ಆ್ಯಪ್ನಗರ

ಇಸ್ರೋ ‘ಚಂದ್ರಯಾನ-2’ ಸಂಭ್ರಮಕ್ಕೆ ಮರಳು ಶಿಲ್ಪದ ಮೆರುಗು!

ಇಸ್ರೋ ಮಹತ್ವಾಕಾಂಕ್ಷೆಯ ‘ಚಂದ್ರಯಾನ-2’ ನಿರ್ಣಾಯಕ ಘಟ್ಟ ತಲುಪಿದ ಸಂಭ್ರಮಕ್ಕೆ ಒಡಿಶಾದ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಪಟ್ನಾಯಕ್ ನೀಡುವ ಕೊಡುಗೆ ಏನು? ಇಲ್ಲಿದೆ ನೋಡಿ.

Vijaya Karnataka Web 6 Sep 2019, 10:12 pm
ಪುರಿ (ಒಡಿಶಾ): ಇಸ್ರೋ ಮಹತ್ವಾಕಾಂಕ್ಷೆಯ ‘ಚಂದ್ರಯಾನ-2’ ಮಹತ್ವದ ಘಟ್ಟ ತಲುಪಿದೆ. ವಿಕ್ರಮ್ ಲ್ಯಾಂಡರ್ ನಿಂದ ಇಳಿಯುವ ಪ್ರಜ್ಞಾನ್ ರೋವರ್, ಚಂದ್ರನ ಅಂಗಳದಲ್ಲಿ ನಡೆದಾಡುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ವಿಶ್ವವೇ ಕಾತುರದಿಂದ ಎದುರು ನೋಡ್ತಿದೆ. ಈ ನಿರ್ಣಾಯಕ ಘಟ್ಟವನ್ನು ಸಂಭ್ರಮಿಸಲು ಒಡಿಶಾದ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್, ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.
Vijaya Karnataka Web head new


ಪುರಿ ಕಡಲ ತೀರದ ಮರಳಿನ ಮೇಲೆ ಚಂದ್ರಯಾನ-2 ಸಾಹಸವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಈ ಸಂಬಂಧ ಟ್ವಿಟರ್ ನಲ್ಲಿ ಫೋಟೋಗಳನ್ನೂ ಪಟ್ನಾಯಕ್ ಹಂಚಿಕೊಂಡಿದ್ದಾರೆ.


ನೀಲಾಕಾಶದಲ್ಲಿ ರಾರಾಜಿಸುತ್ತಿರುವ ಚಂದ್ರನನ್ನು ಸುತ್ತುವರಿಯುತ್ತಿರುವ ಆರ್ಬಿಟರ್ ಹಾಗೂ ಅದರಿಂದ ಕೆಳಗಿಳಿಯುತ್ತಿರುವ ವಿಕ್ರಮ್ ಲ್ಯಾಂಡರ್ ನ ಚಿತ್ರಣವನ್ನು ಮರಳಿನಲ್ಲಿ ಮೂಡಿಸಿದ್ದಾರೆ. ಜೈ ವಿಜ್ಞಾನ್, ಜೈ ಭಾರತ್ ಎಂದು ಟ್ವೀಟಿಸಿ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.


ಭಾರತ ಸೇರಿದಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಗಮನ ಸೆಳೆಯುವ ವಿದ್ಯಮಾನಗಳು ನಡೆದರೂ ಅದನ್ನು ಸಾಗರ ತೀರದ ಮರಳಿನ ಮೇಲೆ ಮೂಡಿಸುವ ಮೂಲಕ, ದಶಕಗಳಿಂದಲೂ ಸುದರ್ಶನ್ ಪಟ್ನಾಯಕ್ ಮನೆಮಾತಾಗಿದ್ದಾರೆ.

ಚಂದ್ರಯಾನ 2 ಲೈವ್‌ ಅಪ್ಡೇಟ್ಸ್‌: ಬೆಂಗಳೂರಿಗೆ ಆಗಮಿಸಿದ ಮೋದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ