಕ್ರಮ ವರ್ಗಾವಣೆ ಮಾಡಿರುವ ಶಂಕೆ ಮೇರೆಗೆ ಜಾರಿ ನಿರ್ದೇಶನಾಲಯ ಕೂಡ ಅಜಂ ಖಾನ್‌ ವಿರುದ್ಧ ತನಿಖೆ ಚುರುಕುಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ