ಆ್ಯಪ್ನಗರ

ಆರತಿ ಎತ್ತೀರೇ...ಲಾಕ್‌ಡೌನ್ ಪಾಲಿಸದವರಿಗೆ ಪೊಲೀಸರಿಂದ ಕಿವಿಯಲ್ಲಿ ಹೂವಿಟ್ಟು ಮಂಗಳಾರತಿ!

ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ದೇಶವನ್ನು 21 ದಿನಗಳ ಲಾಕ್‌ಡೌನ್ ಸ್ಥಿತಿಯಲ್ಲಿ ಇಡಲಾಗಿದೆ. ಯಾರೂ ಮನೆಯಿಂದ ಹೊರಗೆ ಬರದಂತೆ ಕೇಂದ್ರ ಸರ್ಕಾವೂ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳೂ ಪದೇ ಪದೇ ಜನರಲ್ಲಿ ಮನವಿ ಮಾಡುತ್ತಿವೆ. ಆದರೆ ಲಾಕ್‌ಡೌನ್ ಆದೇಶ ಪಾಲಿಸದ ಈ ಯುವಕರಿಗೆ ಪೊಲೀಸರು ಮಂಗಳಾರತಿ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.

Vijaya Karnataka Web 30 Mar 2020, 11:03 am
ನವದೆಹಲಿ: ಕೊರೊನಾ ವೈರಸ್‌ನ್ನು ಮಣಿಸಲು ಲಾಕ್‌ಡೌನ್ ಆದೇಶ ಪಾಲಿಸುವುದೊಂದೇ ಏಕೈಕ ಮಾರ್ಗ ಎಂಬ ಸತ್ಯ ಇಡೀ ದೇಶಕ್ಕೆ ಗೊತ್ತಿದೆ. ಆದರೂ ಪ್ರಧಾನಿ ಮೋದಿ ಮನವಿಯನ್ನು ಉಲ್ಲಂಘಿಸಿ ಕೆಲವರು ಲಾಕ್‌ಡೌನ್ ಸಮಯದಲ್ಲೂ ವಿನಾಕಾರಣ ಮನೆಯಿಂದ ಹೊರಬರುತ್ತಿದ್ದಾರೆ.
Vijaya Karnataka Web Lockdown
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಯುವಕರಿಗೆ ಪೊಲೀಸರು ಆರತಿ ಎತ್ತಿ ನಿಯಮ ಪಾಲಿಸುವಂತೆ ಮನವಿ ಮಾಡಿರುವ ಘಟನೆ ನಡೆದಿದೆ.


ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳ ಪೊಲೀಸ್ ಇಲಾಖೆಯೂ ಜನರಲ್ಲಿ ಪದೇ ಪದೇ ಮನವಿ ಮಾಡುತ್ತಿದೆ. ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಗೆ ಬರುವವರಿಗೆ ಪೊಲೀಸರು ಕೈಮುಗಿದು ಪ್ರಾರ್ಥನೆ ಮಾಡುತ್ತಿದ್ದಾರೆ.

ಆದರೂ ದೇಶಾದ್ಯಂತ ಲಾಕ್‌ಡೌನ್ ಆದೇಶ ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರ ಕಟ್ಟೆಚ್ಚರದ ಹೊರತಾಗಿಯೂ ಕೆಲವರು ಕಾರಣವಿಲ್ಲದೇ ಮನೆಯಿಂದ ಹೊರ ಬರುತ್ತಾರೆ.

'ಸ್ಟೇಷನ್‌ನಲ್ಲೇ ಲಾಠಿ ಇಟ್ಟು ಬನ್ನಿ, ಸೌಜನ್ಯಯುತವಾಗಿ ವರ್ತಿಸಿ': ಪೊಲೀಸ್ ಸಿಬ್ಬಂದಿಗೆ ಕಮೀಷನರ್ ತಾಕೀತು


ಅದರಂತೆ ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಜಾಲಿ ರೈಡ್ ಹೊರಟ್ಟಿದ್ದ ಸ್ನೇಹಿತರಿಬ್ಬರನ್ನು ತಡೆದ ಪೊಲೀಸರು, ಅವರ ಕಿವಿಯಲ್ಲಿ ಹೂವಿಟ್ಟು ಮಂಗಳಾರತಿ ಮಾಡಿ ಕೈ ಮುಗಿದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.

'ನನ್ನನ್ನು ಕ್ಷಮಿಸಿ’ಮಂಗಳೂರು ಪೊಲೀಸರಿಂದ ವಿಭಿನ್ನ ಜಾಗೃತಿ

ಹವ್ಯಾಸಿ ಪತ್ರಕರ್ತ ಆದಿತ್ಯ ರಾಜ್ ಕೌಲ್ ಎಂಬುವವರು ಟ್ಟಿಟ್ಟರ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಯುವಕರ ಕಾರನ್ನು ತಡದ ಪೊಲೀಸರು, ಅವರಿಗೆ ಆರತಿ ಎತ್ತಿ ನಿಯಮ ಪಾಲಿಸುವಂತೆ ಮನವಿ ಮಾಡಿರುವ ವಿಡಿಯೋ ಇದಾಗಿದೆ.

ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಪೊಲೀಡರು ಕೈಗೊಂಡಿರುವ ಕ್ರಮದ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ