ಆ್ಯಪ್ನಗರ

ಕಡಲ್ಕೊರೆತಕ್ಕೆ ತ.ನಾಡು ಕರಾವಳಿ ತತ್ತರ: ಸಾವಿರಾರು ಕುಟುಂಬ ಬೀದಿ ಪಾಲು

​ ಕಳೆದ ಕೆಲ ದಿನಗಳಿಂದ ಮಳೆ ಜತೆಗೆ ಗಾಳಿಯೂ ಅಧಿಕವಾಗಿರುವುದರಿಂದ ತಮಿಳುನಾಡಿನ ಕರಾವಳಿ ಪ್ರದೇಶ ಕಡಲ್ಕೊರೆತಕ್ಕೆ ತ್ತರಿಸಿದೆ.

TIMESOFINDIA.COM 28 Jun 2018, 4:05 pm
ಚೆನ್ನೈ: ಕರ್ನಾಟಕ ಹಾಗೂ ದಕ್ಷಿಣ ಭಾಗದಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಚೆನ್ನೈನ ಕರಾವಳಿ ಭಾಗ ತತ್ತರಿಸಿದೆ.
Vijaya Karnataka Web sea_2


ಕಳೆದ ಕೆಲ ದಿನಗಳಿಂದ ಮಳೆ ಜತೆಗೆ ಗಾಳಿಯೂ ಅಧಿಕವಾಗಿರುವುದರಿಂದ ಕಡಲ್ಕೊರೆತ ಹೆಚ್ಚಾಗಿದ್ದು, ಸುಮಾರು 25ಕ್ಕೂ ಅಧಿಕ ಮನೆಗಳು ಜಖಂಗೊಂಡಿದೆ.
ಸಮುದ್ರ ದಿನದಿಂದ ದಿನಕ್ಕೆ ಸರಾಸರಿ 10 ರಿಂ 15 ಅಡಿಗಳಷ್ಟು ಮುಂದಕ್ಕೆ ಬರುತ್ತಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಶ್ರೀನಿವಾರಪುರಂ ಸೇರಿ ಇನ್ನಿತರ ಭಾಗಗಳಲ್ಲಿ ಕಡಲ್ಕೊರೆತಕ್ಕೆ ಮೀನುಗಾರರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಕಳೆದ ವರ್ಷ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಮನೆ ನಿರ್ಮಿಸಿದ್ದೆವು. ಆದರೆ ಇದೀಗ ಮನೆಯ ಒಂದು ಭಾಗಕ್ಕೆ ಸಂಪೂರ್ಣ ಹಾನಿಯಾಗಿದೆ ಎಂದು ಮೀನು ವ್ಯಾಪಾರಿ ಸುಂದರಿ ಅಳಲು ತೋಡಿಕೊಂಡಿದ್ದಾಳೆ.
ಕಳೆದ 4 ವರ್ಷಗಳಿಂದ ಸತತ ಕಡಲ್ಕೊರೆತ ಸಮಸ್ಯೆಗೆ ಶ್ರೀನಿವಾಸಪುರಂ ಸಾಕ್ಷಿಯಾಗಿವೆ. ಕನ್ನಂಗಿ ನಗರಕ್ಕೆ ಇಲ್ಲಿನ ಮೀನುಗಾರರನ್ನು ಸ್ಥಳಾಂತರಿಸಲು ಸರಕಾರ ಮುಂದಾಗಿತ್ತು. ಆದರೆ ಅಲ್ಲಿಗೆ ತೆರಳಿದರೆ, ಮೀನುಗಾರಿಕೆಯ ಕಸುಬಿಗೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸರಕಾರದ ಅಭಿಪ್ರಾಯವನ್ನು ಮನ್ನಣೆ ಮಾಡಿಲ್ಲ. ಕಡಲ್ಕೊರೆತ ತಡೆಗೆ ಕಿನಾರೆಗೆ ಕಲ್ಲುಗಳನ್ನು ಹಾಕಲು ಸಾಕಷ್ಟು ಬಾರಿ ಮನವಿ ಮಾಡಲಾಗಿದೆಯಾದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮೀನುಗಾರಿಕಾ ಕುಟುಂಬದ ಸುಜಾತ ಸುದ್ದಿಗಾರರಿಗೆ ಹೇಳಿದ್ದಾರೆ.

ಮೇ ನಿಂದ ಜುಲೈ ವರೆಗೆ ಬಂಗಾಳ ಕೊಲ್ಲಿಯಿಂದ ಬೀಸುವ ರಭಸವಾದ ಗಾಳಿಯಿಂದ ದೈತ್ಯ ಅಲೆಗಳು ಹುಟ್ಟುತ್ತಿವೆ. ಇದರಿಂದಾಗಿ ಹೆಚ್ಚು ಕಡಲ್ಕೊರೆತ ಉಂಟಾಗುತ್ತಿದೆ. ಹುಣ್ಣಿಮೆಯ ಬಳಿಕದ ದಿನಗಳಲ್ಲಿ ಗಾಳಿ ಹೆಚ್ಚಾಗಿದ್ದು, ಅಲೆಗಳ ರಭಸವೂ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಕರವಳಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಪ್ರವಕರ್‌ ಮಿಶ್ರ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ