ದೇಶದ್ರೋಹ ಪ್ರಕರಣ: ವೈಕೊ ಶಿಕ್ಷೆ ಅಮಾನತಿನಲ್ಲಿಟ್ಟ ಹೈಕೋರ್ಟ್
ಸರಕಾರದ ವಿರುದ್ಧ ದ್ವೇಷದ ಭಾಷಣ ಮಾಡಿರುವುದು ಭಾರತೀಯ ದಂಡ ಸಂಹಿತೆ 124ಎ ಅನ್ವಯ ದೇಶದ್ರೋಹದ ಕೆಲಸವೇ ಹೌದು ಎಂದಿದ್ದ ಅಧೀನ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಶಾಂತಿ ಅವರು ವೈಕೊ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ಜುಲೈ 5ರಂದು ಆದೇಶ ನೀಡಿದ್ದರು.
PTI 19 Jul 2019, 5:00 am
ಚೆನ್ನೈ: ದೇಶದ್ರೋಹ ಪ್ರಕರಣದಲ್ಲಿ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ಅಮಾನತಿನಲ್ಲಿಟ್ಟಿದೆ. 2009ರ ಜುಲೈ 15ರಂದು ನಡೆದ ಶ್ರೀಲಂಕನ್ ತಮಿಳರ ಕುರಿತ ತಮ್ಮದೇ ಪುಸ್ತಕ 'ಐ ಅಕ್ಯೂಸ್' ತಮಿಳು ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ವೈಕೊ ಅವರು ಕೇಂದ್ರ ಸರಕಾರದ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸರಕಾರದ ವಿರುದ್ಧ ದ್ವೇಷದ ಭಾಷಣ ಮಾಡಿರುವುದು ಭಾರತೀಯ ದಂಡ ಸಂಹಿತೆ 124ಎ ಅನ್ವಯ ದೇಶದ್ರೋಹದ ಕೆಲಸವೇ ಹೌದು ಎಂದಿದ್ದ ಅಧೀನ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಶಾಂತಿ ಅವರು ವೈಕೊ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ಜುಲೈ 5ರಂದು ಆದೇಶ ನೀಡಿದ್ದರು. ತೀರ್ಪಿನ ವಿರುದ್ಧ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದ ವೈಕೊ, 124ಎ ವಿಧಿಯನ್ನು ತಪ್ಪಾಗಿ ವ್ಯಾಖ್ಯಾನಿಸಿ ತಮಗೆ ಶಿಕ್ಷೆ ವಿಧಿಸಲಾಗಿದೆ ಎಂದು ಆರೋಪಿಸಿದ್ದರು. ತಮಿಳುನಾಡು ವಿಧಾನಸಭೆಯಿಂದ ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವೈಕೋ ಆಯ್ಕೆಯಾಗಿದ್ದಾರೆ.