ಮುಂಬಯಿ: ಕಾಂಗ್ರೆಸ್ ಆಡಳಿತಾವಧಿಯಲ್ಲಿ 'ಹಿಂದೂ ಭಯೋತ್ಪಾದನೆ' ಎಂಬ ಪದ ಪ್ರಯೋಗ ಮಾಡುವ ಜತೆಗೆ ಉಗ್ರ ಕೃತ್ಯ ನಡೆಸಲು ಪಾಕಿಸ್ತಾನ ಮೂಲದ ಪಾತಕಿಗಳಿಗೆ ಪ್ರೋತ್ಸಾಹ ನೀಡಿತು ಎಂದು ಶಿವಸೇನೆ ಬುಧವಾರ ಆರೋಪಿಸಿದೆ. ಶಾಂತಿಪ್ರಿಯ ಹಿಂದೂಗಳನ್ನು ಭಯೋತ್ಪಾದಕರಿಗೆ ಹೋಲಿಸಿದ ಕಾಂಗ್ರೆಸ್ ನಡೆಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ ಬೆನ್ನಲ್ಲೇ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ''ಕಾಂಗ್ರೆಸ್ 'ಕೇಸರಿ ಭಯೋತ್ಪಾದನೆ' ಅಥವಾ 'ಹಿಂದೂ ಭಯೋತ್ಪಾದನೆ' ಎಂಬ ಪದಗಳನ್ನು ಪ್ರಚಾರ ಮಾಡಿತು. ಸಂಜೋತಾ ಎಕ್ಸ್ಪ್ರೆಸ್ ಮತ್ತು ಮಾಲೆಗಾಂವ್ ಬಾಂಬ್ ದಾಳಿ ಪ್ರಕರಣಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಅಮಾಯಕರನ್ನು ದಂಡಿಸಲಾಯಿತು ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಆರೋಪಿಸಿದೆ.
ಹಿಂದೂ ಭಯೋತ್ಪಾದನೆ ಪದ ಬಳಕೆಗೆ ಕಾಂಗ್ರೆಸ್ ಹೊಣೆ ಎಂದ ಶಿವಸೇನೆ
ಸಂಜೋತಾ ಎಕ್ಸ್ಪ್ರೆಸ್ ಮತ್ತು ಮಾಲೆಗಾಂವ್ ಬಾಂಬ್ ದಾಳಿ ಪ್ರಕರಣಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಅಮಾಯಕರನ್ನು ದಂಡಿಸಲಾಯಿತು ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಆರೋಪಿಸಿದೆ.
Vijaya Karnataka 4 Apr 2019, 5:00 am