ಆ್ಯಪ್ನಗರ

‘ಸ್ವಚ್ಛ ಭಾರತ್’ ಅಭಿಯಾನದಿಂದ ಪ್ರತಿ ಮನೆಗೆ ವಾರ್ಷಿಕ 53,000 ರೂಪಾಯಿ ಉಳಿತಾಯ; ಸಮೀಕ್ಷೆಯಿಂದ ಬಹಿರಂಗ..!

ಅಭಿಯಾನದ ಅಡಿಯಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಿದೆ. ಇದರ ಫಲವಾಗಿ ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಿವೆ. ಇದರಿಂದ ಆರೋಗ್ಯ ವೆಚ್ಚದ ಮೇಲೆ ಭಾರಿ ಉಳಿತಾಯವಾಗಿದೆ. ಜತೆಗೆ, ಮನೆಯಲ್ಲೇ ಶೌಚಾಲಯ ಇರುವುದರಿಂದ ಈ ಉದ್ದೇಶಕ್ಕಾಗಿ ಊರ ಹೊರಗೆ ಹೋಗಿ ಬರುತ್ತಿದ್ದ ಸಮಯವೂ ಉಳಿದಿದೆ ಎಂದು 'ಸ್ವಚ್ಛ ಭಾರತ ಮಿಷನ್‌-ಗ್ರಾಮೀಣ' ಹೆಸರಿನಲ್ಲಿ ನಡೆದ ಅಂತಾ­ರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ.

Vijaya Karnataka Web 25 Oct 2020, 6:49 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಸ್ವಚ್ಛ ಭಾರತ' ಅಭಿಯಾನದಿಂದ ದೇಶದ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೆ ವಾರ್ಷಿಕ 53 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ ಎನ್ನುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
Vijaya Karnataka Web swachh_bharat_mission


ಬಿಜೆಪಿಯ ಬಿಹಾರ ಚುನಾವಣಾ ಪ್ರಚಾರ ಉಸ್ತುವಾರಿ ದೇವೇಂದ್ರ ಫಡ್ನವೀಸ್‌ಗೆ ಕೊರೊನಾ

ಈ ಮೊತ್ತವು ಆರೋಗ್ಯದ ಮೇಲೆ ಮಾಡುತ್ತಿದ್ದ ವೆಚ್ಚದಲ್ಲಿನ ಇಳಿಕೆ, ಸಮಯದ ಉಳಿತಾಯ, ಆಸ್ತಿ ಮೌಲ್ಯ ವೃದ್ಧಿ, ಉಳಿ­ ತಾಯವಾದ ಹಣದಿಂದ ಹೂಡಿಕೆ ಮತ್ತಿತರ ಮಾರ್ಗಗಳ ಮೂಲಕ ಬಂದ ಆದಾಯ­ಗಳನ್ನು ಒಳ­ಗೊಂಡಿದೆ. ಅಭಿಯಾನದ ಅಡಿಯಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಿದೆ. ಇದರ ಫಲವಾಗಿ ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಿವೆ. ಇದರಿಂದ ಆರೋಗ್ಯ ವೆಚ್ಚದ ಮೇಲೆ ಭಾರಿ ಉಳಿತಾಯವಾಗಿದೆ. ಜತೆಗೆ, ಮನೆಯಲ್ಲೇ ಶೌಚಾಲಯ ಇರುವುದರಿಂದ ಈ ಉದ್ದೇಶಕ್ಕಾಗಿ ಊರ ಹೊರಗೆ ಹೋಗಿ ಬರುತ್ತಿದ್ದ ಸಮಯವೂ ಉಳಿದಿದೆ ಎಂದು 'ಸ್ವಚ್ಛ ಭಾರತ ಮಿಷನ್‌-ಗ್ರಾಮೀಣ' ಹೆಸರಿನಲ್ಲಿ ನಡೆದ ಅಂತಾ­ರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ.

ಹತ್ರಾಸ್ ಪ್ರಕರಣ: ಪಂಜಾಬ್‌, ರಾಜಸ್ಥಾನದಲ್ಲಿ ಹೀಗಾಗಿದ್ದರೆ ಹೋಗಿ ಹೋರಾಡುತ್ತಿದ್ದೆ- ರಾಹುಲ್‌ ಗಾಂಧಿ

'ಸೈನ್ಸ್‌ ಡೈರೆಕ್ಟ್ ಜರ್ನಲ್‌'ನ ಅಕ್ಟೋಬರ್‌ ಸಂಚಿಕೆಯಲ್ಲಿ ಸಮೀ­ಕ್ಷೆಯ ವಿವರಗಳು ಪ್ರಕಟವಾಗಿವೆ. ಸ್ವಚ್ಛ ಭಾರತ ಅಭಿ­ಯಾನದಿಂದ ಆಗಿರುವ ಆರ್ಥಿಕ ಲಾಭಗಳ ಕುರಿತು ನಡೆಸಿದ ಮೊದಲ ಸಮೀಕ್ಷೆಯೂ ಇದಾಗಿದೆ. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್‌, ಆಂಧ್ರಪ್ರದೇಶ, ಅಸ್ಸಾಂ ಸೇರಿದಂತೆ 12 ರಾಜ್ಯಗಳ 10,051 ಮನೆಗಳಲ್ಲಿ 2017ರ ಜುಲೈ 20ರಿಂದ ಆಗಸ್ಟ್‌ 11ರ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಹತ್ರಾಸ್‌ಗೆ ‘ಪಿಕ್‌ನಿಕ್’ ಹಮ್ಮಿಕೊಂಡಿದ್ದ ರಾಹುಲ್‌ ಗಾಂಧಿ ಪಂಜಾಬ್ ವಿಷಯದಲ್ಲಿ ಮೌನವೇಕೆ?; ನಿರ್ಮಲಾ ಸೀತಾರಾಮನ್

ಪ್ರಧಾನಿ ನರೇಂದ್ರ ಮೋದಿ ಅವರು ಬಯಲು ಬಹಿರ್ದೆಸೆ ಮುಕ್ತ ಭಾರತದ ಸಂಕಲ್ಪದೊಂದಿಗೆ 2014ರ ಅಕ್ಟೋಬರ್‌ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 2019ರ ಅ.2ರಂದು ದೇಶದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಿದೆ ಎಂದು ಸರಕಾರ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ