ಆ್ಯಪ್ನಗರ

ರಾಹುಲ್ ಗಾಂಧಿ ಹೆಸರಲ್ಲಿ ಬಡವರಿಗಾಗಿ ಕ್ಯಾಂಟೀನ್ ಆರಂಭಿಸಿದ ಸನ್ಯಾಸಿ

ಉನ್ನಾವೊ-ರಾಯ್ ಬರೇಲಿ ಮಾರ್ಗದಲ್ಲಿರುವ ರಸ್ತೆ ಬದಿಯಲ್ಲಿ ಬಡವರಿಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರಲ್ಲಿ ಕ್ಯಾಂಟೀನ್ ತೆರೆಯುವ ಮೂಲಕ ಸನ್ಯಾಸಿಯೊಬ್ಬರು ಉತ್ತರ ಪ್ರದೇಶ ಜನರ ಗಮನ ಸೆಳೆದಿದ್ದಾರೆ.

TIMESOFINDIA.COM 5 Oct 2018, 2:29 pm
ಬೆಥಾರ್: ಉನ್ನಾವೊ-ರಾಯ್ ಬರೇಲಿ ಮಾರ್ಗದಲ್ಲಿರುವ ರಸ್ತೆ ಬದಿಯಲ್ಲಿ ಬಡವರಿಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರಲ್ಲಿ ಕ್ಯಾಂಟೀನ್ ತೆರೆಯುವ ಮೂಲಕ ಸನ್ಯಾಸಿಯೊಬ್ಬರು ಉತ್ತರ ಪ್ರದೇಶ ಜನರ ಗಮನ ಸೆಳೆದಿದ್ದಾರೆ.
Vijaya Karnataka Web raga


ಖ್ಯಾತ ಸನ್ಯಾಸಿಯಾಗಿರುವ ರಾಜು ಬಾಬಾ ಎಂಬವರು ಮೂರು ವಾರಗಳ ಹಿಂದಷ್ಟೇ ಈ ಕ್ಯಾಂಟೀನ್ ಆರಂಭಿಸಿದ್ದಾರೆ. ತಾನು ಜುನಾ ಅಖಾರಾದ ನಾಗಾ ಸಾಧು ಎಂದು ಹೇಳಿಕೊಳ್ಳುವ ಸನ್ಯಾಸಿ, ಬಡ ಜನರಿಗೆ ಉಚಿತವಾಗಿ ಆಹಾರ ವಿತರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

'ನಾನು ಶಿವಭಕ್ತ. ರಾಹುಲ್ ಗಾಂಧಿ ಕೂಡ ಶಿವಭಕ್ತ. ಹೀಗಾಗಿ ನಾವು ಸಹೋದರರಿದ್ದಂತೆ, ಹೀಗಾಗಿ ಅವರ ಹೆಸರಲ್ಲಿ ಕ್ಯಾಂಟೀನ್ ಆರಂಭಿಸಿದ್ದೇನೆ. ನಮ್ಮ ಕ್ಯಾಂಟೀನ್‌ನಲ್ಲಿ ಪ್ರತಿದಿನ 150ಕ್ಕೂ ಹೆಚ್ಚು ಜನ ಆಹಾರ ಸೇವಿಸುತ್ತಾರೆ. ಸ್ವಇಚ್ಛೆಯಿಂದ ಹಣ ಕೊಟ್ಟರೆ ಮಾತ್ರ ಸ್ವೀಕರಿಸುತ್ತೇವೆ' ಎಂದು ಬಾಬಾ ಹೇಳಿಕೊಂಡಿದ್ದಾರೆ.

ದೈವದ ಹೆಸರಿನಲ್ಲೇಕೆ ಕ್ಯಾಂಟೀನ್ ಆರಂಭಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಾಬಾ, 'ದೇವಾನುದೇವತೆಗಳು ಮನುಷ್ಯರನ್ನು ತನ್ನ ಕ್ರಿಯೆಯ ಸಾಧನವಾಗಿ ಬಳಸಿಕೊಳ್ಳುತ್ತಾರೆ. ಪ್ರಸ್ತುತ ಕಾಲದಲ್ಲಿ ರಾಹುಲ್ ಗಾಂಧಿ ಅವರ ಮಾತುಗಳು ಸರಿಯಾಗಿವೆ. ಎಲ್ಲರೂ ಕೂಡಿ ಬಾಳಬೇಕು ಮತ್ತು ಹಂಚಿಕೊಂಡು ತಿನ್ನಬೇಕು', ಎಂದಿದ್ದಾರೆ.

'ಕಳೆದ ಆರು ವರ್ಷಗಳ ಹಿಂದೆ, ನಮ್ಮೂರಲ್ಲಿ 8 ಸಾವಿರ ಜನರಿದ್ದರು. ನಿರುದ್ಯೋಗದಿಂದ ಬೇಸತ್ತ ಬಹುತೇಕರು ಊರು ಬಿಟ್ಟು ನಗರ ಸೇರಿದರು. ಆದರೆ, ಅವರು ಬಿಟ್ಟು ಹೋಗಿರುವ ಹಿರಿಯ ಜೀವಗಳ ಹೊಟ್ಟಿ ತುಂಬಿಸುವವರು ಯಾರು ಎಂದು ಪ್ರಶ್ನಿಸಿರುವ ರಾಜು ಬಾಬಾ, 'ಅಂತಹ ಹಸಿದ ಜೀವಗಳ ಹೊಟ್ಟೆ ತುಂಬಿಸುವ ಕೆಲಸ ನಾನು ಮಾಡುತ್ತಿದ್ದೇನೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ