ಆ್ಯಪ್ನಗರ

ಮತದಾನ ಜಾಗೃತಿಗೆ ಮಾನವ ಸರಪಳಿಯೊಳಗೆ ಭಾರತದ ನಕ್ಷೆ ರೂಪಿಸಿದ ವಿದ್ಯಾರ್ಥಿಗಳು

Times Now 29 Apr 2019, 12:47 pm
ಉನಾ: ಲೋಕಸಭೆ ಚುನಾವಣೆ 2019ರ 4ನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಹಿಮಾಚಲ ಪ್ರದೇಶದ 5,000 ವಿದ್ಯಾರ್ಥಿಗಳು ಮಾನವ ಸರಪಳಿಯೊಳಗೆ ಭಾರತದ ನಕ್ಷೆ ರೂಪದಲ್ಲಿ ನಿಂತು ಜಾಗೃತಿ ಮೂಡಿಸಿದ್ದಾರೆ.
Vijaya Karnataka Web India man chain


ಹಿಮಾಚಲ ಪ್ರದೇಶದ ಊನಾ ನಗರದ ಸುಮಾರು 5,000 ವಿದ್ಯಾರ್ಥಿಗಳು ಇತ್ತೀಚೆಗೆ ಮಾನವ ಸರಪಳಿ ನಿರ್ಮಿಸಿ, ಅದರೊಳಗೆ ಭಾರತದ ನಕ್ಷೆಯ ರೂಪದಲ್ಲಿ ನಿಂತು ಮತದಾನ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡ್ರೋನ್‌ ದೃಷ್ಟಿಯಿಂದ ಕ್ಲಿಕ್ಕಿಸಿದ ಚಿತ್ರಗಳನ್ನು ಎಎನ್‌ಐ ಟ್ವೀಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ರಾಷ್ಟ್ರಾದ್ಯಂತ ನೆಟ್ಟಿಗರು ವಿದ್ಯಾರ್ಥಿಗಳ ಕ್ರಿಯಾಶೀಲನ್ನು ಪ್ರಶಂಸಿಸಿದ್ದಾರೆ.


ಹಿಮಾಚಲ ಪ್ರದೇಶದ 4 ಲೋಕಸಭಾ ಕ್ಷೇತ್ರಗಳಿಗೆ ಮೇ 19 ರಂದು ಮತದಾನ ನಡೆಯಲಿದೆ. ಇದು ಈ ಚುನಾವಣೆಯ ಕೊನೆಯ ಮತ್ತು 7ನೇ ಹಂತದ ಮತದಾನವಾಗಿದೆ. ಮೇ 23ರಂದು ಲೋಕಸಭೆ ಚುನಾವಣೆ 2019ರ ಫಲಿತಾಂಶ ಪ್ರಕಟಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ