ಆ್ಯಪ್ನಗರ

ಯೋಗಿ ಪವಿತ್ರ ಸ್ನಾನ: ಪಾಪ ಪರಿಹಾರಕ್ಕೆ ಎಂದು ಟ್ರೋಲ್‌ಗೊಳಗಾದ ಶಶಿ ತರೂರ್

ಗಂಗಾಮಾತೆಯನ್ನು ಸ್ವಚ್ಛವಾಗಿಯೂ ಇಡಬೇಕು ಮತ್ತು ಎಲ್ಲ ಪಾಪವನ್ನು ಸಹ ಅಲ್ಲೇ ತೊಳೆದುಕೊಳ್ಳಬೇಕು. ಈ ಸಂಗಮದಲ್ಲಿ ಎಲ್ಲರೂ ಬೆತ್ತಲು. ಜೈ ಗಂಗಾ ಮಾತಾ ಎಂದವರು ಟ್ವೀಟ್ ಮಾಡಿದ್ದರು.

Navbharat Times 30 Jan 2019, 4:13 pm
ತಿರುವನಂತಪುರಂ: ಉತ್ತರ ಪ್ರದೇಶದ ಸಚಿವ ಯೋಗಿ ಆದಿತ್ಯನಾಥ್ ಮತ್ತು ಅವರ ಸಂಪುಟದ ಸಚಿವರು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾಡಿರುವ ಟ್ವೀಟ್ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
Vijaya Karnataka Web yogi-adithyanath-02


ಗಂಗಾಮಾತೆಯನ್ನು ಸ್ವಚ್ಛವಾಗಿಯೂ ಇಡಬೇಕು ಮತ್ತು ಎಲ್ಲ ಪಾಪವನ್ನು ಸಹ ಅಲ್ಲೇ ತೊಳೆದುಕೊಳ್ಳಬೇಕು. ಈ ಸಂಗಮದಲ್ಲಿ ಎಲ್ಲರೂ ಬೆತ್ತಲು. ಜೈ ಗಂಗಾ ಮಾತಾ ಎಂದವರು ಟ್ವೀಟ್ ಮಾಡಿದ್ದರು.



ಈ ಟ್ವೀಟ್ ಈಗ ಭಾರಿ ಟ್ರೋಲ್‌ಗೊಳಗಾಗುತ್ತಿದ್ದು, ಬಿಜೆಪಿ ನಾಯಕರು ಮತ್ತು ಇತರರು ಸಹ ಸಾಮಾಜಿಕ ಜಾಲತಾಣದಲ್ಲಿ ತರೂರ್‌ಗೆ ತಿರುಗೇಟು ನೀಡುತ್ತಿದ್ದಾರೆ.

ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ ಸಿದ್ದಾರ್ಥನಾಥ್ ಕುಂಭ ಮೇಳದ ಮಹತ್ವ ಅವರಿಗೆ ಹೇಗೆ ತಾನೇ ಅರಿವಾಗಲು ಸಾಧ್ಯ? ಅವರು ಬೆಳೆದು ಬಂದಿರುವ ವಾತಾವರಣ, ಪಡೆದ ಸಂಸ್ಕಾರವೇ ಅಂತಹದ್ದು, ಇದೆಲ್ಲ ಅವರಿಗೆ ಅರ್ಥವಾಗುವ ಸಂಗತಿಯಲ್ಲ. ನೀವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೀರಿ. ಈ ಪವಿತ್ರ ಸಂಗಮದಲ್ಲಿ ಒಂದು ಬಾರಿ ಮುಳುಗೆದ್ದು ನಿಮ್ಮ ಪಾಪದ ಪ್ರಾಯಶ್ಚಿತ ಮಾಡಿಕೊಳ್ಳಬಹುದು.

ಸಾಮಾಜಿಕ ಜಾಲತಾಣದಲ್ಲಿ ತರೂರ್‌ಗೆ ತಪರಾಕಿ

ತರೂರ್ ಟ್ವೀಟ್‌ ಭಾರಿ ಟ್ರೋಲ್‌ಗೊಳಗಾಗುತ್ತಿದ್ದು ಒಬ್ಬರು ಕಾಂಗ್ರೆಸ್ ನಾಯಕ ಜವಾಹರ ಲಾಲ್ ನೆಹರು ಅವರ ಫೋಟೋವನ್ನು ಪ್ರಕಟಿಸಿದರೆ, ಮತ್ತೊಬ್ಬ ಯೂಸರ್ ಸೋನಿಯಾ, ಪ್ರಿಯಾಂಕಾ ರಾಹುಲ್ ಗಾಂಧಿ ಅವರ ಅಸ್ಥಿಯನ್ನು ಗಂಗೆಯಲ್ಲಿ ತೇಲಿ ಬಿಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ