ಆ್ಯಪ್ನಗರ

ಶಹೀನ್‌ ಬಾಗ್‌ನಲ್ಲಿ ಗುಂಡು ಹಾರಿಸಿದ್ದ ಕಪಿಲ್‌ ಗುಜ್ಜರ್‌ ಬಿಜೆಪಿಗೆ ಸೇರ್ಪಡೆ

​​ಕಳೆದ ವರ್ಷ ಫೆಬ್ರವರಿ 1ರಂದು ಶಹೀನ್‌ ಬಾಗ್‌ನಲ್ಲಿ ಪ್ರತಿಭಟನಾನಿರತರಾಗಿದ್ದ ಮಹಿಳೆಯರ ವಿರುದ್ಧ ಕಿಡಿಕಾರಿದ್ದ ಕಪಿಲ್‌ ಗುಜ್ಜರ್‌, ಪ್ರತಿಭಟನಾ ಸ್ಥಳಕ್ಕೆ ತೆರಳಿ ಗಾಳಿಯಲ್ಲಿ ಗುಂಡಿ ಹಾರಿಸಿ ಬೆದರಿಕೆ ಒಡ್ಡಿದ್ದ.

Agencies 30 Dec 2020, 6:04 pm
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಕಳೆದ ವರ್ಷ ಶಹೀನ್‌ ಬಾಗ್‌ ಪ್ರದೇಶದಲ್ಲಿ ನಡೆದ ದೀರ್ಘಕಾಲದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಿದ್ದ ಕಪಿಲ್‌ ಗುಜ್ಜರ್‌ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ.
Vijaya Karnataka Web Kapil Gujjar


ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ಸ್ಥಳೀಯ ನಾಯಕರ ಸಮ್ಮುಖದಲ್ಲಿ ಆತ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪೂರ್ವ ದಿಲ್ಲಿಯ ದಲ್ಲುಪುರ ಪ್ರದೇಶ ನಿವಾಸಿಯಾದ ಕಪಿಲ್‌, ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, "ಹಿಂದುತ್ವದ ಬಲವರ್ಧನೆಗಾಗಿ ಬಿಜೆಪಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷ ಇರಿಸುವ ಪ್ರತಿ ಹೆಜ್ಜೆಗೂ ಬೆಂಬಲ ನೀಡುತ್ತೇನೆ," ಎಂದಿದ್ದಾನೆ.

ಕಳೆದ ವರ್ಷ ಫೆಬ್ರವರಿ 1ರಂದು ಶಹೀನ್‌ ಬಾಗ್‌ನಲ್ಲಿ ಪ್ರತಿಭಟನಾನಿರತ ಮಹಿಳೆಯರ ವಿರುದ್ಧ ಕಿಡಿಕಾರಿದ್ದ ಕಪಿಲ್‌ ಗುಜ್ಜರ್‌, ಪ್ರತಿಭಟನಾ ಸ್ಥಳಕ್ಕೆ ತೆರಳಿ ಗಾಳಿಯಲ್ಲಿ ಗುಂಡಿ ಹಾರಿಸಿ ಬೆದರಿಕೆ ಒಡ್ಡಿದ್ದ.

ನಂತರದ ದಿನಗಳಲ್ಲಿ ಆತ ಎಎಪಿ ಕಾರ್ಯಕರ್ತ ಎಂಬ ಆರೋಪ ಕೇಳಿ ಬಂದಿತ್ತು. ಆತನ ಫೋನ್‌ನಲ್ಲಿ ಸಿಕ್ಕಿದ ಫೋಟೋದಲ್ಲಿ ಕಪಿಲ್‌ ಗುಜ್ಜಾರ್‌ ಎಎಪಿ ನಾಯಕರಾದ ಸಂಜಯ್‌ ಸಿಂಗ್‌ ಹಾಗೂ ಆತಿಶಿ ಜೊತೆ ಕಾಣಿಸಿಕೊಂಡಿದ್ದ. ಇದನ್ನೇ ಇಟ್ಟುಕೊಂಡು ಬಿಜೆಪಿ ಎಎಪಿ ವಿರುದ್ಧ ಮುಗಿಬಿದ್ದಿತ್ತು.

ಆದರೆ ಎಎಪಿ ಮತ್ತು ಗುಜ್ಜರ್‌ ಕುಟುಂಬ ಬಿಜೆಪಿ ವಾದವನ್ನು ತಳ್ಳಿ ಹಾಕಿತ್ತು. ಆ ಸಂದರ್ಭದಲ್ಲಿ ಗುಜ್ಜರ್‌ ಕುಟುಂಬ, 2012ರಲ್ಲಿ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗುಜ್ಜರ್‌ ತಂದೆ ಬಹುಜನ‌ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಆದರೆ ಯಾವತ್ತೂ ಎಎಪಿ ಜತೆ ನಂಟು ಹೊಂದಿರಲಿಲ್ಲ ಎಂದು ಹೇಳಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ