ಆ್ಯಪ್ನಗರ

ಕಾಶ್ಮೀರಿಗಳ ಸ್ಥಳಾಂತರಕ್ಕೆ ಸ್ವಾಮಿ ಸಲಹೆ

ಗಲಭೆ ಪೀಡಿತ ಕಾಶ್ಮೀರದ ನಿವಾಸಿಗರನ್ನು ಕೂಡಲೇ ಅಲ್ಲಿಂದ ತೆರವುಗೊಳಿಸಿ ತಮಿಳುನಾಡಿನ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸುವುದರಿಂದ ಕಾಶ್ಮೀರದಲ್ಲಿನ ಹಿಂಸಾಚಾರ ಹತ್ತಿಕ್ಕಬಹುದು.

Agencies 19 Apr 2017, 7:00 am

ಹೊಸದಿಲ್ಲಿ: ಗಲಭೆ ಪೀಡಿತ ಕಾಶ್ಮೀರದ ನಿವಾಸಿಗರನ್ನು ಕೂಡಲೇ ಅಲ್ಲಿಂದ ತೆರವುಗೊಳಿಸಿ ತಮಿಳುನಾಡಿನ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸುವುದರಿಂದ ಕಾಶ್ಮೀರದಲ್ಲಿನ ಹಿಂಸಾಚಾರ ಹತ್ತಿಕ್ಕಬಹುದು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಸಲಹೆ ನೀಡಿದ್ದಾರೆ.

ಕಾಶ್ಮೀರದ ಕಾಲೇಜು ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿಯ ಜತೆಗೆ ಸಂಘರ್ಷ ನಡೆಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು,''ಕಾಶ್ಮೀರದಿಂದ ಹಿಂದೂಗಳನ್ನು ತೆರವುಗೊಳಿಸಿದಂತೆ ಅವರೆಲ್ಲರನ್ನೂ ತೆರವುಗೊಳಿಸಬೇಕು. ಕೆಲವು ವರ್ಷಗಳ ಕಾಲ ಅವರನ್ನು ತಮಿಳುನಾಡಿನ ನಿರಾಶ್ರಿತ ಶಿಬಿರಗಳಲ್ಲಿ ಇಡಬೇಕು,'' ಎಂದರು. ಕಣಿವೆಯಲ್ಲಿ ಹಿಂಸಾಚಾರ ಮುಂದುವರೆದಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ