ಆ್ಯಪ್ನಗರ

ಗಲಭೆಕೋರರು ಒದ್ದರು ಈಕೆಯ ಹೊಟ್ಟೆಗೆ: ಮರುದಿನ ಜನ್ಮವಿತ್ತಳು ಮಿರಾಕಲ್ ಬೇಬಿಗೆ!

ಸಿಎಎ ದಂಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಸಾಮಾನ್ಯ ಜನತೆಯ ಬದುಕನ್ನು ದುಸ್ತರ ಮಾಡಿದೆ. ಗಲಭೆಕೋರರ ಅಮಾನವೀಯ ದಾಳಿಗಳಿಂದಾಗಿ ಹಲವು ಕುಟುಂಬಗಳು ಸರ್ವಸ್ವವನ್ನೂ ಕಳೆದುಕೊಂಡಿವೆ. ಗರ್ಭವತಿಯಾಗಿದ್ದ ಶಬಾನಾ ಪರ್ವೀನ್ ಮೇಲೆ ಏಕಾಏಕಿ ದಾಳಿ ಮಾಡಿದ ಗಲಭೆಕೋರರು, ಆಕೆಯ ಹೊಟ್ಟೆಗೆ ಒದ್ದು ರಾಕ್ಷಸೀ ಕೃತ್ಯ ಎಸಗಿದ್ದರು. ಆದರೂ ಪರ್ವೀನ್ ಆಶ್ಚರ್ಯಕರ ರೀತಿಯಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವುದು ಸಂತಸದ ವಿಷಯ.

Vijaya Karnataka Web 28 Feb 2020, 1:38 pm
ನವದೆಹಲಿ: ಸಿಎಎ ದಂಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಸಾಮಾನ್ಯ ಜನತೆಯ ಬದುಕನ್ನು ದುಸ್ತರ ಮಾಡಿದೆ. ಗಲಭೆಕೋರರ ಅಮಾನವೀಯ ದಾಳಿಗಳಿಂದಾಗಿ ಹಲವು ಕುಟುಂಬಗಳು ಸರ್ವಸ್ವವನ್ನೂ ಕಳೆದುಕೊಂಡಿವೆ.
Vijaya Karnataka Web Shaban Parveen
Shabana Parveen


ಮನೆ ಮನೆಗೆ ನುಗ್ಗಿ ಮುಗ್ಧ ಜನರ ಮೇಲೆ ಹಲ್ಲೆ ಮಾಡಿರುವ ಗಲಭೆಕೋರರು, ಮಕ್ಕಳು, ಮಹಿಳೆಯರು, ವೃದ್ಧರೆನ್ನದೇ ಎಲ್ಲರ ಮೇಲೂ ಪೈಶಾಚಿಕವಾಗಿ ಹಲ್ಲೆ ಮಾಡಿದ್ದಾರೆ. ಗಲಭೆಕೋರರ ದಾಳಿಗೆ ದೆಹಲಿಯ ಶಬಾನಾ ಪರ್ವೀನ್ ಎಂಬ ಗರ್ಭವತಿ ಕೂಡ ಅಕ್ಷರಶ: ನಲುಗಿ ಹೋಗಿದ್ದಳು.

ಹೌದು ಗರ್ಭವತಿಯಾಗಿದ್ದ ಶಬಾನಾ ಪರ್ವೀನ್ ಮೇಲೆ ಏಕಾಏಕಿ ದಾಳಿ ಮಾಡಿದ ಗಲಭೆಕೋರರು, ಆಕೆಯ ಹೊಟ್ಟೆಗೆ ಒದ್ದು ರಾಕ್ಷಸೀ ಕೃತ್ಯ ಎಸಗಿದ್ದರು. ಆದರೂ ಪರ್ವೀನ್ ಆಶ್ಚರ್ಯಕರ ರೀತಿಯಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿರುವುದು ಸಂತಸದ ವಿಷಯ.

ದೆಹಲಿ ಪೊಲೀಸ್ ಕಮಿಷನರ್ ಆಗಿ ಶ್ರೀವಾತ್ಸವ್ ನೇಮಕ: ದಂಗೆ ಅಡಗಿಸಲಿದ್ದಾರಾ ಜನರ ಸೇವಕ?
ಇಲ್ಲಿನ ಕರ್ವಾಲ್ ನಗರದಲ್ಲಿ ವಾಸಿಸುವ ಶಬಾನಾ ಪರ್ವೀನ್ ಕುಟುಂಬದ ಮೇಲೆ ರಾತ್ರಿ ವೇಳೆ ಗಲಭೆಕೋರರು ದಾಳಿ ಮಾಡಿದ್ದರು. ಪರ್ವೀನ್ ಗಂಡನ ಮೇಲೆ ಎರಗಿದ ದಾಳಿಕೋರರು, ಪರ್ವೀನ್ ಅವರ ಹೊಟ್ಟೆಎ ಒದ್ದು ತೀವ್ರವಾಗಿ ಹಲ್ಲೆ ನಡೆಸಿದ್ದರು.

ಪೊಲೀಸರು ಬರುತ್ತಿರುವ ಸುದ್ದಿ ಕೇಳಿ ಗಲಭೆಕೋರರು ಸ್ಥಳದಿಂದ ಕಾಲ್ಕಿತ್ತ ಮೇಲೆ ಪರ್ವೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ವೈದ್ಯರ ಸತತ ಪ್ರಯತ್ನದ ಬಳಿಕ ಪರ್ವೀನ್ ಇದೀಗ ಮುದ್ದಾದ ಗಂಡು ಮಗಿವಿಗೆ ಜನ್ಮ ನೀಡಿದ್ದಾಳೆ.

ಸಿಎಎ ದಂಗೆ ಇದುವರೆಗೂ ದೆಹಲಿಯ 38 ಮುಗ್ಧ ಜನರನ್ನು ಬಲಿ ತೆಗೆದುಕೊಂಡಿದ್ದು, ೨೦೦ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ