ಆ್ಯಪ್ನಗರ

ಅತೃಪ್ತರ ರಾಜೀನಾಮೆ; ಸುಪ್ರೀಂ ತೀರ್ಪು ಅತೃಪ್ತರಿಗೆ ಸಿಕ್ಕ ನ್ಯಾಯಾಂಗ ರಕ್ಷಣೆಯಂತೆ!

ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪಿಗೆ ಕಾಂಗ್ರೆಸ್‌ ತನ್ನ ಅಸಮಾಧಾನ ಹೊರಹಾಕಿದೆ. ಇದು ಅತೃಪ್ತರಿಗೆ ಕೋರ್ಟ್‌ ನೀಡಿದ ನ್ಯಾಯಾಂಗ ರಕ್ಷಣೆ ಎಂದು ಬಣ್ಣಿಸಿದೆ. ರಣದೀಪ್ ಸುರ್ಜೇವಾಲ ಹಾಗೂ ದಿನೇಶ್‌ ಗುಂಡೂರಾವ್‌ ಈ ಸಂಬಂಧ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

THE ECONOMIC TIMES 17 Jul 2019, 5:05 pm
[This story originally published in Economic Times on July 17,2019]
Vijaya Karnataka Web SC


ಹೊಸದಿಲ್ಲಿ: ಅತೃಪ್ತ ಶಾಸಕರನ್ನು ವಿಪ್‌ನಲ್ಲಿ ಕೂಡಿ ಹಾಕಲಾಗದು ಎಂಬ ಸುಪ್ರೀಂ ಕೋರ್ಟ್‌ ತೀರ್ಪಿಗೆ ಕಾಂಗ್ರೆಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಹೇಳುವ ಮೂಲಕ ಅತೃಪ್ತ ಶಾಸಕರಿಗೆ ನ್ಯಾಯಾಂಗದ ರಕ್ಷಣೆ ನೀಡಿದಂತಾಗಿದೆ ಎಂದು ಕಾಂಗ್ರೆಸ್‌ ಅಸಮಾಧಾನ ಹೊರಹಾಕಿದೆ.
15 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಕುರಿತ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗಯ್‌ ಅವರಿದ್ದ ಪೀಠ ಆದೇಶ ನೀಡಿತ್ತು. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ನಿಗದಿ ಕಾಲಮಿತಿಯೊಳಗಿ ರಾಜೀನಾಮೆ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸುವಂತೆ ನಿರ್ದೇಶನ ನೀಡಿದರು.

ಅತೃಪ್ತ ಶಾಸಕರಿಗೆ ವಿಪ್‌ ಉಲ್ಲಂಘನೆ ಜಾರಿ ಮಾಡುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡುವ ಮೂಲಕ ನ್ಯಾಯಾಂಗ ಈಗ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಟ್ವೀಟ್‌ ಮಾಡಿದ್ದಾರೆ. ಅಂತೆಯೇ ಅತೃಪ್ತ ಶಾಸಕರಿಗೆ ನ್ಯಾಯಾಂಗದ ರಕ್ಷಣಾ ಕವಚ ಸಿಕ್ಕಿದಂತಾಗಿದೆ ಎಂದು ರಾಜ್ಯ ಕಾಂಗ್ರೆಸ್‌ನ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

2016 ಮೇ ನಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ ಸರಕಾರ ರಚನೆಯ ಪ್ರಯತ್ನದ ವೇಳೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಸರ್ವೋಚ್ಛ ನ್ಯಾಯಾಲಯ ಈ ಬಗ್ಗೆ ಗಮನ ನೀಡಬೇಕಿದೆ ಎಂದು ಸುರ್ಜೇವಾಲ ಮನವಿ ಮಾಡಿದರು.

ನ್ಯಾಯಾಲಯ ಶಾಸಕಾಂಗದ ವಿಪ್‌ ಕುರಿತು ಮಧ್ಯಪ್ರವೇಶಿಸಬಹುದು ಎಂದಾಗಿದೆ. ಅಧಿಕಾರ ರಚನೆಯ ಮೂಲ ಸಿದ್ಧಾಂತವೇ ಕಳಚಿಕೊಂಡಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಐದು ವರ್ಷದ ಮೋದಿ ಆಡಳಿತದ ಅವಧಿಯಲ್ಲಿ ಪಕ್ಷಾಂತರವಾಗುವ ಅನೇಕ ಇತಿಹಾಸವನ್ನು ಸುಪ್ರೀಂ ಕೋರ್ಟ್‌ ಗಮನಿಸಿಯೇ ಇಲ್ಲ ಎಂದು ಸುರ್ಜೇವಾಲ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ