ಆ್ಯಪ್ನಗರ

ವಡೋದರಾದಲ್ಲಿ ತ್ಯಾಜ್ಯಗುಂಡಿ ಸ್ವಚ್ಛತೆ ವೇಳೆ ಉಸಿರುಗಟ್ಟಿ 7 ಸಾವು: ಆನಂದ್‌ ಮಹೀಂದ್ರ ತೀವ್ರ ಕಳವಳ

ಗುಜರಾತ್‌ನ ವಡೋದರಾ ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕ್ಷೇತ್ರವಾಗಿದ್ದು, ಅಲ್ಲಿ ಮಲಗುಂಡಿ ಸ್ವಚ್ಛತೆ ವೇಳೆ ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನಪ್ಪಿರುವುದು ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Vijaya Karnataka Web 16 Jun 2019, 11:15 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭೆಗೆ ಸ್ಪರ್ಧಿಸಿದ್ದ ಗುಜರಾತ್‌ನ ವಡೋದರಾದಲ್ಲಿ ಮ್ಯಾನ್‌ಹೋಲ್‌ ಸ್ವಚ್ಛತೆ ವೇಳೆ 7 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಮಹೀಂದ್ರ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ.
Vijaya Karnataka Web Anand Mahindra


ಸಾಕೋ ಸಾಕು. ಮನುಷ್ಯನ ಜೀವನವನ್ನು ಅಧಃಪತನಕ್ಕೆ ಇಳಿಸುವ ಇಂತಹ ಘಟನೆಗಳು ನಿಲ್ಲಬೇರು. ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ ಸ್ವಯಂಚಾಲಿತ ಮಷಿನ್‌ ಬಂಡಿಕೂಟ್‌ ಬಗ್ಗೆ ಟ್ವೀಟ್‌ ಮಾಡಿದ್ದೇನೆ. ಇದು ಯುವ ವಿದ್ಯಾರ್ಥಿಗಳು ಮತ್ತು ಇತರ ಸಂಶೋಧಕರು ಸೃಷ್ಟಿಸಿದ ಯಂತ್ರವಾಗಿದೆ. ಅಂತಹ ಯಂತ್ರ ಪ್ರಚಲಿತಗೊಳ್ಳದಿರಲು ಕಾರಣವೇನು? ಹಣದ ಅಗತ್ಯವಿದ್ದರೆ ನನ್ನನ್ನು ಕೇಳಿ ಎಂದು ಆನಂದ್‌ ಮಹೀಂದ್ರ ಟ್ವೀಟ್‌ ಮಾಡಿದ್ದಾರೆ.


ಆನಂದ್‌ ಮಹೀಂದ್ರ ಅವರ ಟ್ವೀಟ್‌ಗೆ ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಪ್ರತಿಕ್ರಿಯಿಸಿದ್ದು, ಪೌರಕಾರ್ಮಿಕರಿಗೆ 25 ಯಂತ್ರಗಳು ಮತ್ತು ಒಂದು ಟ್ರಕ್‌ ಕೊಟ್ಟಿದ್ದೇನೆ. ಔರಂಗಬಾದ್‌ನ ಕಂಪನಿ ಇವುಗಳನ್ನು ತಯಾರಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.


ಗುಜರಾತ್‌ನ ವಡೋದರಾದಲ್ಲಿ ಹೋಟೆಲ್‍‌ ಒಂದರ ತ್ಯಾಜ್ಯ ಗುಂಡಿಯನ್ನು ಸ್ವಚ್ಛಗೊಳಿಸಲು ಒಳಗೆ ಇಳಿದಿದ್ದ ವೇಳೆ ನಾಲ್ವರು ಪೌರಕಾರ್ಮಿಕರು ಸೇರಿ ಏಳುಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವಡೋದರಾದ ಫರ್ತಿಕುಯಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.


ಅಮಿತಾಬ್‌ ಬಚ್ಚನ್‌ ಅವರ ಕಾರ್ಯಕ್ಕೆ ಆನಂದ ಮಹೀಂದ್ರ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ