ಆ್ಯಪ್ನಗರ

ಜಮ್ಮು ಮತ್ತು ಕಾಶ್ಮೀರದಲ್ಲಿ ಓರ್ವ ಉಗ್ರ ಸೆರೆ: ಎನ್‌ಕೌಂಟರ್‌ ಮುಂದುವರಿಕೆ!

ಚೀನಾ ಗಡಿ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲೇ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಆರಂಭವಾಗಿದೆ. ಅನಂತನಾಗ್‌ ಜಿಲ್ಲೆಯ ಜಂಗ್ಲಾತ್ ಮಂಡಿ ಬಳಿ ಭಯೋತ್ಪಾದಕನೊಬ್ಬ ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಬಂಧಿಯಾಗಿದ್ದಾನೆ.

Vijaya Karnataka Web 18 Jun 2020, 5:36 pm
ಹೊಸದಿಲ್ಲಿ: ಚೀನಾ ಗಡಿ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲೇ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಆರಂಭವಾಗಿದೆ.
Vijaya Karnataka Web terrorist


ಅನಂತನಾಗ್‌ ಜಿಲ್ಲೆಯ ಜಂಗ್ಲಾತ್ ಮಂಡಿ ಬಳಿ ಭಯೋತ್ಪಾದಕನೊಬ್ಬ ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಬಂಧಿಯಾಗಿದ್ದಾನೆ.



ಬುಧವಾರ ರಾತ್ರಿ ಜಂಗ್ಲಾತ್ ಮಂಡಿ ಬಳಿ ಭಯೋತ್ಪಾದಕ ಇಮ್ರಾನ್ ನಬಿ ದಾರ್‌ ಎಂಬ ಭಯೋತ್ಪಾದಕ ಚಿಕ್ಕಿಬಿದ್ದಿದ್ದಾನೆ. ಗಡಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಬಳಿಯಿದ್ದ ಒಂದು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಚೀನಾ ವಿರುದ್ಧ ಮಾರುಕಟ್ಟೆಯನ್ನೇ ಅಸ್ತ್ರವಾಗಿಸಲು ಭಾರತದ ಸಿದ್ಧತೆ!

ಭಯೋತ್ಪಾದಕ ಇಮ್ರಾನ್ ನಬಿ ದಾರ್‌ ಕಳೆ ಮೇ 10 ರಂದು ಭಯೋತ್ಪಾದಕ ಸಂಘಟನೆಗೆ ಸೇರಿಕೊಂಡಿದ್ದನು ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಭಯೋತ್ಪಾದಕ ಇಮ್ರಾನ್ ನಬಿ ದಾರ್‌ ಸ್ಥಳೀಯ ಮಸೀದಿಯಲ್ಲಿ ಆಶ್ರಯ ಪಡೆಯಲು ಪ್ರವೇಶಿಸಿದ್ದ. ಈ ಕುರಿತು ಖಾತರಿಪಡಿಸಿಕೊಂಡ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಇಎಂಐ ಬಡ್ಡಿ ಮನ್ನಾ ಪ್ರಕರಣ: ಕೇಂದ್ರ ಸರ್ಕಾರ ಕೈಚೆಲ್ಲುವಂತಿಲ್ಲ ಎಂದ ಸುಪ್ರೀಂ!



ಎನ್‌ಕೌಂಟರ್‌ ಮುಂದುವರಿಕೆ:
ಜಮ್ಮು ಮತ್ತು ಕಾಶ್ಮೀರದ ಅವಂತಿಪುರದ ಪಂಪೋರ್ ಪ್ರದೇಶದ ಮೀಜ್ ಗ್ರಾಮದಲ್ಲಿ ಪೊಲೀಸರು ಎನ್‌ಕೌಂಟರ್‌ ನಡೆಸುತ್ತಿದ್ದಾರೆ. ಎನ್‌ಕೌಂಟರ್ನಲ್ಲಿ ಇದುವರೆಗೆ ಒಬ್ಬ ಅಪರಿಚಿತ ಭಯೋತ್ಪಾದಕ ಸಾವನ್ನಪ್ಪಿದ್ದಾನೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯನಿರತವಾಗಿವೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಮುನಾಂದ್ ಪ್ರದೇಶದಲ್ಲಿ ಕೂಡ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ