ಆ್ಯಪ್ನಗರ

ಪಾಕ್‌ಗೆ ಮಾಹಿತಿ ಸೋರಿಕೆ: ಐಎಎಫ್‌ ನಿವೃತ್ತ ಅಧಿಕಾರಿಗೆ ಜಾಮೀನು ನಿರಾಕರಣೆ, ನಿಮ್ಮಂತಹವರು ಅಪಾಯಕಾರಿ ಎಂದ ಸುಪ್ರೀಂ!

​​ದಿಲ್ಲಿ ಹೈಕೋರ್ಟ್‌ ಜಾಮೀನು ಅರ್ಜಿ ತಳ್ಳಿಹಾಕಿದ್ದನ್ನು ಪ್ರಶ್ನಿಸಿ ರಂಜಿತ್‌ ಮೇಲ್ಮನವಿ ಸಲ್ಲಿಸಿದ್ದರು. ತಾನು ಅಮಾಯಕ ಎಂದು ಹೇಳಿಕೊಂಡಿರುವ ರಂಜಿತ್‌ , ಕೌಟುಂಬಿಕ ಸಮಸ್ಯೆಗಳನ್ನು ಪ್ರಸ್ತಾಪಿಸಿ ಜಾಮೀನು ನೀಡುವಂತೆ ಕೋರಿದ್ದರು. ಅದನ್ನು ಒಪ್ಪದ ಸಿಜೆಐ ಎಸ್‌.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ''ನಿಮ್ಮಂತಹವರು ಇಡೀ ದೇಶಕ್ಕೆ ಅಪಾಯಕಾರಿ. ತಾಯಿಯನ್ನು ಭೇಟಿ ಮಾಡಲು ಬಯಸಿದ್ದರೆ ಮನವಿ ಸಲ್ಲಿಸಿದರೆ ಅನುಮತಿ ನೀಡುತ್ತೇವೆ. ಆದರೆ ಜಾಮೀನು ಕೇಳಬೇಡಿ,'' ಎಂದು ಹೇಳಿತು.

Vijaya Karnataka Web 9 Oct 2020, 7:07 am
ಹೊಸದಿಲ್ಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ರಕ್ಷಣಾ ರಹಸ್ಯ ಹಂಚಿಕೊಂಡ ಆರೋಪದ ಮೇಲೆ ಬಂಧಿತರಾಗಿರುವ ವಾಯುಪಡೆ ಮಾಜಿ ಅಧಿಕಾರಿ ಕೆ.ಕೆ.ರಂಜಿತ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸೂಕ್ಷ್ಮ ಮಾಹಿತಿಗಳನ್ನು ಶತ್ರು ದೇಶಕ್ಕೆ ಸೋರಿಕೆ ಮಾಡಿದ ಈ ವ್ಯಕ್ತಿ ಇಡೀ ರಾಷ್ಟ್ರಕ್ಕೆ ಅಪಾಯಕಾರಿ ಎಂದು ಕೋರ್ಟ್‌ ಹೇಳಿದೆ.
Vijaya Karnataka Web supreme court


ದಿಲ್ಲಿ ಹೈಕೋರ್ಟ್‌ ಜಾಮೀನು ಅರ್ಜಿ ತಳ್ಳಿಹಾಕಿದ್ದನ್ನು ಪ್ರಶ್ನಿಸಿ ರಂಜಿತ್‌ ಮೇಲ್ಮನವಿ ಸಲ್ಲಿಸಿದ್ದರು. ತಾನು ಅಮಾಯಕ ಎಂದು ಹೇಳಿಕೊಂಡಿರುವ ರಂಜಿತ್‌ , ಕೌಟುಂಬಿಕ ಸಮಸ್ಯೆಗಳನ್ನು ಪ್ರಸ್ತಾಪಿಸಿ ಜಾಮೀನು ನೀಡುವಂತೆ ಕೋರಿದ್ದರು. ಅದನ್ನು ಒಪ್ಪದ ಸಿಜೆಐ ಎಸ್‌.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ''ನಿಮ್ಮಂತಹವರು ಇಡೀ ದೇಶಕ್ಕೆ ಅಪಾಯಕಾರಿ. ತಾಯಿಯನ್ನು ಭೇಟಿ ಮಾಡಲು ಬಯಸಿದ್ದರೆ ಮನವಿ ಸಲ್ಲಿಸಿದರೆ ಅನುಮತಿ ನೀಡುತ್ತೇವೆ. ಆದರೆ ಜಾಮೀನು ಕೇಳಬೇಡಿ,'' ಎಂದು ಹೇಳಿತು.

ವಾಯುಪಡೆ ಮಾಜಿ ಅಧಿಕಾರಿ ಕೆ.ಕೆ.ರಂಜಿತ್‌ಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ರಕ್ಷಣಾ ರಹಸ್ಯ ಹಂಚಿಕೊಂಡಿರುವ ಹಿನ್ನೆಲೆ ಬಂಧಿತರಾಗಿದ್ದಾರೆ. ಹಣಕ್ಕೆ ಮಾಹಿತಿ ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಸೇನೆ ಭಾರತದ ಅಧಿಕಾರಿಗಳನ್ನು ಹಣ ಹಾಗೂ ಹನಿ ಟ್ರ್ಯಾಪ್‌ ಮೂಲಕ ತಮಮ್ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಕೆಲವರು ಪಾಕ್‌ನ ಆಮಿಷಕ್ಕೆ ಬಲಿಯಾಗಿದ್ದಾರೆ.
ಇತರ ನಗರಗಳಲ್ಲೂ ಟಿಆರ್‌ಪಿ ದಂಧೆ? ಅನುಮಾನ ವ್ಯಕ್ತಪಡಿಸಿದ ಮುಂಬಯಿ ಕಮಿಷನರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ