ಆ್ಯಪ್ನಗರ

ಕೊಲೆ ಪ್ರಕರಣದಲ್ಲಿ ಸ್ವಘೋಷಿತ ದೇವಮಾನವ ರಾಮ್‌ಪಾಲ್‌ ದೋಷಿ

ನವೆಂಬರ್ 2014ರಲ್ಲಿ ಹರಿಯಾಣದ ಹಿಸಾರ್‌ನ ಬರ್ವಾಲ ಪೊಲೀಸ್ ಠಾಣೆಯಲ್ಲಿ ರಾಂಪಾಲ್ ವಿರುದ್ಧ 2 ಕೊಲೆ ಆರೋಪದ ದೂರು ದಾಖಲಾಗಿದ್ದವು.

Vijaya Karnataka Web 11 Oct 2018, 3:56 pm
ಗುರುಗ್ರಾಮ: ಸತ್ಲೋಕ್ ಆಶ್ರಮದಲ್ಲಿನ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ ಎರಡು ಕೊಲೆ ಪ್ರಕರಣದಲ್ಲಿ ದೋಷಿ ಎಂದು ಹಿಸಾರ್‌ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web Rampal


ರಾಂಪಾಲ್‌ಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ಅ. 16 ಮತ್ತು 17ರಂದು ಪ್ರಕಟಿಸಲಿದೆ.

ನವೆಂಬರ್ 2014ರಲ್ಲಿ ಹರಿಯಾಣದ ಹಿಸಾರ್‌ನ ಬರ್ವಾಲ ಪೊಲೀಸ್ ಠಾಣೆಯಲ್ಲಿ ರಾಂಪಾಲ್ ವಿರುದ್ಧ 2 ಕೊಲೆ ಆರೋಪದ ದೂರು ದಾಖಲಾಗಿದ್ದವು.

ಮೊದಲನೇ ಪ್ರಕರಣದಲ್ಲಿ ಬರ್ವಾಲದ ಸತ್ಲೋಕ್ ಆಶ್ರಮದಲ್ಲಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರಕರಣ ದಾಖಲಾಗಿದ್ದರೆ, ಎರಡನೇ ಪ್ರಕರಣದಲ್ಲಿ ರಾಂಪಾಲ್‌ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಉಂಟಾದ ಗಲಭೆಯಲ್ಲಿ 4 ಮಹಿಳೆಯರು ಮತ್ತು 1 ಮಗು ಸಾವಿಗೀಡಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 2017ರ ಆ. 29ರಂದು ರಾಂಪಾಲ್ ಮತ್ತು ಆತನ ಕೆಲ ಸಹಚರರನ್ನು ಬಂಧಿಸಲಾಗಿತ್ತು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಆಶ್ರಮದಲ್ಲಿ ಅಕ್ರಮ ಸಹಿತ ಕೊಲೆ, ದೌರ್ಜನ್ಯ ಎಂಬ ಐದು ಪ್ರಕರಣಗಳು ಹಿಸಾರ್ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ