ಆ್ಯಪ್ನಗರ

ಸೆಲ್ಫೀ: ಸಾಗರದಲೆಯಲ್ಲಿ ಕೊಚ್ಚಿ ಹೋದ ದಂಪತಿ

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಲ್ಫೀ ತೆಗೆದುಕೊಳ್ಳುವಾಗ ದಂಪತಿ ಸಮುದ್ರದಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಏಜೆನ್ಸೀಸ್ 18 Jul 2016, 7:19 pm
ಮಧುರೈ: ಇತ್ತ ಚಿಕ್ಕಮಗಳೂರು ಜಿಲ್ಲೆಯ ಜಲಪಾತದ ಮುಂದೆ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಇಬ್ಬರು ನೀರು ಪಾಲಾದರೆ, ಅತ್ತ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಲ್ಫೀ ತೆಗೆದುಕೊಳ್ಳುವಾಗ ದಂಪತಿ ಸಮುದ್ರದಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.
Vijaya Karnataka Web selfie craze claims couples life in kanyakumari
ಸೆಲ್ಫೀ: ಸಾಗರದಲೆಯಲ್ಲಿ ಕೊಚ್ಚಿ ಹೋದ ದಂಪತಿ


ತಮಿಳುನಾಡಿನ ತಿರುಪುರ ಜಿಲ್ಲೆಯ ಉಮರ್‌ ಶರೀಫ್‌(42) ಹಾಗೂ ಫಾತಿಮಾ ಬೀವಿ (40) ಸೆಲ್ಫೀಗೆ ಬಲಿಯಾದ ದಂಪತಿ. ಸಂಗುಥುರಾಯ್‌ ಬೀಚಿಗೆ ತೆರಳಿದ್ದ ಶರೀಫ್‌ ದಂಪತಿ ದೊಡ್ಡ ಅಲೆಯ ನಡುವೆ ಸೆಲ್ಫೀ ತೆಗೆದುಕೊಳ್ಳಲು ಯತ್ನಿಸುತ್ತಿರುವಾಗ, ಭಾರೀ ಅಲೆಯಲ್ಲಿ ಫಾತಿಮಾ ಮೊದಲು ಕೊಚ್ಚಿ ಹೋದರು. ಅವರನ್ನು ರಕ್ಷಿಸಲು ಹೋದ ಶರೀಫ್ ಸಹ ಅಲೆಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.

ನೀರಲ್ಲಿ ಮುಳುಗಿದ ಈ ಇಬ್ಬರನ್ನು ತಕ್ಷಣವೇ ನೀರಿನಿಂದ ಎತ್ತಿದರೂ, ಫಾತಿಮಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶರೀಫ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಸ್ನೇಹಿತ ಜಫರ್ ಸಿದ್ದಿಕ್ ಜತೆ ಕನ್ಯಾಕುಮಾರಿ ಪ್ರವಾಸಕ್ಕೆ ತೆರಳಿದ್ದ ಈ ದಂಪತಿ 12 ವರ್ಷದ ಗರ್ಬಿಶಾ ದಲ್ ಗುಬ್ರಾ ಮತ್ತು 10 ವರ್ಷದ ಆಯಿಶಾ ಸಿದ್ಧಿಕಾ ಎಂಬಿಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ