ಆ್ಯಪ್ನಗರ

ಸೌದಿ ಉದ್ಯೋಗ ನೀತಿ ಪರಿಷ್ಕರಣೆ: ಭಾರತೀಯರಿಗೆ ಸಂಕಷ್ಟ

ಸೌದಿ ಅರೇಬಿಯಾ ಸರಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀತಿ (ನಿತಾಕತ್‌)ಯನ್ನು ಪರಿಷ್ಕರಣೆಗೊಳಿಸಿದೆ.

Vijaya Karnataka Web 24 Aug 2017, 3:35 pm
ಮುಂಬಯಿ: ಸೌದಿ ಅರೇಬಿಯಾ ಸರಕಾರವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀತಿ (ನಿತಾಕತ್‌) ಯನ್ನು ಪರಿಷ್ಕರಣೆಗೊಳಿಸಿದೆ. ಈ ಮೂಲಕ ಸ್ಥಳೀಯರಿಗೆ ಇನ್ನಷ್ಟು ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿದೆ. ಇದರಿಂದ ಅಲ್ಲಿರುವ ಭಾರತೀಯ ವಲಸಿರಿಗೆ ತೀವ್ರ ಸಂಕಷ್ಟ ಎದುರಾಗಿದೆ.
Vijaya Karnataka Web saudi job scheme favouring locals to hit indians hard
ಸೌದಿ ಉದ್ಯೋಗ ನೀತಿ ಪರಿಷ್ಕರಣೆ: ಭಾರತೀಯರಿಗೆ ಸಂಕಷ್ಟ


ಸೆಪ್ಟೆಂಬರ್‌ನಿಂದ ಸೌದಿ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿರುವ ಮತ್ತು ಸೌದಿ ಪ್ರಜೆಗಳು ಉನ್ನತ ಹುದ್ದೆ ಹೊಂದಿರುವ ಕೆಲವೇ ಕೆಲವು ಕಂಪೆನಿಗಳ ವಲಸಿಗ ಉದ್ಯೋಗಿಗಳು ಮಾತ್ರ ಹೊಸ ವೀಸಾಗೆ ಅರ್ಜಿ ಸಲ್ಲಿಸಬಹುದಾಗಿದೆ.

2016ರಲ್ಲಿ ಸೌದಿಯಲ್ಲಿ 25 ಲಕ್ಷ ಭಾರತೀಯರು ಕೆಲಸ ಮಾಡುತ್ತಿದ್ದರು. ಇವರಲ್ಲಿ 1.65 ವಲಸಿಗರಿಗಷ್ಟೇ ಇಮಿಗ್ರೇಷನ್‌ ಕ್ಲಿಯರೆನ್ಸ್‌ ಸಿಕ್ಕಿತ್ತು. ಇದು 2015ಕ್ಕಿಂತ ಶೇ 46 ರಷ್ಟು ಕಡಿಮೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರಗಳವರೇ ಹೆಚ್ಚಿದ್ದು, ನಾಲ್ಕನೇ ಸ್ಥಾನದಲ್ಲಿ ಕೇರಳಿಗರಿದ್ದಾರೆ. ಹೈ ಗ್ರೀನ್‌ ಮತ್ತು ಪ್ಲಾಟಿನಂ ಶ್ರೇಣಿಯ ಸಂಸ್ಥೆಗಳು ಹೊಸ ವೀಸಾ ಅರ್ಜಿ ಸಲ್ಲಿಸಬಹುದಾಗಿದೆ.

ನಿರ್ಮಾಣ ಮತ್ತು ಆತಿಥ್ಯ ವಲಯದಲ್ಲಿ ಬ್ಲ್ಯೂ ಕಾಲರ್‌ ಉದ್ಯೋಗಿಗಳಾಗಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇವೆರಡೂ ಪ್ಲಾಟಿನಂ ಇಲ್ಲವೇ ಹೈ ಗ್ರೀನ್‌ ವಿಭಾಗದಲ್ಲಿ ಬರುವ ಸಾಧ್ಯತೆ ಇಲ್ಲ. ಮುಂದಿನ ದಿನಗಳಲ್ಲಿ ಈ ವಲಯದಲ್ಲಿ ಉದ್ಯೋಗಿಗಳ ಅಗತ್ಯ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸೌದಿ ಪ್ರಜೆಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ 2011ರಲ್ಲಿ ನಿಕಾಕತ್‌ ನೀತಿ ಜಾರಿಗೆ ಬಂದಿತ್ತು. ಆಗ ಉದ್ಯೋಗಿಗಳನ್ನು ಪ್ಲಾಟಿನಂ, ಹೈ ಗ್ರೀನ್‌, ಮೀಡಿಯಂ ಗ್ರೀನ್‌, ಲೋ ಗ್ರೀನ್‌, ಯೆಲ್ಲೊ, ರೆಡ್‌ ವಿಭಾಗಗಳು ಎಂದು ವರ್ಗೀಕರಿಸಲಾಗಿತ್ತು. ಪ್ಲಾಟಿನಂ ವಿಭಾಗದ ಸಂಸ್ಥೆಗಳಲ್ಲಿ ಶೇ 40 ಸೌದಿ ಪ್ರಜೆಗಳಿಗೆ ಉದ್ಯೋಗ ನೀಡಬೇಕು ಎಂದು ಉದ್ಯೋಗ ನೀತಿಯಲ್ಲಿ ಹೇಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ