ಆ್ಯಪ್ನಗರ

ಮುಂದುವರಿದ ಪ್ರತಿಮೆ ವಿರೂಪ ಪ್ರವೃತ್ತಿ: ಸರ್ದಾರ ಪಟೇಲ್ ಪ್ರತಿಮೆಗೆ ಅಪಮಾನ

ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಮೆ ವಿರೂಪಗೊಳಿಸುವ ಕ್ರೂರ ಪ್ರವೃತ್ತಿ ಪ್ರಧಾನಿ ತವರೂರಾದ ಗುಜರಾತ್ ರಾಜ್ಯಕ್ಕೂ ತಲುಪಿದೆ.

THE TIMES OF INDIA NEWS SERVICE 22 Mar 2018, 1:09 pm
ಅಹಮದಾಬಾದ್: ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಮೆ ವಿರೂಪಗೊಳಿಸುವ ಕ್ರೂರ ಪ್ರವೃತ್ತಿ ಪ್ರಧಾನಿ ತವರೂರಾದ ಗುಜರಾತ್ ರಾಜ್ಯಕ್ಕೂ ತಲುಪಿದೆ. ಗಾಂಧಿನಗರದ ಶೆರ್ಥಾ ಗ್ರಾಮದ ಗಂಥಾಲಯ ಆವರಣದಲ್ಲಿರುವ ಭಾರತದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಖಾಲಿ ತಂಪು ಪಾನೀಯ ಬಾಟಲಿಗಳ ಹಾರ ಹಾಕಿ ಅವಮಾನಿಸಿದ ಘಟನೆ ಬುಧವಾರ ನಡೆದಿದೆ.
Vijaya Karnataka Web sardar patel statue garlanded with bottles in gandhinagar
ಮುಂದುವರಿದ ಪ್ರತಿಮೆ ವಿರೂಪ ಪ್ರವೃತ್ತಿ: ಸರ್ದಾರ ಪಟೇಲ್ ಪ್ರತಿಮೆಗೆ ಅಪಮಾನ


ಘಟನೆ ಸಂಬಂಧ ಅದಲಾಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಬಾಬರಿ ಮಸೀದಿ ಧ್ವಂಸಗೊಳ್ಳುವ ಎರಡು ತಿಂಗಳ ಮುಂಚೆ ಅಂದರೆ 1992 ಅಕ್ಟೋಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರು ಈ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ಪಟೇಲ್ ಪ್ರತಿಮೆಗೆ ಅವಮಾನ ಮಾಡಿರುವ ದೃಶ್ಯ ವೈರಲ್ ಆಗಿದೆ. ಗ್ರಾಮಸ್ಥರೇ ಪ್ರತಿಮೆ ಮೇಲೆ ಹಾಕಿರುವ ಖಾಲಿ ಪಾನೀಯ ಬಾಟಲಿಗಳ ಹಾರ ತೆಗೆದು ಶುಚಿಗೊಳಿಸಿದ್ದಾರೆ. ಬಳಿಕ ಗ್ರಂಥಾಲಯದ ವ್ಯವಸ್ಥಾಪಕ ಹಸ್ಮೂಕ್ ಪಟೇಲ್ ಅವರು ಅದಾಲಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ಗ್ರಂಥಾಲಯದ ಎದುರಿರುವ ಬ್ಯಾಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸುತ್ತೇವೆ' ಎಂದು ಅದಾಲಜ್ ಠಾಣೆಯ ಇನ್ಸ್‌ಪೆಕ್ಟರ್ ಜೆ.ಜಿ.ವಘೇಲಾ ಭರವಸೆ ನೀಡಿದ್ದಾರೆ.

ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಲೆನಿನ್ ಪ್ರತಿಮೆ ಉರುಳಿಸಲಾಗಿತ್ತು. ಇದಾದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಪ್ರತಿಮೆ ವಿರೂಪಗೊಳಿಸುವ ದುಷ್ಕೃತ್ಯ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ