ಆ್ಯಪ್ನಗರ

ಸಿಗರೇಟ್‌ ಎಚ್ಚರಿಕೆ: ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಬಲ

ಕೇಂದ್ರದ ತಿದ್ದುಪಡಿ ನಿಯಮ ಕಾನೂನುಬಾಹಿರ ಎಂದಿದ್ದ ಕರ್ನಾಟಕ ಉಚ್ಚ ನ್ಯಾಯಾಲಯ ಹೊಸದಿಲ್ಲಿ/ಬೆಂಗಳೂರು ಸಿಗರೇಟು, ಬೀಡಿ ಸೇರಿದಂತೆ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಪ್ಯಾಕ್‌ನ ...

Agencies 22 Dec 2017, 10:03 pm

ಹೊಸದಿಲ್ಲಿ/ಬೆಂಗಳೂರು: ಸಿಗರೇಟು, ಬೀಡಿ ಸೇರಿದಂತೆ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಪ್ಯಾಕ್‌ನ ಎರಡೂ ಬದಿಯಲ್ಲಿ ಶೇಕಡ 85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶ ಕಡ್ಡಾಯವಾಗಿ ಮುದ್ರಿಸಬೇಕೆಂಬ ಕೇಂದ್ರದ ತಿದ್ದುಪಡಿ ನಿಯಮ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್‌ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

Vijaya Karnataka Web sc declines interim orders on pictorial warnings on cigarette packets
ಸಿಗರೇಟ್‌ ಎಚ್ಚರಿಕೆ: ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಬಲ


ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅವರನ್ನೊಳಗೊಂಡ ಪೀಠವು, ಮುಂದಿನ ವಿಚಾರಣೆಯನ್ನು 2018ರ ಜನವರಿ 8ಕ್ಕೆ ನಿಗದಿಪಡಿಸಿತು. ಜತೆಗೆ ತೀರ್ಪನ್ನು ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡುವಂತೆ ಹೈಕೋರ್ಟ್‌ಗೆ ಸೂಚಿಸಿತು.

ಪ್ಯಾಕ್‌ ಮೇಲೆ ಶೇಕಡಾ 85ರಷ್ಟು ಭಾಗದಲ್ಲಿ ಚಿತ್ರ ರೂಪದ ಎಚ್ಚರಿಕೆಯ ಸೂಚನೆ ಮುದ್ರಿಸುವುದನ್ನು ಕಡ್ಡಾಯಗೊಳಿಸುವ 2014ರ ತಿದ್ದುಪಡಿಯನ್ನು ಹೈಕೋರ್ಟ್‌ ಡಿಸೆಂಬರ್‌ 15ರಂದು ರದ್ದುಪಡಿಸಿತ್ತು. ಈ ನಿಯಮ ಸಂವಿಧಾನಬಾಹಿರ ಎಂದು ನ್ಯಾ. ಬಿ.ಎಸ್‌.ಪಾಟೀಲ್‌ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಶೇಷ ವಿಭಾಗೀಯ ಪೀಠ ಹೇಳಿತ್ತು. ಈ ತೀರ್ಪಿನ ವಿರುದ್ಧ ಹೆಲ್ತ್‌ ಫಾರ್‌ ಮಿಲಿಯನ್ಸ್‌ ಎನ್‌ಜಿಒ ಸೇರಿದಂತೆ ಹಲವು ಸಂಸ್ಥೆಗಳು ದಾವೆಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ರಾಜ್ಯ ಹೈಕೋರ್ಟ್‌ 2014ರ ತಿದ್ದುಪಡಿಯನ್ನು ತಳ್ಳಿ ಹಾಕಿದರೂ, 2008ರಲ್ಲಿ ಜಾರಿಗೊಳಿಸಿದ್ದ ತಂಬಾಕು ಉತ್ಪನ್ನಗಳ ಪ್ಯಾಕೇಟ್‌ನ ಒಂದು ಬದಿಯಲ್ಲಿ ಶೇ.40ರಷ್ಟು ಚಿತ್ರ ಸಹಿತ ಎಚ್ಚರಿಕೆ ಸಂದೇಶ ಇರಬೇಕು ಎಂಬ ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ