ಆ್ಯಪ್ನಗರ

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸರವಣ ಭವನ ಮಾಲೀಕನಿಗೆ ತೀವ್ರ ಹೃದಯಾಘಾತ

ಕೊಲೆ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 'ದೋಸೆ ಕಿಂಗ್‌' ಖ್ಯಾತಿಯ ಹೋಟೆಲ್‌ ಉದ್ಯಮಿ ಪಿರಾಜಗೋಪಾಲ್‌ ಹೃದಯಾಘಾತಕ್ಕೆ ಒಳಗಾಗಿದ್ದು, ಸಾವು-ಬದುಕಿನ ಹೋರಾಟ ನಡೆಸಿದ್ದಾರೆ...

Vijaya Karnataka 16 Jul 2019, 8:46 am
ಚೆನ್ನೈ: ಕೊಲೆ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 'ದೋಸೆ ಕಿಂಗ್‌' ಖ್ಯಾತಿಯ ಹೋಟೆಲ್‌ ಉದ್ಯಮಿ ಪಿ.ರಾಜಗೋಪಾಲ್‌ ಹೃದಯಾಘಾತಕ್ಕೆ ಒಳಗಾಗಿದ್ದು, ಸಾವು-ಬದುಕಿನ ಹೋರಾಟ ನಡೆಸಿದ್ದಾರೆ.
Vijaya Karnataka Web sharavan bhavan


ತಮ್ಮ ಒಡೆತನದ ಸರವಣ ಭವನ ಹೋಟೆಲ್‌ನ ಕೆಲಸಗಾರನನ್ನು ಕೊಂದ ಪ್ರಕರಣದಲ್ಲಿ ಜುಲೈ 8ರಂದು ನ್ಯಾಯಾಧೀಶರ ಮುಂದೆ ಹಾಜರಾದ ವೇಳೆ 75 ವರ್ಷದ ರಾಜಗೋಪಾಲ್‌, ಸ್ಥಳದಲ್ಲಿಯೇ ಲಘು ಹೃದಯಾಘಾತಕ್ಕೆ ಒಳಗಾಗಿ ಅದೇ ದಿನ ಸ್ಟೇನ್ಲಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು.

ಅದಾಗಿ ಅನಾರೋಗ್ಯ ಕಾರಣ ನೀಡಿ ಶರಣಾಗತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಕಾಲಾವಕಾಶ ಕೇಳಿದ್ದರು. ಆದರೆ, ಕೋರ್ಟ್‌ ಅವರ ಅರ್ಜಿಯನ್ನು ತಳ್ಳಿಹಾಕಿತ್ತು. ಬಳಿಕ ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ನಲ್ಲಿಯೇ ಬಂದು ಶರಣಾಗಿದ್ದರು.

ಕಳೆದ ಶನಿವಾರ ಮತ್ತೊಮ್ಮೆ ಹೃದಯಾಘಾತಕ್ಕೆ ಒಳಗಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ