ಆ್ಯಪ್ನಗರ

ದುಡ್ಡಿನ ಮಳೆ ತರಿಸುತ್ತೇನೆ ಎಂದು ನಂಬಿಸಿ 6.5 ರೂ ಲಕ್ಷ ವಂಚನೆ

ವಂಚನೆಗೊಳಗಾದವರಲ್ಲಿ ಒಬ್ಬಾತನನ್ನು ದೊಡು ಸತ್ಯನಾರಾಯಣ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ನರೇಗಾಂ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

Times Now 13 May 2019, 3:18 pm
ಔರಂಗಾಬಾದ್: ದುಡ್ಡಿನ ಮಳೆ ಸುರಿಯುವ ಹಾಗೆ ಮಾಡುತ್ತೇನೆ ಎಂದು ಹೇಳಿ ಸ್ವಯಂ ಘೋಷಿತ ದೇವಮಾನವನೊಬ್ಬ ತನ್ನ ಅನುಯಾಯಿಗಳಿಗೆ 6.5 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಔರಂಗಾಬಾದಿನಲ್ಲಿ ನಡೆದಿದೆ.
Vijaya Karnataka Web Yajna


ವಂಚನೆಗೊಳಗಾದವರಲ್ಲಿ ಒಬ್ಬಾತನನ್ನು ದೊಡು ಸತ್ಯನಾರಾಯಣ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ನರೇಗಾಂ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಮುಖ ಆರೋಪಿ ಸ್ವಯಂ ಘೋಷಿತ ದೇವಮಾನವನಾಗಿದ್ದು ದುಡ್ಡಿನ ಮಳೆಗರೆಯಲು ನಡೆಸಬೇಕಾದ ಧಾರ್ಮಿಕ ಆಚರಣೆಗೆ 15 ಲಕ್ಷ ಖರ್ಚಾಗುತ್ತದೆ ಎಂದು ಆತ ಸಂತ್ರಸ್ತರನ್ನು ನಂಬಿಸಿದ್ದ.

ಸುಲಭವಾಗಿ ಹಣ ಮಾಡಬಹುದೆಂದು ನಂಬಿ ಸಂಮೋಹನಕ್ಕೊಳಗಾದ ಸಂತ್ರಸ್ತರು ಆರೋಪಿಗಳನ್ನು ಪ್ರಶ್ನಿಸಲೇ ಇಲ್ಲ. ಅಂಗಡಿಯೊಂದರಲ್ಲಿ ಮೆಕ್ಯಾನಿಕ್ ಆಗಿದ್ದ ಸತ್ಯನಾರಾಯಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಹೇಗಾದರು ದುಡ್ಡು ಸಿಕ್ಕಿದರೆ ಸಾಕು ಎಂದುಕೊಂಡಿದ್ದ.

ಸತ್ಯನಾರಾಯಣ ಮತ್ತು ಇನ್ನೊಬ್ಬ ಸಂತ್ರಸ್ತ 2.5 ಲಕ್ಷ ಮೊತ್ತದ ಎರಡು ಚೆಕ್ ಸೇರಿದಂತೆ ಒಟ್ಟು 6.5 ಲಕ್ಷ ಹಣವನ್ನು ದೇವಮಾನವನಿಗೆ ನೀಡಿದ್ದರು.

ಪೂಜೆಗೆ ಬೇಕಾದ ಸಾಮಾನು ತರಲು ಹೋಗುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದು , ಆಗ ಸತ್ಯ ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ