ಆ್ಯಪ್ನಗರ

ದಿಲ್ಲಿ ಸರಕಾರಿ ಬಸ್‌ನಲ್ಲಿ ಶೀಲಾ ದೀಕ್ಷಿತ್‌ ಪ್ರೇಮ್‌ ಕಹಾನಿ: ವಿನೋದ್‌ ಪ್ರಪೋಸ್‌ ಮಾಡಿದ್ದು ಹೇಗೆ...

ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌ ಹಾಗೂ ವಿನೋದ್‌ ದೀಕ್ಷಿತ್‌ ಅವರ ಲವ್‌ ಸ್ಟೋರಿ ಕಾಲೇಜಿನಲ್ಲೇ ಆರಂಭವಾಗಿತ್ತಂತೆ. ಅಷ್ಟೇ ಅಲ್ಲ ದಿಲ್ಲಿ ಸಾರಿಗೆ ನಿಗಮದ ಬಸ್‌ನಲ್ಲಿ ವಿನೋದ್‌ ವಿಶೇಷ ರೀತಿಯಲ್ಲಿ ಅವರಿಗೆ ಪ್ರಪೋಸ್‌ ಮಾಡಿದ್ದರಂತೆ!

Samayam Telugu 20 Jul 2019, 8:43 pm
ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವರ ಪ್ರೇಮ ಪಯಣ ಎಲ್ಲರಂಥಲ್ಲ. ಒಂಚೂರು ಡಿಫರೆಂಟ್‌ ಅನ್ನಬಹುದು.
Vijaya Karnataka Web sheila4


ರಾಜಕೀಯದಲ್ಲಿ ಗಟ್ಟಿ ಮಹಿಳೆ ಎಂದೇ ಪ್ರಸಿದ್ಧರಾಗಿದ್ದ ಶೀಲಾ ದೀಕ್ಷಿತ್‌ ಅವರಿಗೆ ತಮಗಿಂತ ಆರ್ಥಿಕವಾಗಿ ಹಾಗೂ ದೈಹಿಕವಾಗಿ ಬಲು ಎತ್ತರದ ವ್ಯಕ್ತಿ ಜತೆ ಪ್ರೇಮಾಂಕುರವಾಗಿತ್ತು!

ಇತಿಹಾಸ ವಿಭಾಗದಲ್ಲಿ ಎಂಎ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದ ವೇಳೆ, ತಮ್ಮ ಸಹಪಾಠಿ ವಿನೋದ್‌ ದೀಕ್ಷಿತ್‌ ಜತೆ ಅವರಿಗಾಗಿ ಮನಸ್ಸು ಮಿಡಿದಿತ್ತು. ಆದರೆ ಇವರಿಬ್ಬರೂ ತಮ್ಮ ಕಲಿಕೆಯ ದಿನಗಳಂದು ತಮ್ಮ ಪ್ರೀತಿಯ ವಿಚಾರ ಹೇಳಿಕೊಂಡಿದ್ದಲ್ಲವಂತೆ! ಪ್ರತಿ ದಿನವೂ ಸಿಕ್ಕಿ ಮಾತನಾಡಿಕೊಂಡು, ಸಲಿಗೆಯ ಸ್ನೇಹ ಇಬ್ಬರಲ್ಲೂ ಇದ್ದರೂ, ಒಂದು ದಿನವೂ ಪ್ರೀತಿ ಪ್ರೇಮದ ಸಂಗತಿ ಎತ್ತಿಲ್ಲವಂತೆ!

ಫಸ್ಟ್‌ ಪ್ರಪೋಸ್‌ ಮಾಡಿದ್ದು ಯಾರು?
ಶೀಲಾ ಸ್ನೇಹಿತಿ ಹಾಗೂ ವಿನೋದ್‌ ಅವರ ಸ್ನೇಹಿತ ಪರಸ್ಪರ ಪ್ರೇಮದಲ್ಲಿದ್ದರು. ಇವಳ ಜಗಳ ಸರಿಪಡಿಸಲು ವಿನೋದ್‌ ಹಾಗೂ ಶೀಲಾ ಮುಂದಾದರು. ಆ ಘಟನೆಯ ಬಳಿಕ ಶೀಲಾ-ವಿನೋದ್‌ ಜತೆಯಲ್ಲೇ ಓಡಾಡುತ್ತಿದ್ದರು. ಪರಸ್ಪರ ಉತ್ತಮ ಸ್ನೇಹಿತರಾಗಿದ್ದರು. ಎಂಎ ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ವಿನೋದ್‌ ತಮ್ಮ ಬಳಿ ನನಗೆ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಹುಡುಗಿ ನೋಡಿದ್ದಾರೆ ಎಂದು ಹೇಳಿದರಂತೆ. ಅದೂ ಕೂಡ ಡಿಟಿಸಿ(ದಿಲ್ಲಿ ಸಾರಿಗೆ ನಿಗಮ)ದ ಬಸ್‌ನಲ್ಲಿ ಹತ್ತಿರ ಕೂತು ಈ ವಿಚಾರ ಮಾತಾಡಿದರಂತೆ.


ಮನದ ಬೇಸರ, ಆತಂಕದ ಜತೆಗೇ ಶೀಲಾ, ಹುಡುಗಿ ಯಾರು, ಅವಳು ಒಪ್ಪಿಕೊಂಡಿದ್ದಾಳಾ ಎಂದು ಕೇಳಿದರಂತೆ. ಆಗ ವಿನೋದ್‌, ಇನ್ನೂ ಕೇಳಿಲ್ಲ. ಬಸ್‌ನಲ್ಲಿ ನನ್ನ ಪಕ್ಕದಲ್ಲೇ ಕೂತಿದ್ದಾಳೆ. ಇನ್ನು ಕೇಳಬೇಕು ಎಂದಿದ್ದೇನೆ ಎಂದರಂತೆ! ತಮ್ಮ ಮದುವೆ ಹಾಗೂ ಪ್ರೇಮ್ ಕಹಾನಿ ಬಗ್ಗೆ ಶೀಲಾ ದೀಕ್ಷಿತ್‌ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದರು.

ಹೃದಯಾಘಾತದಿಂದ ದಿಲ್ಲಿ ಮಾಜಿ ಸಿಎಂ, ಕಾಂಗ್ರೆಸ್‌ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ ನಿಧನ

ಇಬ್ಬರ ಸಂಬಂಧವನ್ನು ಮನೆಯಲ್ಲಿ ಒಪ್ಪಿಕೊಳ್ಳಲು ಎರಡು ವರ್ಷವೇ ಬೇಕಾಯಿತು. ವಿನೋದ್‌ ಐಎಎಸ್‌ ಪರೀಕ್ಷೆಗೆ ಸಿದ್ಧವಾಗುತ್ತಿದ್ದರು. ಹೀಗಾಗಿ ನಮ್ಮ ನಡುವೆ ತುಂಬಾ ದಿನಗಳ ಕಾಲ ಮಾತುಕತೆಗಳೇ ಇರಲಿಲ್ಲ. ವಿನೋದ್‌ ತಮ್ಮನ್ನು ಕುಟುಂಬವನ್ನು ಭೇಟಿ ಮಾಡಲು ಜನ್‌ಪತ್‌ನಲ್ಲಿರುವ ಹೋಟೆಲ್‌ ಗೆ ಕರೆದುಕೊಂಡು ಹೋಗಿದ್ದರು. ತುಂಬಾ ಭಯಪಟ್ಟಿದ್ದೆ. ವಿನೋದ್‌ ತಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೊನೆಯಲ್ಲಿ ನನ್ನನ್ನು ಮೆಚ್ಚಿದ್ದರು ಎಂದು ಶೀಲಾ ದೀಕ್ಷಿತ್‌ ಪುಸ್ತಕದಲ್ಲಿ ಬರೆದಿದ್ದಾರೆ.

ಈ ಸುದ್ದಿಯನ್ನು ತೆಲುಗು ಭಾಷೆಯಲ್ಲಿ ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ