ಆ್ಯಪ್ನಗರ

ಹುಟ್ಟು ಹಬ್ಬದ ದಿನ ಸರ್ದಾರ್‌ ಡ್ಯಾಮ್‌ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

1961, ಏಪ್ರಿಲ್‌ 5ರಂದು ಸರ್ದಾರ್‌ ಸರೋವರ ಅಣೆಕಟ್ಟೆ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಅಡಿಗಲ್ಲುನೆಟ್ಟಿದ್ದರು.

PTI 16 Sep 2019, 6:11 am
ಅಹಮದಾಬಾದ್‌: ಗುಜರಾತ್‌ನ ಸರ್ದಾರ್‌ ಸರೋವರ ಅಣೆಕಟ್ಟು ಇನ್ನು ಒಂದೆರಡು ದಿನಗಳಲ್ಲಿಭರ್ತಿಯಾಗುವ ನಿರೀಕ್ಷೆಯಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ.
Vijaya Karnataka Web sardar sarovar


ಪ್ರಥಮ ಬಾರಿ ಭರ್ತಿಯಾಗುತ್ತಿರುವ ಸರ್ದಾರ್‌ ಸರೋವರ ಅಣೆಕಟ್ಟೆಗೆ ಸೆ.17ರಂದು ಪ್ರಧಾನಿ ಮೋದಿ ಅವರು ಭೇಟಿ ನೀಡಲಿದ್ದಾರೆ. ಆ ದಿನ ಅವರ ಹುಟ್ಟುಹಬ್ಬವೂ ಹೌದು. ಗುಜರಾತ್‌ನ ಜೀವನಾಡಿ ಎಂದೇ ಪರಿಗಣಿಸಲ್ಪಟ್ಟಿರುವ ಈ ಅಣೆಕಟ್ಟು ಎತ್ತರ 138.68 ಅಡಿಗಳಾಗಿದ್ದು, ಭಾನುವಾರ ಸಂಜೆ ವೇಳೆಗೆ 138 ಅಡಿ ನೀರು ಸಂಗ್ರಹಗೊಂಡಿದೆ.

''ಸೆಪ್ಟೆಂಬರ್‌ 17ರಂದು ಪ್ರಧಾನಿ ಮೋದಿ ಅವರು ಅಣೆಕಟ್ಟೆಗೆ ಭೇಟಿ ನೀಡಿ ಅದರ ಪ್ರಥಮ ಪೂರ್ಣವೈಭವ ವೀಕ್ಷಿಸಲಿದ್ದಾರೆ. ಆ ದಿನ ಅವರ ಹುಟ್ಟುಹಬ್ಬವೂ ಆಗಿದ್ದು, ರಾಜ್ಯದ ಹುಮ್ಮಸ್ಸು ದುಪ್ಪಟ್ಟುಗೊಳ್ಳಲಿದೆ,'' ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ಹೇಳಿದ್ದಾರೆ.

1961, ಏಪ್ರಿಲ್‌ 5ರಂದು ಸರ್ದಾರ್‌ ಸರೋವರ ಅಣೆಕಟ್ಟೆ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಅಡಿಗಲ್ಲುನೆಟ್ಟಿದ್ದರು. ಅದಾಗಿ ಹಲವು ಅಡೆತಡೆಗಳಿಂದ ವಿಳಂಬಗೊಂಡಿದ್ದ ಕಾಮಗಾರಿ 56 ವರ್ಷಗಳ ಬಳಿಕ, 2017ರಲ್ಲಿಪೂರ್ಣಗೊಂಡಿತ್ತು. 2018ರಲ್ಲಿಮಳೆ ಕೊರತೆ ಕಾರಣ ಅಣೆಕಟ್ಟೆ ತುಂಬಿರಲಿಲ್ಲ. ಈ ವರ್ಷ ಸಮೃದ್ಧ ಮಳೆಯಿಂದ ಮೊದಲ ಬಾರಿ ಭರ್ತಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ