ಆ್ಯಪ್ನಗರ

ಚಿಟ್‌ ಫಂಡ್‌ ತನಿಖೆ ನಿಗಾಕ್ಕೆ ಸುಪ್ರೀಂ ನಕಾರ

ತನಿಖೆಯ ನಿಗಾ ವಹಿಸಲು ಸಮಿತಿಯೊಂದನ್ನು ರಚನೆ ಮಾಡುವುದು ಸಾಧ್ಯವೇ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಒಳಗೊಂಡ ಪೀಠ ಸ್ಪಷ್ಟಪಡಿಸಿತು.

Vijaya Karnataka 12 Feb 2019, 5:00 am
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಚಿಟ್‌ಫಂಡ್‌ ಹಗರಣದ ತನಿಖೆಯ ನಿಗಾ ವಹಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Vijaya Karnataka Web SC1-kmWE--621x414@LiveMint-1ec5


ಈ ಕುರಿತು ಕೆಲವು ಹೂಡಿಕೆದಾರರು ಸಲ್ಲಿಸಿದ್ದ ಅರ್ಜಿ ತಿಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಒಳಗೊಂಡ ಪೀಠ, ''ತನಿಖೆಯ ನಿಗಾ ವಹಿಸಲು ಸಮಿತಿಯೊಂದನ್ನು ರಚನೆ ಮಾಡುವುದು ಸಾಧ್ಯವೇ ಇಲ್ಲ,'' ಎಂದು ಸ್ಪಷ್ಟಪಡಿಸಿತು.

ಬಂಗಾಳ ಸೇರಿದಂತೆ ಹಲವು ರಾಜ್ಯಗಳ ಹೂಡಿಕೆದಾರರನ್ನು ವಂಚಿಸಿದ ಬಹುಕೋಟಿ ರೂ. ಹಗರಣ ಕುರಿತ ತನಿಖೆಯನ್ನು ಸುಪ್ರೀಂ ಕೋರ್ಟ್‌ 2013ರಲ್ಲಿ ಸಿಬಿಐಗೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಎಸ್‌ಐಟಿ ಮುಖ್ಯಸ್ಥರಾಗಿದ್ದ ಕೋಲ್ಕೊತಾ ಪೊಲೀಸ್‌ ಆಯುಕ್ತ ರಾಜೀವ್‌ಕುಮಾರ್‌ ಅವರ ವಿಚಾರಣೆಗೆ ತಡೆ ಒಡ್ಡಿದ ಪ್ರಕರಣದಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಆರೋಪಕ್ಕೆ ಫೆ.18ರೊಳಗೆ ಉತ್ತರ ನೀಡುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಕೋಲ್ಕೊತಾ ಪೊಲೀಸ್‌ ಆಯುಕ್ತರಿಗೆ ಕೋರ್ಟ್‌ ಸೂಚನೆ ನೀಡಿದೆ.

ಮೂರನೇ ದಿನವೂ ವಿಚಾರಣೆ
ಶಾರದಾ ಚಿಟ್‌ಫಂಡ್‌ ಹಗರಣದ ರಾಜೀವ್‌ ಕುಮಾರ್‌ ಮತ್ತು ತೃಣಮೂಲ ಕಾಂಗ್ರೆಸ್‌ ಮಾಜಿ ಸಂಸದ ಕುನಾಲ್‌ ಘೋಷ್‌ ಅವರು ಸೋಮವಾರ ಸಿಬಿಐ ಮುಂದೆ ಹಾಜರಾಗಿ ಮತ್ತೊಂದು ಸುತ್ತಿನ ವಿಚಾರಣೆ ಎದುರಿಸಿದರು. ಪೊಲೀಸ್‌ ಆಯುಕ್ತ ಕುಮಾರ್‌ ವಿಚಾರಣೆ ಸತತ ಮೂರನೇ ದಿನ ಹಾಗೂ ಘೋಷ್‌ ವಿಚಾರಣೆ ಸತತ ಎರಡನೇ ದಿನ ನಡೆದಂತಾಗಿದೆ. ಕುಮಾರ್‌ ಅವರು ಬೆಳಗ್ಗೆ 10 ಗಂಟೆಗೆ ಇಲ್ಲಿನ ಸಿಬಿಐ ಕಚೇರಿಗೆ ಹಾಜರಾದರು. ಮೊದಲು ಕುಮಾರ್‌ ಅವರ ಪ್ರತ್ಯೇಕ ವಿಚಾರಣೆ ನಡೆಸಿದ ಅಧಿಕಾರಿಗಳು, ಬಳಿಕ ಇಬ್ಬರನ್ನು ಮುಖಾಮುಖಿ ಮಾಡಿ ಮಾಹಿತಿ ಪಡೆದರು. ಒಟ್ಟು ಒಂಬತ್ತು ತಾಸುಗಳ ವಿಚಾರಣೆ ನಡೆಯಿತು.

ಧರಣಿಗೆ ಅನುಮತಿ ಕೇಳಿದ ಬಿಜೆಪಿ
ಕೋಲ್ಕೊತಾ: ಪೊಲೀಸ್‌ ಆಯುಕ್ತರ ಸಿಬಿಐ ವಿಚಾರಣೆ ಖಂಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದ ಸ್ಥಳದಲ್ಲಿಯೇ ಈಗ ಬಿಜೆಪಿಯೂ ಧರಣಿ ನಡೆಸಲು ನಿರ್ಧರಿಸಿದ್ದು, ಅನುಮತಿಗಾಗಿ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿದೆ. ನಗರದ ಹೃದಯ ಭಾಗ ಮೆಟ್ರೋ ಚಾನೆಲ್‌ನಲ್ಲಿ ಫೆ.21ರಿಂದ 23ರವರೆಗೆ ಮಮತಾ ಧರಣಿ ನಡೆಸಿದ್ದರು. ಇದೇ ಸ್ಥಳದಲ್ಲಿ ಈ ಮಾಸಂತ್ಯದಲ್ಲಿ ಬಿಜೆಪಿ 'ಪ್ರಜಾಪ್ರಭುತ್ವ ಉಳಿಸಿ' ಹೆಸರಿನಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದು, ಅನುಮತಿ ಕೋರಿ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ