ಆ್ಯಪ್ನಗರ

ಇಡೀ ದೇಶವೇ ಹೆಮ್ಮೆ ಪಡುತ್ತಿದ್ದರೆ ನನ್ನ ಪಕ್ಷ ಮಾತ್ರ ಸಾಕ್ಷಿ ಕೇಳ್ತಿದೆ, ಹೀಗಾಗಿ ಪಕ್ಷ ತೊರೆಯುತ್ತಿದ್ದೇನೆ: ಬಿಹಾರ ಕಾಂಗ್ರೆಸ್ ಮುಖಂಡ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಬಿನೋದ್ ಶರ್ಮಾ, ಬಾಲಾಕೋಟ್‌ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ರಕ್ಷಣಾತ್ಮಕ ದಾಳಿಗೆ ಸಾಕ್ಷ್ಯ ಕೇಳುವ ಮೂಲಕ ಪಕ್ಷದ ಹೈಕಮಾಂಡ್ ತಳಮಟ್ಟದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

Vijaya Karnataka Web 11 Mar 2019, 12:10 pm
ಪಟನಾ: ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ಸರ್ಜಿಕಲ್ ದಾಳಿಗೆ ಸಾಕ್ಷಿ ಕೇಳುತ್ತಿರುವ ಪಕ್ಷದ ವರಿಷ್ಠರ ನಡೆಯನ್ನು ಖಂಡಿಸಿ ಬಿಹಾರ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಕ್ತಾರ ಬಿನೋದ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಲೋಕಸಭೆ ಚುನಾವಣೆಗೆ ಮುನ್ನವೇ ಬಿಹಾರ ಕಾಂಗ್ರೆಸ್‌ಗೆ ತೀವ್ರ ಆಘಾತ ಉಂಟಾಗಿದೆ.
Vijaya Karnataka Web Balakot Air Strike


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಬಿನೋದ್ ಶರ್ಮಾ, ಬಾಲಾಕೋಟ್‌ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ರಕ್ಷಣಾತ್ಮಕ ದಾಳಿಗೆ ಸಾಕ್ಷ್ಯ ಕೇಳುವ ಮೂಲಕ ಪಕ್ಷದ ಹೈಕಮಾಂಡ್ ತಳಮಟ್ಟದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

'ಕಳೆದ ಒಂದು ತಿಂಗಳಲ್ಲಿ ಹಲವು ಬಾರಿ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದೆ. ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರ ಭಾವನೆಗಳ ಕುರಿತು ವಿವರಿಸಿದ್ದೆ. ಆದರೆ ಅವರ ಪತ್ರಗಳಿಗೆ ಹೈಕಮಾಂಡ್‌ ಯಾವುದೇ ಬೆಲೆ ನೀಡಿಲ್ಲ' ಎಂದು ಶರ್ಮಾ ತಿಳಿಸಿದರು.

'ಉಗ್ರ ನೆಲೆಗಳ ಮೇಲೆ ನಡೆಸಿದ ದಾಳಿಗೆ ಪದೇ ಪದೇ ಸಾಕ್ಷ್ಯಾಧಾರ ಕೇಳುವುದು 'ನಾಚಿಕೆಗೇಡು ಮತ್ತು ಬಾಲಿಶತನದ ವರ್ತನೆ'. ಕಳೆದ 30 ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಈಗ ಇಂತಹ ಸನ್ನಿವೇಶದಲ್ಲಿ ಭಾರವಾದ ಹೃದಯದೊಂದಿಗೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಅವರು ತಿಳಿಸಿದರು.

'ಪಕ್ಷದ ಹೈಕಮಾಂಡ್‌ ಸೇನಾಪಡೆಗಳ ಸ್ಥೈರ್ಯ ಕುಂದಿಸುವ ಪ್ರಯತ್ನ ಮಾಡಿದ್ದಲ್ಲದೆ, ಭಯೋತ್ಪಾದಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದೆ. ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರು ತೋರಿದ ದಾರಿ ಬಿಟ್ಟು ಈಗಿನ ಕಾಂಗ್ರೆಸ್ ಹೈಕಮಾಂಡ್‌ ಬಹಳ ದೂರ ಹೋಗಿಬಿಟ್ಟಿದೆ' ಎಂದು ಶರ್ಮಾ ಆರೋಪಿಸಿದರು.

'ಇಂದು ಕಾಂಗ್ರೆಸ್ ಸದಸ್ಯರು ಪಾಕಿಸ್ತಾನಿ ಏಜೆಂಟರಂತೆ ಕಾಣಿಸುತ್ತಿದ್ದಾರೆ. ನಾನು ಒಬ್ಬ ಕಾಂಗ್ರೆಸಿಗನೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಪಕ್ಷಕ್ಕಿಂತ ದೇಶವೇ ಮೇಲು. ಹೀಗಾಗಿ ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಶರ್ಮಾ ಪತ್ರದಲ್ಲಿ ವಿವರಿಸಿದ್ದಾರೆ.

ವೈಮಾನಿಕ ದಾಳಿ ಕುರಿತು ಹೈಕಮಾಂಡ್‌ ತಳೆದ ನಿಲುವಿಗೆ ಪಕ್ಷದ ಹಲವಾರು ಕಾರ್ಯಕರ್ತರು ತೀವ್ರ ಅಸಮಾಧಾನ ಹೊಂದಿದ್ದು, ತಮ್ಮನ್ನು ಅನುಸರಿಸಿ ಕಾಂಗ್ರೆಸ್ ತೊರೆಯಲಿದ್ದಾರೆ ಎಂದು ಶರ್ಮಾ ನುಡಿದರು.

'ಕ್ಷುಲ್ಲಕ ರಾಜಕೀಯ'ವೇ ದೇಶಕ್ಕಿಂತ ಮುಖ್ಯವೆಂದು ಪ್ರತಿಪಾದಿಸುವ ಪಕ್ಷವನ್ನು ಸೇರುವುದಾಗಿ ಶರ್ಮಾ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ