ಆ್ಯಪ್ನಗರ

ಸ್ಮಶಾನದಲ್ಲಿ ಶಾಲೆ: ಒಬ್ಬರು ಸತ್ತರೆ ಮೂರು ದಿನ ರಜೆ

ಅಲ್ವಾರ್‌ ಜಿಲ್ಲೆಯಲ್ಲಿ ಸ್ಮಶಾನದಲ್ಲಿ ಶಾಲೆ ನಡೆಯುತ್ತಿದ್ದು, ಒಬ್ಬರು ಮೃತಪಟ್ಟು ಸಂಸ್ಕಾರ ನಡೆಸಿದರೆ ಶಾಲೆಗೆ ಮೂರು ದಿನ ರಜೆ ನೀಡಲಾಗುತ್ತದೆ.

ಟೈಮ್ಸ್ ಆಫ್ ಇಂಡಿಯಾ 30 Aug 2016, 11:27 am
ಅಲ್ವಾರ್‌: ರಾಜಸ್ಥಾನದ ಅಲ್ವಾರ್‌ ಜಿಲ್ಲೆಯಲ್ಲಿ ಸ್ಮಶಾನದಲ್ಲಿ ಶಾಲೆ ನಡೆಯುತ್ತಿದ್ದು, ಒಬ್ಬರು ಮೃತಪಟ್ಟು ಸಂಸ್ಕಾರ ನಡೆಸಿದರೆ ಶಾಲೆಗೆ ಮೂರು ದಿನ ರಜೆ ನೀಡಲಾಗುತ್ತದೆ.
Vijaya Karnataka Web school where a death gives kids 3 holidays
ಸ್ಮಶಾನದಲ್ಲಿ ಶಾಲೆ: ಒಬ್ಬರು ಸತ್ತರೆ ಮೂರು ದಿನ ರಜೆ


ಗದ್ಗಿ ಸವಾಯಿರಾಮ್‌ ಗ್ರಾಮದಲ್ಲಿರುವ ದಶಕಗಳಿಂದ ಈ ಶಾಲೆ ಇದ್ದು, ಇದನ್ನು ಸ್ಥಳಾಂತರಿಸುವಂತೆ ಈ ಹಿಂದಿನ ಮುಖ್ಯಸ್ಥರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಇಲ್ಲಿರುವ ಸ್ಮಶಾನ ರಜಪೂತ ಸಮುದಾಯದವರಿಗೆ ಸೇರಿದ್ದಾಗಿದೆ. 'ನಾನು ಇದೇ ಶಾಲೆಯಲ್ಲಿ ಓದಿದ್ದು, ನನ್ನ ಮೊಮ್ಮಗ ಕೂಡ ಇಲ್ಲೇ ಓದುವವರೆಗೆ ಈ ಸಮಸ್ಯೆ ಮುಂದುವರಿದುಕೊಂಡು ಬಂದಿರುವುದು ಆಶ್ಚರ್ಯಕರ. ಯಾರಾದರೂ ಸತ್ತರೆ ಮೂರು ದಿನ ರಜೆ ಎಂದು ಮಕ್ಕಳು ಬಹಳ ಸಂತೋಷಪಡುತ್ತಾರೆ,'ಎಂದು 75 ವರ್ಷದ ಪ್ರಭು ದಯಾಳ್‌ ಮೀನಾ ಹೇಳುತ್ತಾರೆ.

'ನಮ್ಮ ಶಾಲೆಗೆ ಉತ್ತಮ ಫಲಿತಾಂಶ ಬರುತ್ತಿದ್ದು, ಪೋಷಕರಿಗೆ ಸಮಾಧಾನ ಇದೆ. ಶಾಲೆಯನ್ನು ಸ್ಥಳಾಂತರಿಸಿದರೆ ಇನ್ನೂ ಉತ್ತಮ ಎಂದು ಅದೇ ಶಾಲೆಯಲ್ಲಿ ಓದಿ ಅಲ್ಲೇ ಶಿಕ್ಷಕಿಯಾಗಿರುವ ಆನಂದಿ ಲಾಲ್‌ ಬಾ ಹೇಳಿದ್ದಾರೆ.

ಈ ಶಾಲೆ ಸ್ವಾತಂತ್ರ್ಯಪೂರ್ವದಲ್ಲಿ ಗುರುಕುಲ ಮಾದರಿಯಲ್ಲಿ ಇತ್ತು. 1950ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆಯಿತು. ಈಗ ಪ್ರೌಢಶಾಲೆಯಾಗಿದೆ. ಇದನ್ನುಸ್ಥಳಾಂತರಿಸುವಂತೆ ಸಂಬಂಧಿಸಿದವರಿಗೆಲ್ಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರಿನ್ಸಿಪಾಲ್‌ ಬಾಬು ಲಾಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ ವಿಧಾನಸಭೆಯ ಮಾಜಿ ಸ್ಪೀಕರ್‌ ಸಮರ್ಥ್‌ಲಾಲ್‌ ಮೀನಾ ಅವರೂ ಈ ಶಾಲೆಯ ಹಳೆ ವಿದ್ಯಾರ್ಥಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ