ಆ್ಯಪ್ನಗರ

ಮೋದಿಗೆ ಮತ್ತೆ ಶತ್ರುಘ್ನ ಟಾಂಗ್‌

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಲ್ಲಿ ಪ್ರಧಾನಿಯಾಗುವ ಅಪೇಕ್ಷೆ ಹೊರಹಾಕಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಕರ್ನಾಟಕ ಚುನಾವಣೆ ಪ್ರಚಾರದ ವೇಳೆ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಸರಣಿ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

Vijaya Karnataka 13 May 2018, 9:27 am
ಪಟನಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಲ್ಲಿ ಪ್ರಧಾನಿಯಾಗುವ ಅಪೇಕ್ಷೆ ಹೊರಹಾಕಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಕರ್ನಾಟಕ ಚುನಾವಣೆ ಪ್ರಚಾರದ ವೇಳೆ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಸರಣಿ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.
Vijaya Karnataka Web Modi- shatrugna sinha


''ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ ರಾಹುಲ್‌ ರಾಜಕೀಯದಲ್ಲಿ ಪ್ರಬುದ್ಧತೆ ತೋರುತ್ತಿದ್ದಾರೆ. ತಮ್ಮದೇ ಶೈಲಿಯ ಕಾರ್ಯಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಕ್ರಮೇಣ ಜನಪ್ರಿಯತೆ ಪಡೆಯುತ್ತಿದ್ದಾರೆ. ದೇಶದ ಅತ್ಯಂತ ಹಳೆಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಅವರು, ತಮ್ಮ ಪಾರ್ಟಿಗೆ ಬಹುಮತ ಬಂದಲ್ಲಿ ಪ್ರಧಾನಿಯಾಗುವೆ ಎಂದು ಅಪೇಕ್ಷೆ ಹೊರಹಾಕಿದ್ದರಲ್ಲಿ ತಪ್ಪೇನಿದೆ? ಅವರ ಹೇಳಿಕೆಯನ್ನು ಸ್ಪರ್ಧಾತ್ಮಕವಾಗಿ ಸ್ವಾಗತಿಸುವ ಬದಲು ವ್ಯಂಗ್ಯಭರಿತ ಶೈಲಿಯಲ್ಲಿ ಟೀಕಿಸುವುದೇಕೆ?,'' ಎಂದು ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ. ''ಈ ದೇಶದಲ್ಲಿ ಅರ್ಹತೆ ಇರುವ ಯಾರು ಬೇಕಾದರೂ ಪ್ರಧಾನಿಯಾಗಬಹುದು. ಅಗತ್ಯ ಸಂಸದರ ಸಂಖ್ಯಾಬಲವಿದ್ದರೆ ನಾಮ್‌ದಾರ್‌, ಕಾಮ್‌ದಾರ್‌, ದಾಮ್‌ದಾರ್‌ ಅಥವಾ ಸಮಜ್‌ಧಾರ್‌ಯಾರಾದರೂ ಪಿಎಂ ಆಗಬಹುದು,'' ಎಂದು ಸಿನ್ಹಾ ಹೇಳಿದ್ದಾರೆ.

''ರಾಹುಲ್‌ ಹೇಳಿಕೆ ಬಗ್ಗೆ ನಾವೇಕೆ ಇಷ್ಟೊಂದು ಬಡಬಡಿಸಬೇಕು? ಎಷ್ಟಾದರೂ ಅದು ಕಾಂಗ್ರೆಸ್‌ನ ಆಂತರಿಕ ವಿಚಾರ. ಪ್ರಜಾಪ್ರಭುತ್ವದಲ್ಲಿ ಬಹುಮತವೇ ಮುಖ್ಯವಾಗುತ್ತದೆ,'' ಎಂದು ಟ್ವೀಟ್‌ ಮಾಡಿ, 'ಜೈ ಕರ್ನಾಟಕ, ಜೈ ಹಿಂದಿ!' ಎಂಬ ಘೋಷಣೆಯೊಂದಿಗೆ ಅದನ್ನು ಮೋದಿ ಹಾಗೂ ಬಿಜೆಪಿ ಜತೆಗೆ ಟ್ಯಾಗ್‌ ಮಾಡಿದ್ದಾರೆ. ಇತ್ತೀಚೆಗೆ ಬಿಜೆಪಿ ತೊರೆದ ಹಿರಿಯ ಮಾಜಿ ಕೇಂದ್ರ ಸಚಿವ ಯಶವಂತ್‌ ಸಿನ್ಹಾ ಅವರೊಟ್ಟಿಗೆ ಗುರುತಿಸಿಕೊಂಡಿರುವ ಶತ್ರುಘ್ನ ಸಿನ್ಹಾ 2015ರಿಂದಲೂ ಮೋದಿ ವಿರುದ್ಧ ಬಂಡಾಯ ಸಾರುತ್ತಲೇ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ