ಹೊಸದಿಲ್ಲಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬದುಕು ವೆಬ್ ಸರಣಿಯಾಗಿ ಮೂಡಿಬರಲಿದೆ. ಹಿಂದೋಳ್ ಸೇನ್ ಗುಪ್ತಾ ಅವರು ಬರೆದಿರುವ 'ದ ಮ್ಯಾನ್ ಹೂ ಸೇವ್ಡ್ ಇಂಡಿಯಾ' ಎಂಬ ಪಟೇಲರ ಜೀವನಗಾಥೆಯನ್ನು ಅದೇ ಹೆಸರಿನಲ್ಲಿ ಮೆಗಾ ವೆಬ್ ಸರಣಿಯಾಗಿ ನಿರ್ಮಿಸಲಾಗುತ್ತಿದೆ ಎಂದು ಪೆಂಗ್ವಿನ್ ರಾರಯಂಡಮ್ ಹೌಸ್ ಇಂಡಿಯಾ ಸೋಮವಾರ ಪ್ರಕಟಿಸಿದೆ. ಜನಪ್ರಿಯ ಬಾಲಿವುಡ್ ಚಿತ್ರಗಳಾದ 'ಗ್ಯಾಂಗ್ಸ್ ಆಫ್ ವಾಸೇಪುರ್' ಮತ್ತು 'ತನು ವೆಡ್ಸ್ ಮನು'ವನ್ನು ನಿರ್ಮಿಸಿದ ಬೋಹ್ರಾ ಬ್ರದರ್ಸ್ ಮತ್ತು ಶೈಲೇಶ್ ಆರ್ ಸಿಂಗ್ ವೆಬ್ ಸೀರಿಸ್ ನಿರ್ಮಿಸಲಿದ್ದಾರೆ. ಗುಜರಾತ್ನಲ್ಲಿ ಹುಟ್ಟಿದ, ಹೆಚ್ಚು ಶಿಕ್ಷಣ ಪಡೆಯದ ಸಾಮಾನ್ಯ ಹುಡುಗನೊಬ್ಬ ಬ್ರಿಟನ್ನಲ್ಲಿ ಅತ್ಯಂತ ಕಠಿಣ ಕಾನೂನು ಅಧ್ಯಯನ ನಡೆಸಿದ್ದು, ಬಳಿಕ ಭಾರತದಲ್ಲಿ ಅತ್ಯುನ್ನತ ರಾಜಕಾರಣಿಯ ಪಟ್ಟಕ್ಕೆ ಏರಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಮತ್ತು ಮಹಾತ್ಮ ಗಾಂಧಿ ಅವರು 'ಸರ್ದಾರ್' ಎಂದು ಗೌರವಿಸಿದ ಕಥಾನಕಗಳು ಈ ವೆಬ್ ಸರಣಿಯಲ್ಲಿ ಮಹತ್ವ ಪಡೆಯಲಿವೆ.
ವೆಬ್ ಸರಣಿಯಾಗಿ ಬರಲಿದೆ ಸರ್ದಾರ್ ಪಟೇಲ್ ಬದುಕು
'ದ ಮ್ಯಾನ್ ಹೂ ಸೇವ್ಡ್ ಇಂಡಿಯಾ' ಎಂಬ ಪಟೇಲರ ಜೀವನಗಾಥೆಯನ್ನು ಅದೇ ಹೆಸರಿನಲ್ಲಿ ಮೆಗಾ ವೆಬ್ ಸರಣಿಯಾಗಿ ನಿರ್ಮಿಸಲಾಗುತ್ತಿದೆ ಎಂದು ಪೆಂಗ್ವಿನ್ ರಾರಯಂಡಮ್ ಹೌಸ್ ಇಂಡಿಯಾ ಸೋಮವಾರ ಪ್ರಕಟಿಸಿದೆ.
Vijaya Karnataka 12 Mar 2019, 5:00 am