ಆ್ಯಪ್ನಗರ

ಹಿಮಾಲಯಕ್ಕೆ ಎಚ್ಚರಿಕೆಯ ಗಂಟೆ: ಭೂಕಂಪ ಸಾಧ್ಯತೆ

ಹಿಮಾಲಯದ ಹಲವಡೆ ಭೂಕಂಪದ ಕೇಂದ್ರಗಳಿದ್ದು, 8.5 ತೀವ್ರತೆಯ ಭೂಕಂಪವಾಗುವ ಸಾಧ್ಯತೆಯಿದೆ. ಹಿಮಾಲಯದಲ್ಲಿ ಭೂಕಂಪವಾದರೆ ಅದರ ಪರಿಣಾಮ ಭೀಕರವಾಗಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Vijaya Karnataka Web 1 Dec 2018, 10:52 am
ಬೆಂಗಳೂರು: ದೇಶಕ್ಕೆ ಉತ್ತರದಲ್ಲಿ ನೈಸರ್ಗಿಕ ತಡೆಗೋಡೆಯಂತಿರುವ ಹಿಮಾಲಯದಲ್ಲಿಯೇ ಭೂಕಂಪವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
Vijaya Karnataka Web Himalaya


ಹಿಮಾಲಯದ ಹಲವಡೆ ಭೂಕಂಪದ ಕೇಂದ್ರಗಳಿದ್ದು, 8.5 ತೀವ್ರತೆಯ ಭೂಕಂಪವಾಗುವ ಸಾಧ್ಯತೆಯಿದೆ. ಹಿಮಾಲಯದಲ್ಲಿ ಭೂಕಂಪವಾದರೆ ಅದರ ಪರಿಣಾಮ ಭೀಕರವಾಗಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್‌ ಸೈಂಟಿಫಿಕ್ ರಿಸರ್ಚ್‌ನ ಭೂಕಂಪಶಾಸ್ತ್ರಜ್ಞ ಸಿ ಪಿ ರಾಜೇಂದ್ರನ್ ನೇತೃತ್ವದ ತಜ್ಞರ ತಂಡ, ಹಿಮಾಲಯದಲ್ಲಿ ಮುಂದಿನ ದಿನಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಹೇರಳವಾಗಿವೆ. ಕೇಂದ್ರ ಹಿಮಾಲಯದಲ್ಲಿ ಯಾವಾಗ ಬೇಕಾದರೂ ಭೂಕಂಪ ಸಂಭವಿಸಬಹುದು ಎಂದು ಹೇಳಿದ್ದಾರೆ.

ಜಿಯೋಲಾಜಿಕಲ್ ಜರ್ನಲ್‌ನಲ್ಲಿ ತಜ್ಞರ ಅಧ್ಯಯನ ವರದಿ ಪ್ರಕಟವಾಗಿದ್ದು, ಭೂಕಂಪದ ಕೇಂದ್ರ ಹಿಮಾಲಯದಲ್ಲಿ ಪತ್ತೆಯಾಗಿದ್ದು, ಅಲ್ಲಿ ದುರಂತ ಸಂಭವಿಸಿದರೆ ಅದರಿಂದ ಹಿಮದ ರಾಶಿಯೂ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಹೋಗುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಲಿದೆ ಎಂದಿದ್ದಾರೆ.

ವಿಜ್ಞಾನಿಗಳು ಸ್ಥಳೀಯ ಭೂಪ್ರದೇಶ ಮತ್ತು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ಗೂಗಲ್ ಅರ್ತ್‌ ಮತ್ತು ಇಸ್ರೋ ಕಾರ್ಟೋಸ್ಯಾಟ್-1 ಉಪಗ್ರಹದ ಸಹಾಯದಿಂದ ಅಧ್ಯಯನ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ