ಆ್ಯಪ್ನಗರ

ಅರ್ನಬ್‌, ರಿಪಬ್ಲಿಕ್‌ TV ವಿರುದ್ಧ ತರೂರ್‌ ಮಾನನಷ್ಟ ಮೊಕದ್ದಮೆ

ಪತ್ನಿ ಸುನಂದಾ ಪುಷ್ಕರ್‌ ಸಾವಿನ ವಿಚಾರವಾಗಿ ಅವಮಾನ ಮಾಡಿದ್ದಾರೆ ಎಂದು ದೂರಿ ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ, ರಿಪಬ್ಲಿಕ್‌ ಟಿವಿ ವಿರುದ್ಧ ಶಶಿತರೂರ್‌ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 27 May 2017, 10:50 am
ಹೊಸದಿಲ್ಲಿ: ಪತ್ನಿ ಸುನಂದಾ ಪುಷ್ಕರ್‌ ಸಾವಿನ ವಿಚಾರವಾಗಿ ಅವಮಾನ ಮಾಡಿದ್ದಾರೆ ಎಂದು ದೂರಿ ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಹಾಗೂ ರಿಪಬ್ಲಿಕ್‌ ಟಿವಿ ವಿರುದ್ಧ
Vijaya Karnataka Web shashi tharoor files defamation suit against arnab goswami republic tv in delhi hc
ಅರ್ನಬ್‌, ರಿಪಬ್ಲಿಕ್‌ TV ವಿರುದ್ಧ ತರೂರ್‌ ಮಾನನಷ್ಟ ಮೊಕದ್ದಮೆ

ಕಾಂಗ್ರೆಸ್‌ ಸಂಸದ ಶಶಿತರೂರ್‌ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಪತ್ನಿ ಸಾವಿಗೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿಯಲ್ಲಿ ಪ್ರಸಾರವಾದ ವರದಿಯುದ್ದಕ್ಕೂ ನನ್ನ ಮರ್ಯಾದೆ ಹರಾಜು ಹಾಕಿದ್ದಾರೆ. 2 ಕೋಟಿ ರೂ. ನಷ್ಟ ನೀಡಬೇಕು ಎಂದು ದಿಲ್ಲಿಯ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಶಶಿ ತರೂರ್‌ ಆಗ್ರಹಿಸಿದ್ದಾರೆ. ಜತೆಗೆ, ಸುನಂದಾ ಸಾವು ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಸುದ್ದಿ ಬಿತ್ತರಿಸದಂತೆ ಆದೇಶ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಮೇ.8 ರಿಂದ ಮೇ. 13ರ ವರೆಗೆ ಸುನಂದಾ ಪುಷ್ಕರ್‌ ಕೊಲೆ ಪ್ರಕರಣದ ಸುದ್ದಿ ಪ್ರಸಾರ ಮಾಡಲಾಗಿತ್ತು. ಇವೆಲ್ಲವೂ ಜನರಿಗೆ ಪ್ರಕರಣದ ಕುರಿತು ತಪ್ಪು ಸಂದೇಶ ಸಾರುವಂತಿತ್ತು. ಅಲ್ಲದೇ ತರೂರ್‌ ಅವರ ಸಾಮಾಜಿಕ ಜೀವನದ ಮೇಲೂ ಈ ಸುದ್ದಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತರೂರ್‌ ಪರ ವಕೀಲರಾದ ಮೊಹಮ್ಮದ್‌ ಅಲಿ ಖಾನ್‌ ಹಾಗು ಗೌರವ್‌ ಗುಪ್ತಾ ಅರ್ಜಿಯಲ್ಲಿ ದೂರಿದ್ದಾರೆ.

'ತಮ್ಮ ಪ್ರತಿವಾದಿಗಳು(ಗೋಸ್ವಾಮಿ ಹಾಗು ಸುದ್ದಿ ಮಾಧ್ಯಮ) ಪ್ರಸಾರ ಮಾಡಿದ ಸುದ್ದಿಯಲ್ಲಿ ಪ್ರಕರಣದ ಕುರಿತು ಯಾವುದೇ ವಿಷಯ ಇರಲಿಲ್ಲ ಬದಲಾಗಿ ನಮ್ಮ ಕಕ್ಷಿದಾರರೇ(ತರೂರ್‌) ಕೊಲೆಗಾರ ಅಥವಾ ಅವರ ಮೂಲಕವೇ ಕೊಲೆ ನಡೆದಿದೆ ಎಂಬ ಧಾಟಿಯಲ್ಲಿ ಸುದ್ದಿ ಬಿತ್ತರಿಸಲಾಗಿತ್ತು' ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ