ಪಟನಾ: ಆಘಾತಕಾರಿ ಘಟನೆಯೊಂದರಲ್ಲಿ ಬಿಹಾರದ ಮಾಜಿ ಆರೋಗ್ಯ ಸಚಿವ ಹಾಗೂ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅಂಗ ರಕ್ಷಕರು ವೀಡಿಯೋ ಜರ್ನಲಿಸ್ಟ್ ಮೇಲೆ ಹಲ್ಲೆ ಮಾಡಿದ ಘಟನೆ ಪಟನಾದಲ್ಲಿ ನಡೆದಿದೆ.
ಇ - ರಿಕ್ಷಾವನ್ನೇರಿ ತೇಜ್ ಪ್ರತಾಪ್ ಮತ ಚಲಾಯಿಸಲು ಬಂದಿದ್ದರು. ಅವರಿದ್ದ ರಿಕ್ಷಾ ಕ್ಯಾಮರಾಮ್ಯಾನ್ ಒಬ್ಬರ ಕಾಲ ಮೇಲೆ ಹತ್ತಿದೆ. ಅದಕ್ಕಾತ ರಿಕ್ಷಾವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾನೆ. ಅದಕ್ಕೆ ಸಿಟ್ಟಿಗೆದ್ದ ತೇಜ್ ಪ್ರತಾಪ್ ಭದ್ರತಾ ಸಿಬ್ಬಂದಿ ಆತನ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದಿರುವ ತೇಜ್ ಪ್ರತಾಪ್, 'ಮಾಧ್ಯಮದವರು ನಮ್ಮ ವಾಹನದ ಗಾಜು ಒಡೆದಿದ್ದಾರೆ. ನನ್ನ ಕೊಲೆಗೆ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಇ - ರಿಕ್ಷಾವನ್ನೇರಿ ತೇಜ್ ಪ್ರತಾಪ್ ಮತ ಚಲಾಯಿಸಲು ಬಂದಿದ್ದರು. ಅವರಿದ್ದ ರಿಕ್ಷಾ ಕ್ಯಾಮರಾಮ್ಯಾನ್ ಒಬ್ಬರ ಕಾಲ ಮೇಲೆ ಹತ್ತಿದೆ. ಅದಕ್ಕಾತ ರಿಕ್ಷಾವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾನೆ. ಅದಕ್ಕೆ ಸಿಟ್ಟಿಗೆದ್ದ ತೇಜ್ ಪ್ರತಾಪ್ ಭದ್ರತಾ ಸಿಬ್ಬಂದಿ ಆತನ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದಿರುವ ತೇಜ್ ಪ್ರತಾಪ್, 'ಮಾಧ್ಯಮದವರು ನಮ್ಮ ವಾಹನದ ಗಾಜು ಒಡೆದಿದ್ದಾರೆ. ನನ್ನ ಕೊಲೆಗೆ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ.