ಆ್ಯಪ್ನಗರ

ಕ್ಯಾಪಿಟಲ್ ಹಿಂಸಾಚಾರದಲ್ಲಿ ತ್ರಿವರ್ಣ ಧ್ವಜ: ವರುಣ್ ಗಾಂಧಿ, ಶಶಿ ತರೂರ್ ನಡುವೆ ಟ್ವೀಟ್ ಸಮರ!

ಅಮೆರಕದ ಕ್ಯಾಪಿಟಲ್ ಭವನದ ಹಿಂಸಾಚಾರದ ವೇಳೆ ಭಾರತದ ತ್ರಿವರ್ಣ ಧ್ವಜ ಕಂಡುಬಂದಿದ್ದು, ಈ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ನಡುವೆ ಟ್ವೀಟ್ ಸಮರ ನಡೆದಿದೆ.

Vijaya Karnataka Web 8 Jan 2021, 5:25 pm
ಹೊಸದಿಲ್ಲಿ: ಅಮೆರಿಕದ ಸಂಸತ್ತು ಕ್ಯಾಪಿಟಲ್ ಭವನದ ಬಳಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆಯಲ್ಲಿ ಭಾರತದ ತ್ರಿವರ್ಣ ಧ್ವಜ ಕಂಡುಬಂದಿದ್ದು, ಈ ಕುರಿತು ಭಾರತದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Vijaya Karnataka Web Indian flag at pro-Trump rally
ಸಂಗ್ರಹ ಚಿತ್ರ


ಈ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ನಡುವೆ ಟ್ವೀಟ್ ಸಮರ ನಡೆದಿದ್ದು, ಕ್ಯಾಪಿಟಲ್ ದಾಳಿಯಲ್ಲಿ ಭಾರತದ ತ್ರಿವರ್ಣ ಧ್ವಜ ಕಂಡುಬಂದಿದ್ದಕ್ಕೆ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಯಾಪಿಟಲ್ ಗಲಭೆ ಸಮಯದಲ್ಲಿ ಭಾರತದ ತ್ರಿವರ್ಣ ಧ್ವಜ ಕಂಡುಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಈ ಹೋರಾಟದಲ್ಲಿ ಭಾರತೀಯರು ಭಾಗವಹಿಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಕ್ಯಾಪಿಟಲ್ ಗದ್ದಲದಲ್ಲಿ ಭಾರತದ ತ್ರಿವರ್ಣ ಧ್ವಜ: ಅಮೆರಿಕ ಸಂಸತ್ ಮುತ್ತಿಗೆಯಲ್ಲಿ ಅನಿವಾಸಿ ಭಾರತೀಯರು?

ಇದಕ್ಕೆ ಉತ್ತರ ನೀಡಿರುವ ಶಶಿ ತರೂರ್, ''ಕೆಲವು ಭಾರತೀಯರೂ ಟ್ರಂಪ್ ಬೆಂಬಲಿಗರ ಮನಸ್ಥಿತಿಯನ್ನೇ ಹೊಂದಿದ್ದಾರೆ. ಇವರು ಭಾರತದ ತ್ರಿವರ್ಣ ಧ್ವಜವನ್ನು ಒಂದು ಶಸ್ತ್ರವನ್ನಾಗಿ ಬಳಸುತ್ತಾರೆಯೇ ಹೊರತು ಅದನ್ನು ಗೌರವದ ಸಂಕೇತವನ್ನಾಗಿ ನೋಡುವುದಿಲ್ಲ. ಅಲ್ಲದೇ ತಮ್ಮ ಸಿದ್ಧಾಂತ ವಿರೋಧಿಗಳನ್ನು ರಾಷ್ಟ್ರದ್ರೋಹಿಗಳನ್ನಾಗಿ ನೋಡುವ ಮನಸ್ಥಿತಿಯುಳ್ಳವರಾಗಿದ್ದಾರೆ. ಅಮೆರಿಕದಲ್ಲಿ ಕಂಡುಬಂದ ಭಾರತದ ಧ್ವಜ ನಮಗೆಲ್ಲರಿಗೂ ಎಚ್ಚರಿಕೆಯ ಕರೆಗಂಟೆ..'' ಎಂದು ಹೇಳಿದ್ದಾರೆ.


ಶಶಿ ತರೂರ್ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ವರುಣ್ ಗಾಂಧಿ, ''ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಉದಾರವಾದಿಗಳು ರಾಷ್ಟ್ರಧ್ವಜವನ್ನು ದೇಶವಿರೋಧಿ ಪ್ರತಿಭಟನೆಗಳಲ್ಲಿ ಬಳಸುತ್ತಿದ್ದಾರೆ. ಜೆಎನ್‌ಯು ಪ್ರಕರಣದಲ್ಲಿ ಇದು ಸಾಬೀತಾಗಿದೆ. ರಾಷ್ಟ್ರಧ್ವಜದ ದುರುಪಯೋಗದ ಎಚ್ಚರಿಕೆಗಳನ್ನು ಉದಾರವಾದಿಗಳು ಸ್ಪಷ್ಟವಾಗಿ ನಿರ್ಲಕ್ಷಿಸಿದ್ದಾರೆ..''ಎಂದು ತಿರುಗೇಟು ನೀಡಿದ್ದಾರೆ.

ಕ್ಯಾಪಿಟಲ್ ಹಿಂಸಾಚಾರ ಖಂಡಿಸಿದ ಪ್ರಧಾನಿ: ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮೋದಿ ಮನವಿ!

ಒಟ್ಟಿನಲ್ಲಿ ಕ್ಯಾಪಿಟಲ್ ಗಲಭೆಯಲ್ಲಿ ಭಾರತದ ತ್ರಿವರ್ಣ ಧ್ವಜ ಕಂಡುಬಂದ ಕಾರಣಕ್ಕೆ, ಭಾರತದಲ್ಲಿ ಈ ಕುರಿತು ತೀವ್ರ ಚರ್ಚೆ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ