ಆ್ಯಪ್ನಗರ

ಮದುವೆ ಪ್ರಸ್ತಾಪ ನಿರಾಕರಿಸಿದ ವೇಶ್ಯೆಯನ್ನು ಕತ್ತು ಸೀಳಿ ಕೊಲೆಗೈದ ವಿವಾಹಿತ!

ವಿವಾಹ ಪ್ರಸ್ತಾಪ ತಿರಸ್ಕರಿಸಿದ ವೇಶ್ಯೆಯನ್ನು ಭೀಕರವಾಗಿ ಹತ್ಯೆಗೈದಿರುವ ದಾರುಣ ಘಟನೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ.

TIMESOFINDIA.COM 1 Sep 2019, 3:39 pm
ಹೊಸದಿಲ್ಲಿ: ವಿವಾಹ ಪ್ರಸ್ತಾವ ತಿರಸ್ಕರಿಸಿದ ಮಹಿಳೆಯನ್ನು ಭೀಕರವಾಗಿ ಹತ್ಯೆಗೈಯುವ ಮೂಲಕ ನಗರದ ಜಿಬಿ ರಸ್ತೆಯ ವೇಶ್ಯಾಗೃಹವೊಂದರಲ್ಲಿ ಆರಂಭವಾದ ಪ್ರೇಮ ಸಂಬಂಧವೊಂದು ಕೊಲೆಯಲ್ಲಿ ಅಂತ್ಯ ಕಂಡಿದೆ.
Vijaya Karnataka Web sex worker


ಲತಾ ಕೊಲೆಯಾದ ಮಹಿಳೆ. ಮಹಮ್ಮದ್ ಅಯೂಬ್ ಕೊಲೆ ಮಾಡಿದ ಆರೋಪಿ.

ಏನಿದು ಪ್ರಕರಣ?

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಲತಾ ಎಂಬ ಮಹಿಳೆ ಮತ್ತು ಮಹಮ್ಮದ್ ಅಯೂಬ್ ಎಂಬಾತನಿಗೂ ಕೆಲವು ತಿಂಗಳಿಂದ ಪ್ರೇಮವಿತ್ತು. ವೇಶ್ಯಾವಾಟಿಕೆ ವೃತ್ತಿ ಬಿಟ್ಟು, ತನ್ನನ್ನು ವಿವಾಹವಾಗುವಂತೆ ಆತ ಸದಾ ಆಕೆಯನ್ನು ಒತ್ತಾಯಿಸುತ್ತಿದ್ದ. ಆದರೆ, ಪ್ರಿಯಕರನ ಮಾತನ್ನು ಲತಾ ನಿರಾಕರಿಸಿದ್ದಳು. ಇದರಿಂದ ಕುಪಿತನಾದ ಆರೋಪಿ ಮಹಮ್ಮದ್, ಲತಾಳ ಕೊಲೆಗೆ ಸಂಚು ರೂಪಿಸಿದ.

ಹೊರಗಡೆ ಸುತ್ತಾಡಿಸುವ ನೆಪದಿಂದ ಲತಾಳನ್ನು ಕರೆದುಕೊಂಡು ಹೋದ ಮಹಮ್ಮದ್ ಅಯೂಬ್, ರೋಹಿಣಿಯ ಬವಾನ ಕಾಲುವೆ ಬಳಿ ಸ್ಕೂಟರ್ ನಿಲ್ಲಿಸಿ ಎಂದಿನಂತೆ ಸಹಜವಾಗಿ ಮಾತನಾಡಿದ. ಬಳಿಕ ಏಕಾಏಕಿ ತನ್ನಲ್ಲಿದ್ದ ಚಾಕುವಿನಿಂದ ಲತಾಳ ಕತ್ತು ಸೀಳಿ, ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ ಕಾಲುವೆಯಲ್ಲಿ ಎಸೆದು ಪರಾರಿಯಾದ.

ಘಟನೆ ಸಂಬಂಧ ತನಿಖೆ ಆರಂಭಿಸಿದ್ದ ದಿಲ್ಲಿ ಪೊಲೀಸರು, ಶುಕ್ರವಾರ ಆರೋಪಿ ಮಹಮ್ಮದ್ ಅಯೂಬ್‌ನನ್ನು ಬಂಧಿಸಿದ್ದಾರೆ. ಆಕೆಯನ್ನು ಕರೆದೊಯ್ದಿದ್ದ ಸ್ಕೂಟರ್‌ನ್ನು ಸಹ ವಶಕ್ಕೆ ಪಡೆದಿದ್ದಾರೆ.

ನಗರದ ಜಿಬಿ ರಸ್ತೆಯಲ್ಲಿರುವ ವೇಶ್ಯಾಗೃಹವೊಂದರಲ್ಲಿ ಪರಿಚಯವಾದ ಲತಾ ಎಂಬ ವೇಶ್ಯೆಯನ್ನು ಪ್ರೀತಿಸುತ್ತಿದ್ದ. ವೇಶ್ಯೆ ವೃತ್ತಿಯನ್ನು ಬಿಟ್ಟು, ನನ್ನನ್ನು ವಿವಾಹವಾಗುವಂತೆ ಕೇಳಿಕೊಂಡೆ. ಆದರೆ, ಆಕೆ ನಿರಾಕರಿಸಿದಳು. ಹೀಗಾಗಿ ಆಕೆಯನ್ನು ಕೊಲೆಗೈದೆ ಎಂದು ಆರೋಪಿ ಅಯೂಬ್ ಪೊಲೀಸ್ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.

ಈಗಾಗಲೇ ಕೊಲೆ ಆರೋಪಿ ಮಹಮ್ಮದ್ ಅಯೂಬ್‌ಗೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ