ಹರಿದ್ವಾರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಾಧುಗಳು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಬುಧವಾರ ಹರಿದ್ವಾರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ನ 'ಮಾರ್ಗದರ್ಶಕ ಮಂಡಳಿ' ಸಭೆಯಲ್ಲಿ ಈ ಸಂಬಂಧ ಆಗ್ರಹ ಕೇಳಿ ಬಂದಿದೆ.
''ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ಮತದಾರರು ನೀಡಿರುವ ಜನಾದೇಶವನ್ನು ಗೌರವಿಸಬೇಕು,'' ಎಂದು ಸಾಧುಗಳು ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶವು ರಾಷ್ಟ್ರೀಯತೆ, ಹಿಂದುತ್ವ ಮತ್ತು ಅಭಿವೃದ್ಧಿ ರಾಜಕೀಯದ ಜಯವನ್ನು ಸೂಚಿಸುತ್ತದೆ ಎಂದು ಸಾಧುಗಳು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಹರಿದ್ವಾರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ನ 'ಮಾರ್ಗದರ್ಶಕ ಮಂಡಳಿ' ಸಭೆಯಲ್ಲಿ ಈ ಸಂಬಂಧ ಆಗ್ರಹ ಕೇಳಿ ಬಂದಿದೆ.
''ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಮೋದಿ ಸರಕಾರವು ಮತದಾರರು ನೀಡಿರುವ ಜನಾದೇಶವನ್ನು ಗೌರವಿಸಬೇಕು,'' ಎಂದು ಸಾಧುಗಳು ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶವು ರಾಷ್ಟ್ರೀಯತೆ, ಹಿಂದುತ್ವ ಮತ್ತು ಅಭಿವೃದ್ಧಿ ರಾಜಕೀಯದ ಜಯವನ್ನು ಸೂಚಿಸುತ್ತದೆ ಎಂದು ಸಾಧುಗಳು ಅಭಿಪ್ರಾಯಪಟ್ಟಿದ್ದಾರೆ.