ಆ್ಯಪ್ನಗರ

ಸಿಬಿಐ ಅಧಿಕಾರಿಗಳಿಂದ ಇಂದು ರಾಜೀವ್‌ಕುಮಾರ್‌ ಬಂಧನ?

ಈ ನಡುವೆ, ಸೋಮವಾರ ವಿಚಾರಣೆಗೆ ಹಾಜರಾಗುವಂತೆಯೂ ರಾಜೀವ್‌ಗೆ ಸಿಬಿಐ ಸಮನ್ಸ್‌ ನೀಡಿದೆ. ವಿಚಾರಣೆ ಬಳಿಕ ಅವರ ಬಂಧನವವಾಗುವ ಸಾಧ್ಯತೆ ಇದೆ.

PTI 27 May 2019, 5:00 am
ಹೊಸದಿಲ್ಲಿ: ಬಹುಕೋಟಿ ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ಅವರ ವಿರುದ್ಧ ಸಿಬಿಐ ಭಾನುವಾರ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ. ಅವರು ದೇಶಬಿಟ್ಟು ಪರಾರಿಯಾಗದಂತೆ ನಿಗಾ ವಹಿಸುವಂತೆ ಎಲ್ಲ ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ವಲಸೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Vijaya Karnataka Web saradha scam cbi issues look out notice against rajeev kumar
ಸಿಬಿಐ ಅಧಿಕಾರಿಗಳಿಂದ ಇಂದು ರಾಜೀವ್‌ಕುಮಾರ್‌ ಬಂಧನ?


ಈ ನಡುವೆ, ಸೋಮವಾರ ವಿಚಾರಣೆಗೆ ಹಾಜರಾಗುವಂತೆಯೂ ರಾಜೀವ್‌ಗೆ ಸಿಬಿಐ ಸಮನ್ಸ್‌ ನೀಡಿದೆ. ವಿಚಾರಣೆ ಬಳಿಕ ಅವರ ಬಂಧನವವಾಗುವ ಸಾಧ್ಯತೆ ಇದೆ. ಭಾನುವಾರ ರಾತ್ರಿ ಸಿಬಿಐ ಅಧಿಕಾರಿಗಳ ತಂಡ ಕೋಲ್ಕೊತಾದಲ್ಲಿನ ರಾಜೀವ್‌ ಕುಮಾರ್‌ ನಿವಾಸದಲ್ಲಿ ಶೋಧ ನಡೆಸಿದೆ. ಶಾರದಾ ಚಿಟ್‌ಫಂಡ್‌ ಹಗರಣ ಸಂಬಂಧ ರಾಜ್ಯ ಸರಕಾರ ಆದೇಶಿಸಿದ್ದ ಎಸ್‌ಐಟಿ ತನಿಖೆ ನೇತೃತ್ವ ವಹಿಸಿದ್ದ ಕೋಲ್ಕೊತಾ ಪೊಲೀಸ್‌ ಆಯುಕ್ತರಾಗಿದ್ದ ರಾಜೀವ್‌ ವಿರುದ್ಧ ಸಾಕ್ಷ್ಯ ನಾಶ ಆರೋಪವನ್ನು ಸಿಬಿಐ ಹೊರಿಸಿದೆ.

ಈ ಎಲ್ಲ ಮಧ್ಯೆ, ಅನುಜ್‌ ಶರ್ಮಾ ಅವರನ್ನು ಕೋಲ್ಕೊತಾ ಪೊಲೀಸ್‌ ನೂತನ ಆಯುಕ್ತರನ್ನಾಗಿ ನೇಮಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಆಯೋಗದಿಂದ ಅಮಾನತುಗೊಂಡಿದ್ದ ಪೊಲೀಸ್‌ ಅಧಿಕಾರಿಗಳನ್ನು ಸಿಎಂ ಮಮತಾ ಬ್ಯಾನರ್ಜಿ ಅವರ ಹುದ್ದೆಗೆ ಮತ್ತೆ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ