ಹೊಸದಿಲ್ಲಿ: ಫೆಬ್ರವರಿ 19, 2007 ರಲ್ಲಿ ಭಾರತ-ಪಾಕಿಸ್ತಾನ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟದ ರಹಸ್ಯವನ್ನು ದಿ ಟೈಮ್ಸ್ ನೌ ಬಹಿರಂಗಪಡಿಸಿರುವ ವರದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
'ಯುಪಿಎ ಸರಕಾರ ನಡೆಸಿದ ಕಳಪೆ ತನಿಖೆಯಿಂದಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಗಡಿಯಾಚೆ ಸ್ವತಂತ್ರವಾಗಿದ್ದಾರೆ. ಆದರೆ, ಹಿಂದೂ ಭಯೋತ್ಪಾದಕರ ಕೈವಾಡ ಇದೆ ಎಂದು ಬಿಂಬಿಸಲು ತನಿಖೆಯ ಸ್ಪರೂಪವನ್ನೇ ಬದಲಾಯಿಸಲಾಗಿದೆ,' ಕಾನೂನು ಸಚಿವ ರವಿಶಂಕರ್ ಆರೋಪಿಸಿದ್ದಾರೆ.
'ಇದು ಅತ್ಯಂತ ಅಘಾತಕಾರಿ ಮತ್ತು ನೋವಿನ ಸಂಗತಿ. ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟ ಪ್ರಕರಣ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ' ಎಂದು ಕಾನೂನು ಸಚಿವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಹಿಂದೂ ಭಯೋತ್ಪಾದನೆ ಹೆಸರನ್ನು ಬಳಕೆ ಮಾಡಲಾಗಿತ್ತು. ಪಾಕಿಸ್ತಾನದ ಸಂಶಯಾಸ್ಪದ ವ್ಯಕ್ತಿಗಳನ್ನು ಯಾರ ಆದೇಶದ ಮೇಲೆ ಬಿಡುಗಡೆ ಮಾಡಲಾಗಿದೆ? ಪ್ರಕರಣದಲ್ಲಿ ಹಿಂದೂ ಭಯೋತ್ಪಾದಕರ ಕೈವಾಡ ಇದೆ ಎಂದು ಬಿಂಬಿಸಲು ತನಿಖೆಯ ಸ್ಪರೂಪವನ್ನೇ ಬದಲಾಯಿಸಲಾಗಿದೆಯೇ,'' ಎಂದು ಅವರು ಪ್ರಶ್ನಿಸಿದರು.
ಭಾರತದಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದರೂ ಸಹ ಬಂಧನದಲ್ಲಿದ್ದ ಪಾಕ್ ಪ್ರಜೆಗಳನ್ನು ಕೇವಲ 14 ದಿನಗಳಲ್ಲಿ ಬಿಡುಗಡೆಗೊಳಿಸಿರುವುದನ್ನು ಟೈಮ್ಸ್ ನೌ ಕುಟುಕು ಕಾರ್ಯಾಚರಣೆಯಲ್ಲಿ ತೋರಿಸಲಾಗಿದೆ.
'ಫೆಬ್ರವರಿ 19, 2017ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟಕ್ಕೆ 68 ಅಮಾಯಕರನ್ನು ಬಲಿಯಾಗಿದ್ದರು' ಎಂದು ತನಿಖಾಧಿಕಾರಿ ಗುರುದೀಪ್ ಸಿಂಗ್ ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಹೇಳಿಕೆಯ ಪ್ರಕಾರ, ಪಾಕಿಸ್ತಾನದ ನಾಗರಿಕ ಅಜ್ಮಿತ್ ಅಲಿ ಅವರನ್ನು ಪ್ರತ್ಯಕ್ಷದರ್ಶಿ ಎಂದು ಗರುತಿಸಲಾಗಿದೆ. ಆದರೆ, ಪ್ರಾಥಮಿಕ ತನಿಖೆ ನಡೆಸಿ 14 ದಿನಗಳಲ್ಲಿ ಬಿಡುಗಡೆ ಮಾಡಲಾಗಿದೆ. ಜತೆಗೆ, ಅಜ್ಮತ್ ಅಲಿ ಬಿಡುಗಡೆ ಹಾಗೂ ಹಿಂದೂ ಭಯೋತ್ಪಾದನೆ ನಡುವಿನ ನೇರ ಸಂಪರ್ಕವನ್ನು ಬಹಿರಂಗವಾಗಬೇಕಿದೆ.
'ಯುಪಿಎ ಸರಕಾರ ನಡೆಸಿದ ಕಳಪೆ ತನಿಖೆಯಿಂದಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಗಡಿಯಾಚೆ ಸ್ವತಂತ್ರವಾಗಿದ್ದಾರೆ. ಆದರೆ, ಹಿಂದೂ ಭಯೋತ್ಪಾದಕರ ಕೈವಾಡ ಇದೆ ಎಂದು ಬಿಂಬಿಸಲು ತನಿಖೆಯ ಸ್ಪರೂಪವನ್ನೇ ಬದಲಾಯಿಸಲಾಗಿದೆ,' ಕಾನೂನು ಸಚಿವ ರವಿಶಂಕರ್ ಆರೋಪಿಸಿದ್ದಾರೆ.
'ಇದು ಅತ್ಯಂತ ಅಘಾತಕಾರಿ ಮತ್ತು ನೋವಿನ ಸಂಗತಿ. ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟ ಪ್ರಕರಣ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆ' ಎಂದು ಕಾನೂನು ಸಚಿವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಹಿಂದೂ ಭಯೋತ್ಪಾದನೆ ಹೆಸರನ್ನು ಬಳಕೆ ಮಾಡಲಾಗಿತ್ತು. ಪಾಕಿಸ್ತಾನದ ಸಂಶಯಾಸ್ಪದ ವ್ಯಕ್ತಿಗಳನ್ನು ಯಾರ ಆದೇಶದ ಮೇಲೆ ಬಿಡುಗಡೆ ಮಾಡಲಾಗಿದೆ? ಪ್ರಕರಣದಲ್ಲಿ ಹಿಂದೂ ಭಯೋತ್ಪಾದಕರ ಕೈವಾಡ ಇದೆ ಎಂದು ಬಿಂಬಿಸಲು ತನಿಖೆಯ ಸ್ಪರೂಪವನ್ನೇ ಬದಲಾಯಿಸಲಾಗಿದೆಯೇ,'' ಎಂದು ಅವರು ಪ್ರಶ್ನಿಸಿದರು.
ಭಾರತದಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದ್ದರೂ ಸಹ ಬಂಧನದಲ್ಲಿದ್ದ ಪಾಕ್ ಪ್ರಜೆಗಳನ್ನು ಕೇವಲ 14 ದಿನಗಳಲ್ಲಿ ಬಿಡುಗಡೆಗೊಳಿಸಿರುವುದನ್ನು ಟೈಮ್ಸ್ ನೌ ಕುಟುಕು ಕಾರ್ಯಾಚರಣೆಯಲ್ಲಿ ತೋರಿಸಲಾಗಿದೆ.
'ಫೆಬ್ರವರಿ 19, 2017ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟಕ್ಕೆ 68 ಅಮಾಯಕರನ್ನು ಬಲಿಯಾಗಿದ್ದರು' ಎಂದು ತನಿಖಾಧಿಕಾರಿ ಗುರುದೀಪ್ ಸಿಂಗ್ ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಹೇಳಿಕೆಯ ಪ್ರಕಾರ, ಪಾಕಿಸ್ತಾನದ ನಾಗರಿಕ ಅಜ್ಮಿತ್ ಅಲಿ ಅವರನ್ನು ಪ್ರತ್ಯಕ್ಷದರ್ಶಿ ಎಂದು ಗರುತಿಸಲಾಗಿದೆ. ಆದರೆ, ಪ್ರಾಥಮಿಕ ತನಿಖೆ ನಡೆಸಿ 14 ದಿನಗಳಲ್ಲಿ ಬಿಡುಗಡೆ ಮಾಡಲಾಗಿದೆ. ಜತೆಗೆ, ಅಜ್ಮತ್ ಅಲಿ ಬಿಡುಗಡೆ ಹಾಗೂ ಹಿಂದೂ ಭಯೋತ್ಪಾದನೆ ನಡುವಿನ ನೇರ ಸಂಪರ್ಕವನ್ನು ಬಹಿರಂಗವಾಗಬೇಕಿದೆ.