ಆ್ಯಪ್ನಗರ

ಸರ್ವ ರೋಗಕ್ಕೆ ವಿಭೂತಿ, ಮಂತ್ರ ಪರಿಹಾರ!

ಮರಾಠವಾಡಾ ವಿವಿಯಲ್ಲಿ ಬಿಎಸ್‌ಸಿ ಪದವಿ ಪಡೆದಿರುವ ಚಂದ್ರಶೇಖರ್‌ ಖೈರೆ ಪರ್ಸನಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಆದರೆ. ಈ ಮಂತ್ರಿ ವಿದ್ಯೆ ಕಲಿತದ್ದು ಎಲ್ಲಿ ಎಂಬ ಬಗ್ಗೆ ಮಾಹಿತಿ ಇಲ್ಲ.

Vijaya Karnataka 25 Feb 2019, 5:00 am
ಔರಂಗಾಬಾದ್‌: ''ನಾಡಿ ಪರೀಕ್ಷೆ ಮಾಡಿ ರೋಗ ಪತ್ತೆ ಹಚ್ಚುವುದಲ್ಲದೆ ಮಂತ್ರ ಪಠಣ ಮತ್ತು ವಿಭೂತಿ ನೀಡಿ ಯಾವುದೇ ಸಮಸ್ಯೆಯನ್ನು ಬೇಕಾದರೂ ಪರಿಹರಿಸಬಲ್ಲೆ ,'' ಎಂದು ಶಿವಸೇನಾ ಸಂಸದ ಚಂದ್ರಕಾಂತ್‌ ಖೈರೆ ಬಹಿರಂಗವಾಗಿ ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
Vijaya Karnataka Web khaire


ಔರಂಗಾಬಾದ್‌ನ ಸಂಸದರಾಗಿರುವ ಖೈರೆ ಈ ಹೇಳಿಕೆ ನೀಡಿದ್ದು ನ್ಯಾಷನಲ್‌ ಹೆಲ್ತ್‌ ಮಿಷನ್‌ ಕಾರ್ಯಕ್ರಮದಲ್ಲಿ. ಅದೂ ಸ್ಥಳೀಯ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಡೀನ್‌ ಸೇರಿದಂತೆ ಹಲವು ವೈದ್ಯರ ಸಮ್ಮುಖದಲ್ಲಿ. ಶಾಸಕ ಸಂಜಯ್‌ ಶೀರ್ಷತ್‌, ಮೇಯರ್‌ ನಂದಕುಮಾರ್‌ ಘೋಡೆಲೆ, ಸಿವಿಲ್‌ ಸರ್ಜನ್ನರು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೂಡಾ ಅಲ್ಲಿದ್ದರು.

''ಮಂತ್ರ ಹೇಳಿ ಅಥವಾ ವಿಭೂತಿಯನ್ನು ಸೇವಿಸಲು ಇಲ್ಲವೇ ದಿಂಬಿನ ಅಡಿಯಲ್ಲಿ ಇಟ್ಟುಕೊಳ್ಳಲು ಸೂಚಿಸುವ ಮೂಲಕ ಹಲವಾರು ಜನರ ಸಮಸ್ಯೆಗಳನ್ನು ಪರಿಹರಿಸಿದ್ದೇನೆ,'' ಎಂದು ಹೇಳಿಕೊಂಡಿರುವ ಅವರು ಕೆಲವು ಪ್ರಕರಣಗಳ ವಿವರಣೆಯನ್ನೂ ನೀಡಿದರು. ಮರಾಠವಾಡಾ ವಿವಿಯಲ್ಲಿ ಬಿಎಸ್‌ಸಿ ಪದವಿ ಪಡೆದಿರುವ ಚಂದ್ರಶೇಖರ್‌ ಖೈರೆ ಪರ್ಸನಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಆದರೆ. ಈ ಮಂತ್ರಿ ವಿದ್ಯೆ ಕಲಿತದ್ದು ಎಲ್ಲಿ ಎಂಬ ಬಗ್ಗೆ ಮಾಹಿತಿ ಇಲ್ಲ.

ಮಹಾಜನ್‌ಗೂ ವಿಭೂತಿ ಕೊಟ್ಟಿದ್ರಂತೆ!

''2006ರ ಏಪ್ರಿಲ್‌ 22ರಂದು ತಮ್ಮನಿಂದ ಗುಂಡೇಟು ತಿಂದ ಕೇಂದ್ರದ ಮಾಜಿ ಸಚಿವ ಪ್ರಮೋದ್‌ ಮಹಾಜನ್‌ ಅವರು ಜೀವನ್ಮರಣ ಸ್ಥಿತಿಯಲ್ಲಿದ್ದರು. ಆಗ ಅವರ ರಕ್ಷಣೆಗಾಗಿ ವಿಭೂತಿ ಕೊಟ್ಟು ಬರಲು ಮುಂದಾದೆ. ಅದರೆ, ಭಾರಿ ಭದ್ರತೆಯಿಂದಾಗಿ ಒಳಗೆ ಬಿಡಲಿಲ್ಲ. ಕೊನೆಗೆ ಪುತ್ರ ರಾಹುಲ್‌ ಮಹಾಜನ್‌ ಮೂಲಕ ಕಳುಹಿಸಿದೆನಾದರೂ ಅದು ಅಷ್ಟೊಂದು ಫಲ ನೀಡಲಿಲ್ಲ. ನಾನೇ ನೇರವಾಗಿ ಸ್ಪರ್ಶಿಸಿ ನೀಡುತ್ತಿದ್ದರೆ ಅವರು ಬದುಕುವ ಸಾಧ್ಯತೆ ಇತ್ತು,'' ಅಂತಾರೆ ಚಂದ್ರಕಾಂತ್‌.

ಎದ್ದು ಕುಳಿತಳು ಹೆಂಡತಿ!


''ಶಿವಸೇನೆಯಲ್ಲಿ ಕೆಲಸ ಮಾಡುವ ನನ್ನ ಪತ್ನಿಗೆ ಒಂದು ಸಾರಿ ಅಪಘಾತ ಆಗಿತ್ತು. ನಾನು ಆಕೆಯ ನಾಡಿ ಪರೀಕ್ಷೆ ಮಾಡಿ ಮಂತ್ರ ಹೇಳಿಕೆ. ಆಕೆ ಕಣ್ಣು ತೆರೆದಳು. ಮುಂದೆ ಒಂದೆರಡೇ ದಿನದಲ್ಲಿ ಆಕೆ ಗುಣಮುಖಳಾದಳು,'' ಎನ್ನುವುದು ಖೈರೆಯ ಇನ್ನೊಂದು ಉದಾಹರಣೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ