ಆ್ಯಪ್ನಗರ

ಸುಪ್ರೀಂ ಆದೇಶಕ್ಕೆ ದೀದಿಗಿರಿ ಅಂತ್ಯ

ರಾಜೀವ್‌ ಕುಮಾರ್‌ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್‌ ಸಿಬಿಐಗೆ ಸೂಚನೆ ನೀಡಿದೆಯಾದರೂ, ಶಾರದಾ ಚಿಟ್‌ ಫಂಡ್‌ ಕೇಸಿನ ವಿಚಾರಣೆಗೆ ಹಾಜರಾಗುವುದನ್ನು ರಾಜೀವ್‌ಗೆ ಕಡ್ಡಾಯಗೊಳಿಸಿದೆ.

Vijaya Karnataka 6 Feb 2019, 5:00 am
ಕೋಲ್ಕೊತಾ: ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರಕಾರದ ನಡುವೆ ಭುಗಿಲೆದ್ದಿದ್ದ 'ಸಿಬಿಐ ಸಂಘರ್ಷ' ಮಂಗಳವಾರ ಸುಪ್ರೀಂಕೋರ್ಟ್‌ ಆದೇಶದ ಬಳಿಕ ತಣ್ಣಗಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಧರಣಿಯನ್ನೂ ಅಂತ್ಯಗೊಳಿಸಿದ್ದಾರೆ.
Vijaya Karnataka Web mamata


ಆದರೆ, ಸುಪ್ರೀಂಕೋರ್ಟ್‌ನ ಆದೇಶ ವಿವಾದದ ಕೇಂದ್ರ ಬಿಂದುವಾಗಿರುವ ಕೋಲ್ಕೊತಾ ಪೊಲೀಸ್‌ ಕಮೀಷನರ್‌ ರಾಜೀವ್‌ ಕುಮಾರ್‌ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಖಚಿತವಾಗಿದೆ. ರಾಜೀವ್‌ ಕುಮಾರ್‌ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್‌ ಸಿಬಿಐಗೆ ಸೂಚನೆ ನೀಡಿದೆಯಾದರೂ, ಶಾರದಾ ಚಿಟ್‌ ಫಂಡ್‌ ಕೇಸಿನ ವಿಚಾರಣೆಗೆ ಹಾಜರಾಗುವುದನ್ನು ರಾಜೀವ್‌ಗೆ ಕಡ್ಡಾಯಗೊಳಿಸಿದೆ.

ಹೀಗಾಗಿ, ಕಳೆದ ಕೆಲವು ತಿಂಗಳುಗಳಿಂದ ನಾನಾ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದ ಆಯುಕ್ತರು ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಲಿದೆ. ಅದಕ್ಕಿಂತಲೂ ಮುಖ್ಯವಾಗಿ ಪಶ್ಚಿಮ ಬಂಗಾಳದ ಹೊರಗಡೆ ತಟಸ್ಥ ಸ್ಥಳವಾದ ಶಿಲ್ಲಾಂಗ್‌ನಲ್ಲಿ ಪ್ರತ್ಯೇಕ ವಿಚಾರಣೆಗೆ ಸುಪ್ರೀಂಕೋರ್ಟ್‌ ಸೂಚಿಸಿರುವುದು ರಾಜೀವ್‌ಗೆ ಹಿನ್ನಡೆಯಾಗಿದೆ.

ನಮ್ಮದೇ ಗೆಲುವು: ಬಿಜೆಪಿ, ಮಮತಾ

ಸುಪ್ರೀಂಕೋರ್ಟ್‌ ಆದೇಶ ಪ್ರಜಾಸತ್ತಾತ್ಮಕ ಮೌಲ್ಯಗಳ ಗೆಲುವು, ನಮ್ಮ ನೈತಿಕ ವಿಜಯ ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದರೆ, ಪೊಲೀಸ್‌ ಆಯುಕ್ತರ ವಿಚಾರಣೆಗೆ ಅವಕಾಶ ನೀಡಿರುವುದು ಸಿಬಿಐನ ಗೆಲುವು ಎಂದು ಬಿಜೆಪಿಯ ರವಿಶಂಕರ್‌ ಪ್ರಸಾದ್‌ ಹೇಳಿಕೊಂಡಿದ್ದಾರೆ.


ಸೇವಾ ನಿಯಮ ಉಲ್ಲಂಘನೆ ಆರೋಪ

ರಾಜೀವ್‌ ಕುಮಾರ್‌ ಅವರು ಸಿಎಂ ಜತೆ ಧರಣಿ ಕುಳಿತಿರುವುದು ಸೇರಿದಂತೆ ಹಲವು ನೆಲೆಗಳಲ್ಲಿ ಐಪಿಎಸ್‌ ಸೇವಾ ನಿಯಮಗಳ ಉಲ್ಲಂಘನೆಯಾಗಿದ್ದು, ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಕೇಂದ್ರ ಗೃಹ ಇಲಾಖೆ ಪ.ಬಂಗಾಳ ಸರಕಾರಕ್ಕೆ ಆದೇಶ ನೀಡಿದೆ.


ಏನೇನಾಯಿತು?


- ಪೊಲೀಸ್‌ ಆಯುಕ್ತರ ಬಂಧನಕ್ಕೆ ಸುಪ್ರೀಂಕೋರ್ಟ್‌ ನಿರ್ಬಂಧ, ಸಿಬಿಐ ವಿಚಾರಣೆಗೆ ಹಾಜರಾಗಲು ಆದೇಶ

- ಸುಪ್ರೀಂ ತೀರ್ಪು ತಮ್ಮದೇ ಗೆಲುವೆಂದು ಸಂಭ್ರಮವಿಸಿದ ಬಿಜೆಪಿ, ಟಿಎಂಸಿ

- ಮಮತಾಗೆ ಶಿವಸೇನೆ, ಚಂದ್ರಬಾಬು ನಾಯ್ಡು ಬೆಂಬಲ

- ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ, ಕಲಾಪ ಮುಂದೂಡಿಕೆ

- ಮಿತ್ರರ ಜತೆ ಚರ್ಚಿಸಿ ಧರಣಿ ಅಂತ್ಯಗೊಳಿಸಿದ ಮಮತಾ



ಮಮತಾಗೆ ಸವಾಲ್‌: ರಸ್ತೆ ಮಾರ್ಗವಾಗಿ


ಪುರುಲಿಯಾ ರಾರ‍ಯಲಿಗೆ ಹೋದ ಯೋಗಿ

ಕಳೆದ ಭಾನುವಾರ ಹೆಲಿಕಾಪ್ಟರ್‌ ಇಳಿಸಲು ಅವಕಾಶ ನಿರಾಕರಿಸುವ ಮೂಲಕ ಯೋಗಿ ಆದಿತ್ಯನಾಥ್‌ ಅವರು ರಾರ‍ಯಲಿಯಲ್ಲಿ ಭಾಗವಹಿಸದಂತೆ ಮಾಡಿದ್ದ ಮಮತಾ ಸರಕಾರದ ತಂತ್ರ ಈ ಬಾರಿ ಫಲಿಸಲಿಲ್ಲ! ಯೋಗಿ ಅವರು ಬಿಜೆಪಿ ಆಡಳಿತವಿರುವ ಜಾರ್ಖಂಡ್‌ನ ಬೊಕಾರೋದವರೆಗೆ ವಿಮಾನದಲ್ಲಿ ಬಂದು ಅಲ್ಲಿಂದ 50 ಕಿ.ಮೀ. ದೂರ ರಸ್ತೆ ಮಾರ್ಗವಾಗಿ ಪ್ರಯಾಣಿಸಿ ಪುರುಲಿಯಾದ ರಾರ‍ಯಲಿ ಸ್ಥಳ ತಲುಪಿ ಸೆಡ್ಡು ಹೊಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ