ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ದೇಶದ 350ಕ್ಕೂ ಅಧಿಕ ಗಣಿಗಳ ಪರವಾನಗಿ ನವೀಕರಣದ ಹಿಂದೆ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಗೆ ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಯಾವುದೇ ರೀತಿಯ ಮೌಲ್ಯಮಾಪನ ,ಪರಿಶೀಲನೆ ನಡೆಸಲಾಗಿಲ್ಲ. ತಮ್ಮ ಪಕ್ಷಕ್ಕೆ ಗಣಿ ಮಾಲೀಕರು ಕೊಡುವ ದೇಣಿಗೆ ಆಧರಿಸಿ ಪರವಾನಗಿಯನ್ನು ನವೀಕರಿಸಿ ಕೊಡಲಾಗಿದೆ ಎಂದು ಹಿರಿಯ ವಕೀಲ ಎಂ.ಎಲ್. ಶರ್ಮಾ ಸುಪ್ರೀಂನಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾ. ಎಸ್.ಎ.ಬೊಬ್ಡೆ ಹಾಗೂ ನ್ಯಾ. ಬಿ. ಆರ್.ಗವಾಯಿ ಅವರಿದ್ದ ನ್ಯಾಯಪೀಠವು, ''ಪ್ರಕರಣದ ವಿಚಾರಣೆ ಬಹಳ ಕಾಲದವರೆಗೆ ನಡೆಯುವ ಸಾಧ್ಯತೆಯಿದೆ. ಹಾಗಾಗಿ ಕೇಂದ್ರ ಸರಕಾರ ಮೊದಲು ಪ್ರತಿಕ್ರಿಯಿಸಲಿ. ಅರ್ಜಿದಾರರು ಸಿಬಿಐ ತನಿಖೆಗೂ ಆಗ್ರಹಿಸಿದ್ದಾರೆ. ಈ ಕುರಿತು ಕೂಡ ಕೋರ್ಟ್ ಪರಿಶೀಲಿಸಲಿದೆ,'' ಎಂದು ಹೇಳಿದೆ. ಈ ಪ್ರಕರಣದಲ್ಲಿ ನೆರವಾಗಲು ಹಿರಿಯ ವಕೀಲ ಪಿ.ಎಸ್. ನರಸಿಂಹ ಅವರನ್ನು ಅಮಿಕಸ್ ಕ್ಯೂರಿಯಾಗಿ ಸುಪ್ರೀಂ ಕೋರ್ಟ್ ನೇಮಿಸಿದೆ. ಕೇಂದ್ರದ ಕಾನೂನು, ಗಣಿ ಖನಿಜ ಸಚಿವಾಲಯಗಳ ಜತೆಗೆ ಕರ್ನಾಟಕ ಹಾಗೂ ಒಡಿಶಾ ಸರಕಾರಗಳನ್ನೂ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.
358 ಗಣಿಗಳ ಲೈಸೆನ್ಸ್ ರದ್ದು: ಪ್ರತಿಕ್ರಿಯೆ ಕೇಳಿದ ಸುಪ್ರೀಂ
ನ್ಯಾಯಪೀಠವು, ''ಪ್ರಕರಣದ ವಿಚಾರಣೆ ಬಹಳ ಕಾಲದವರೆಗೆ ನಡೆಯುವ ಸಾಧ್ಯತೆಯಿದೆ. ಹಾಗಾಗಿ ಕೇಂದ್ರ ಸರಕಾರ ಮೊದಲು ಪ್ರತಿಕ್ರಿಯಿಸಲಿ. ಅರ್ಜಿದಾರರು ಸಿಬಿಐ ತನಿಖೆಗೂ ಆಗ್ರಹಿಸಿದ್ದಾರೆ. ಈ ಕುರಿತು ಕೂಡ ಕೋರ್ಟ್ ಪರಿಶೀಲಿಸಲಿದೆ,'' ಎಂದು ಹೇಳಿದೆ.
PTI 5 Jul 2019, 5:00 am