ಆ್ಯಪ್ನಗರ

ಶಿರಡಿ: ಬಸ್‌ ಬಾರದ ಊರಿನಲ್ಲಿದೆ ವಿಮಾನ ನಿಲ್ದಾಣ

ಶಿರಡಿಯ ಕಾಕ್ಡಿಗೆ ಏರ್‌ಪೋರ್ಟ್‌ ಬಂದಿದೆ ಎಂಬ ಸುದ್ದಿ ಕೇಳಿ ಅಲ್ಲಿಯ ಹಳ್ಳಿಯವರೇನು ಖುಷಿ ಪಡುತ್ತಿಲ್ಲ.

TNN 2 Oct 2017, 2:37 pm
ಔರಂಗಾಬಾದ್: ಶಿರಡಿ ಸಾಯಿ ಬಾಬಾ ದರ್ಗೆಶನ ಮಾಡಲು ಈಗ ವಿಮಾನದಲ್ಲಿಯೂ ಪ್ರಯಾಣ ಬೆಳೆಸಬಹುದು. ಶಿರಡಿಗೆ ಸಮೀಪದಲ್ಲಿಯೇ ಈಗ ವಿಮಾನ ನಿಲ್ದಾಣ ತಲೆ ಎತ್ತಿದೆ.ಆದರೆ...
Vijaya Karnataka Web shirdi village has no bus service but gets airport
ಶಿರಡಿ: ಬಸ್‌ ಬಾರದ ಊರಿನಲ್ಲಿದೆ ವಿಮಾನ ನಿಲ್ದಾಣ


ಶಿರಡಿಯ ಕಾಕ್ಡಿಗೆ ವಿಮಾನ ನಿಲ್ದಾಣ ಬಂದಿದೆ ಎಂಬ ಸುದ್ದಿ ಕೇಳಿ ಅಲ್ಲಿಯ ಹಳ್ಳಿಯವರೇನು ಖುಷಿ ಪಡುತ್ತಿಲ್ಲ. 'ಸಾಮಾನ್ಯ ಜನರಿಗೆ ಮೂಲ ಸೌಕರ್ಯ ಒದಗಿಸಲೂ ಆಗಿಲ್ಲ. ನಮ್ಮ ಊರಿಗೇ ಸಾರಿಗೆ ಬಸ್‌ ಕೂಡ ಬರುವುದಿಲ್ಲ. ಆದರೆ ಈಗ ವಿಮಾನ ನಿಲ್ದಾಣ ತಲೆ ಎತ್ತಿದೆ. ಇದರಿಂದ ನಮಗೇನೂ ಪ್ರಯೋಜನ' ಎನ್ನುತ್ತಾರೆ ನಿವಾಸಿ ಮಧುಕರ್‌ ಗುಂಜಲ್.

ನಮ್ಮ ಊರಿಗೆ ಒಂದು ಬಸ್‌ ನಿಲ್ದಾಣದ ವ್ಯವಸ್ಥೆಯಿಲ್ಲ, ಏರ್‌ ಪೋರ್ಟ್ ಬಂದಿದೆ' ಎಂದು ಹತಾಶೆ ವ್ಯಕ್ತಪಡಿಸುತ್ತಾರೆ ಅಲ್ಲಿನ ಗ್ರಾಮಸ್ಥರು

'ಹಳ್ಳಿಯವರಿಗೆ ಅದರಲ್ಲೂ ಶಾಲಾ-ಕಾಲೇಜು ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಖಾಸಗಿ ಸಾರಿಗೆಗಳಲ್ಲಿ ಹೋಗುತ್ತಿದ್ದು ಪ್ರಯಾಣದ ವೆಚ್ಚ ದುಬಾರಿಯಾಗಿದೆ. ಸರ್ಕಾರಿ ಸಾರಿಗೆ ವ್ಯವಸ್ಥೆ ಬರುತ್ತಿದೆ ಎಂದು ಕಾದೂ ಮೂರ್ಖರಾಗಿದ್ದೇವೆ' ಎನ್ನುವುದು ಅಲ್ಲಿಯ ಹಳ್ಳಿಗರ ಅಳಲು.

ಶಿರಡಿಯಿಂದ 15 ಕಿ. ಮೀ ದೂರದಲ್ಲಿ ಕಾಕ್ಡಿ ಇದ್ದು, ಇಲ್ಲಿಯೇ ಈಗ ವಿಮಾನ ನಿಲ್ದಾನ ತಲೆ ಎತ್ತಿದೆ. ಶಿರಡಿಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಏರ್‌ಪೋರ್ಟ್‌ ನಿರ್ಮಿಸಲಾಗಿದೆ. ಇದಕ್ಕಾಗಿ ಸ್ಥಳವನ್ನೂ ಗೊತ್ತು ಮಾಡಿದೆ. ಆದರೆ ಅಲ್ಲಿಯ ನಿವಾಸಿಗಳು ಮೊದಲು ನಮಗೆ ಸರ್ಕಾರಿ ಸಾರಿಗೆ ವ್ಯವಸ್ಥೆ ಹಾಗೂ ಬಸ್‌ ನಿಲ್ದಾಣ ನಿರ್ಮಿಸಲಿ ಎಂದು ಆಗ್ರಹಿಸಿದ್ದಾರೆ.

An airport may have come to Kakdi near the temple town of Shirdi but villager Madhukar Gunjal is nowhere near elated

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ