ಆ್ಯಪ್ನಗರ

ಮಕ್ಕಳ ಮಾರಣಹೋಮ: ಕೇಂದ್ರ, ರಾಜ್ಯ ಸರಕಾರಗಳಿಗೆ ಸುಪ್ರೀಂ ನೋಟಿಸ್‌

ಬಿಹಾರದಲ್ಲಿ ಮೆದುಳು ಜ್ವರದ ಹಾವಳಿಯಿಂದ ಸಂಭವಿಸಿದ ನೂರಾರು ಮಕ್ಕಳ ಸಾವಿನ ಕುರಿತು ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

PTI 25 Jun 2019, 5:00 am
ಹೊಸದಿಲ್ಲಿ: ಬಿಹಾರದಲ್ಲಿ ಮೆದುಳು ಜ್ವರದ ಹಾವಳಿಯಿಂದ ಸಂಭವಿಸಿದ ನೂರಾರು ಮಕ್ಕಳ ಸಾವಿನ ಕುರಿತು ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಏಳು ದಿನಗಳ ಒಳಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ, ಬಿಹಾರ ಹಾಗೂ ಉತ್ತರ ಪ್ರದೇಶ ಸರಕಾರಗಳಿಗೆ ತಾಕೀತು ಮಾಡಿದೆ.
Vijaya Karnataka Web encephalytis


ಬಿಹಾರದ ಮುಜಪ್ಫರ್‌ಪುರದಲ್ಲಿ ಮಕ್ಕಳ ಸಾವು ತಡೆಗಟ್ಟಲು ಬೇಕಾದ ವೈದ್ಯರಾಗಲಿ, ಔಷಧಗಳಾಗಲಿ, ತುರ್ತು ನಿಗಾ ಘಟಕಗಳಾಗಲಿ ಇಲ್ಲ. ಹಾಸಿಗೆಗಳ ಕೊರತೆ, ತುರ್ತು ನಿಗಾ ಘಟಕಗಳ ಕೊರತೆ ಭೀಕರವಾಗಿದ್ದುದ್ದೇ ಸೋಂಕು ಉಲ್ಬಣಿಸಲು ಕಾರಣ ಎನ್ನುವ ದೂರನ್ನು ಪೀಠ ಗಂಭೀರವಾಗಿ ಪರಿಗಣಿಸಿತು. ಸೋಂಕು ತಡೆಗಟ್ಟಲು ಸರಕಾರ ಕೈಗೊಂಡ ಕ್ರಮಗಳೇನು ಎನ್ನುವ ಕುರಿತು ವಿವರ ನೀಡಿ ಎಂದು ಸರಕಾರಕ್ಕೆ ಆದೇಶ ನೀಡಿತು. ಈ ವೇಳೆ, ಬಿಹಾರ ಸರಕಾರದ ಪರ ವಕೀಲರು ಸಮಜಾಯಿಷಿ ನೀಡಲು ಪ್ರಯತ್ನಿಸಿದರಾದರೂ ಅದನ್ನು ಪರಿಗಣಿಸದ ನ್ಯಾಯಪೀಠ, ಈ ಪ್ರಕರಣದಲ್ಲಿ ಬಡ ಕುಟುಂಬಗಳ ಮಕ್ಕಳೇ ಹೆಚ್ಚಾಗಿ ಮೃತಪಟ್ಟಿದ್ದಾರೆ. ಅದಕ್ಕೆ ಹಸಿವೂ ಕಾರಣ ಇರಬಹುದು. ಈ ದಿಸೆಯಲ್ಲಿ ಪೌಷ್ಠಿಕಾಂಶ, ಆರೋಗ್ಯ ಹಾಗೂ ಸ್ವಚ್ಛತೆ ವಿಷಯಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿ ಎಂದು ಆದೇಶಿಸಿತು.

ಬಿಹಾರ ಮತ್ತು ಉತ್ತರ ಪ್ರದೇಶ ಎರಡೂ ರಾಜ್ಯಗಳಲ್ಲಿ ಮೆದುಳು ಜ್ವರಕ್ಕೆ ಪ್ರತಿ ವರ್ಷ ಸಾವಿರಾರು ಮಕ್ಕಳು ಬಲಿಯಾಗುತ್ತಿದ್ದಾರೆ. ಆದರೂ ಕೇಂದ್ರ ಸರಕಾರವಾಗಲಿ, ಸಂಬಂಧಪಟ್ಟ ರಾಜ್ಯ ಸರಕಾರಗಳಾಗಲಿ ಸೋಂಕು ನಿಯಂತ್ರಣಕ್ಕೆ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ