ಆ್ಯಪ್ನಗರ

ಮಂದಿರ ವಿವಾದ: ಡಿ.5ರಿಂದ ಅಂತಿಮ ವಿಚಾರಣೆ

ರಾಮ ಜನ್ಮಭೂಮಿ -ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆಯನ್ನು ಡಿಸೆಂಬರ್‌ 5ರಿಂದ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ...

ಎಕನಾಮಿಕ್ ಟೈಮ್ಸ್ 11 Aug 2017, 9:38 pm

ಹೊಸದಿಲ್ಲಿ: ರಾಮ ಜನ್ಮಭೂಮಿ -ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆಯನ್ನು ಡಿಸೆಂಬರ್‌ 5ರಿಂದ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ಇದೇ ವೇಳೆ ಕೋರ್ಟ್‌, ಯಾವುದೇ ಸನ್ನಿವೇಶದಲ್ಲೂ ವಿಚಾರಣೆಯನ್ನು ಮತ್ತೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

ವಿವಾದಿತ 2.77 ಎಕರೆ ಜಾಗವನ್ನು ಸುನ್ನಿ ವಕ್ಫ್ ಬೋರ್ಡ್‌, ನಿರ್ಮೋಹಿ ಅಖಾರಾ ಮತ್ತು ರಾಮಲಲ್ಲಾ ನಡುವೆ ಸಮನಾಗಿ ಹಂಚಿಕೊಳ್ಳುವಂತೆ ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ 13 ಮೇಲ್ಮನವಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ವಿಶೇಷ ತ್ರಿ ಸದಸ್ಯ ನ್ಯಾಯಪೀಠವು, ದಾಖಲೆಗಳ ಭಾಷಾಂತರಕ್ಕೆ 12 ವಾರಗಳ ಸಮಯಾವಕಾಶ ನೀಡಿ ಅಂತಿಮ ವಿಚಾರಣೆಯನ್ನು ಡಿ.5ರಿಂದ ಆರಂಭಿಸುವುದಾಗಿ ಹೇಳಿದೆ.

ಸಮಯಾವಕಾಶ: ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಐತಿಹಾಸಿಕ ದಾಖಲೆಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿಕೊಡಲು ನ್ಯಾಯಪೀಠವು ಅರ್ಜಿದಾರ ಸಂಸ್ಥೆಗಳಿಗೆ 12 ವಾರಗಳ ಕಾಲಾವಕಾಶ ನೀಡಿದೆ. ಸುಮಾರು 90 ಸಾವಿರ ಪುಟಗಳಷ್ಟು ದಾಖಲೆಗಳಿದ್ದು ಅವೆಲ್ಲವೂ ಪರ್ಶಿಯಾ, ಅರಬ್‌, ಸಂಸ್ಕೃತ ಸೇರಿದಂತೆ 8 ಭಾಷೆಗಳಲ್ಲಿವೆ. ಭಾಷಾಂತರ ಕಾರ್ಯ ಯಾವುದೇ ಕಾರಣಕ್ಕೂ ವಿಳಂಬವಾಗುವಂತಿಲ್ಲ. ಅವೆಲ್ಲವನ್ನೂ ಪುರಾವೆಗಳನ್ನಾಗಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಈ ಪ್ರಕರಣದಲ್ಲಿ ರಾಮಲಲ್ಲಾ, ನಿರ್ಮೋಹಿ ಅಖಾರಾ ಮತ್ತು ಸುನ್ನಿ ವಕ್ಫ್ ಬೋರ್ಡ್‌ಅನ್ನು ಪ್ರಮುಖ ಅರ್ಜಿದಾರರೆಂದು ಪರಿಗಣಿಸಲಾಗಿದೆ. ಶುಕ್ರವಾರದ ವಿಚಾರಣೆಯಲ್ಲಿ ರಾಮ ಲಲ್ಲಾ ಪರ ವಕೀಲ ಸಿ.ಎಸ್‌.ವೈದ್ಯನಾಥನ್‌, ಉತ್ತರ ಪ್ರದೇಶ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ಇನ್ನುಳಿದ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌, ಅನೂಪ್‌ ಜಾರ್ಜ್‌ ಚೌಧರಿ, ರಾಜೀವ್‌ ಧವನ್‌ ವಾದ ಮಂಡಿಸಿ ತುರ್ತು ವಿಚಾರಣೆಗೆ ಆಕ್ಷೇಪ ವ್ಯಕ್ತಪಡಿಸಿ ಕಾಲಾವಕಾಶ ಕೋರಿದ್ದರು.

SC postpones Ayodhya title dispute case hearing to December
Vijaya Karnataka Web sc postpones ayodhya title dispute case hearing to december 5
ಮಂದಿರ ವಿವಾದ: ಡಿ.5ರಿಂದ ಅಂತಿಮ ವಿಚಾರಣೆ


The Supreme Court on Friday postponed hearing on the Ayodhya Ram Janambhoomi-Babri Masjid dispute to December 5. A bench led by Justice Dipak Misra set the new date for the hearing to have the original judgement and documents, running into 100 volumes, translated into English by the Uttar Pradesh government.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ