ಮುಂಬಯಿ: ಬಿಎಂಸಿ ಚುನಾವಣೆಯ ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಪುನಃ ಕೈಜೋಡಿಸದೆ ಬೇರೆ ಆಯ್ಕೆಯೇ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
'ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಬಿಜೆಪಿ ಮತ್ತು ಶಿವಸೇನೆ ಹೊರತುಪಡಿಸಿ ಬೇರೆ ಯಾವ ಪಕ್ಷಗಳೂ ಆಡಳಿತ ಹಿಡಿಯುವ ಸಾಧ್ಯತೆಯಿಲ್ಲ. ಬಿಜೆಪಿ ಮತ್ತು ಶಿವಸೇನೆಯಲ್ಲೂ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. ಹೀಗಾಗಿ ಹಳೆಯ ಎರಡು ಮಿತ್ರಪಕ್ಷಗಳೇ ಮತ್ತೆ ಕೈಜೋಡಿಸಿ ಆಡಳಿತ ಸೂತ್ರ ಹಿಡಿಯುವ ಅನಿವಾರ್ಯತೆ ಇದೆ' ಎಂದು ಗಡ್ಕರಿ ತಿಳಿಸಿದರು.
'ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಕೈಗೊಳ್ಳಲಿದ್ದಾರೆ. ಅವರಿಬ್ಬರೂ ಪ್ರೌಢ ನಾಯಕರಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವರು ಎಂಬ ಭರವಸೆಯಿದೆ' ಎಂದು ಗಡ್ಕರಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಲೇಖನಗಳನ್ನು ಪ್ರಕಟಿಸುತ್ತಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
'ನಮ್ಮ ಜತೆ ಸ್ನೇಹ ಬೇಕು ಎಂದಾದರೆ ಸಾಮ್ನಾದಲ್ಲಿ ಬರುವ ಇಂತಹ ಲೇಖನಗಳನ್ನುತಡೆಯಬೇಕು. ಸಾಮ್ನಾ ಪ್ರತಿದಿನವೂ ಪ್ರಧಾನಿ ಹಾಗೂ ನಮ್ಮ ಪಕ್ಷದ ಅಧ್ಯಕ್ಷರನ್ನು ಅವಮಾನಿಸುತ್ತಿದ್ದರೆ ಸ್ನೇಹವಿರಲು ಹೇಗೆ ಸಾಧ್ಯ?' ಎಂದು ಗಡ್ಕರಿ ಪ್ರಶ್ನಿಸಿದರು.
'ಅವುಗಳನ್ನು ತಡೆಯಬಹುದಿತ್ತು. ಬಿಜೆಪಿ ಮತ್ತು ಶಿವಸೇನೆ ನಡುವೆ ಇಷ್ಟೊಂದು ವಿರಸ ಹುಟ್ಟಲು ಕಾರಣವಿಲ್ಲ' ಎಂದು ಅವರು ಮರಾಠಿ ಟಿವಿ ಚಾನೆಲ್ ಜತೆ ಮಾತನಾಡುತ್ತ ತಿಳಿಸಿದರು.
Shiv Sena, BJP have no option but to join hands again, says Nitin Gadkari after fractured BMC poll verdict
MUMBAI: A day after the BMC polls threw up a fractured verdict, senior BJP leader Nitin Gadkari on Friday said there is "no option" for his party and Shiv Sena but to join hands for control of the Mumbai civic body.
'ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಬಿಜೆಪಿ ಮತ್ತು ಶಿವಸೇನೆ ಹೊರತುಪಡಿಸಿ ಬೇರೆ ಯಾವ ಪಕ್ಷಗಳೂ ಆಡಳಿತ ಹಿಡಿಯುವ ಸಾಧ್ಯತೆಯಿಲ್ಲ. ಬಿಜೆಪಿ ಮತ್ತು ಶಿವಸೇನೆಯಲ್ಲೂ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. ಹೀಗಾಗಿ ಹಳೆಯ ಎರಡು ಮಿತ್ರಪಕ್ಷಗಳೇ ಮತ್ತೆ ಕೈಜೋಡಿಸಿ ಆಡಳಿತ ಸೂತ್ರ ಹಿಡಿಯುವ ಅನಿವಾರ್ಯತೆ ಇದೆ' ಎಂದು ಗಡ್ಕರಿ ತಿಳಿಸಿದರು.
'ಈ ನಿಟ್ಟಿನಲ್ಲಿ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಕೈಗೊಳ್ಳಲಿದ್ದಾರೆ. ಅವರಿಬ್ಬರೂ ಪ್ರೌಢ ನಾಯಕರಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವರು ಎಂಬ ಭರವಸೆಯಿದೆ' ಎಂದು ಗಡ್ಕರಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಲೇಖನಗಳನ್ನು ಪ್ರಕಟಿಸುತ್ತಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
'ನಮ್ಮ ಜತೆ ಸ್ನೇಹ ಬೇಕು ಎಂದಾದರೆ ಸಾಮ್ನಾದಲ್ಲಿ ಬರುವ ಇಂತಹ ಲೇಖನಗಳನ್ನುತಡೆಯಬೇಕು. ಸಾಮ್ನಾ ಪ್ರತಿದಿನವೂ ಪ್ರಧಾನಿ ಹಾಗೂ ನಮ್ಮ ಪಕ್ಷದ ಅಧ್ಯಕ್ಷರನ್ನು ಅವಮಾನಿಸುತ್ತಿದ್ದರೆ ಸ್ನೇಹವಿರಲು ಹೇಗೆ ಸಾಧ್ಯ?' ಎಂದು ಗಡ್ಕರಿ ಪ್ರಶ್ನಿಸಿದರು.
'ಅವುಗಳನ್ನು ತಡೆಯಬಹುದಿತ್ತು. ಬಿಜೆಪಿ ಮತ್ತು ಶಿವಸೇನೆ ನಡುವೆ ಇಷ್ಟೊಂದು ವಿರಸ ಹುಟ್ಟಲು ಕಾರಣವಿಲ್ಲ' ಎಂದು ಅವರು ಮರಾಠಿ ಟಿವಿ ಚಾನೆಲ್ ಜತೆ ಮಾತನಾಡುತ್ತ ತಿಳಿಸಿದರು.
Shiv Sena, BJP have no option but to join hands again, says Nitin Gadkari after fractured BMC poll verdict
MUMBAI: A day after the BMC polls threw up a fractured verdict, senior BJP leader Nitin Gadkari on Friday said there is "no option" for his party and Shiv Sena but to join hands for control of the Mumbai civic body.