ಆ್ಯಪ್ನಗರ

ಉದ್ಧವ್‌ ಠಾಕ್ರೆ ಪದಗ್ರಹಣಕ್ಕೆ ಶಿವಾಜಿ ಕ್ರೀಡಾಂಗಣವೇ ಏಕೆ?

ಠಾಕ್ರೆ ಕುಟುಂಬದ ಮೊದಲ ಸದಸ್ಯರೊಬ್ಬರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆ ದಾದರ್‌ನ ಶಿವಾಜಿ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ.

Vijaya Karnataka Web 28 Nov 2019, 8:03 am
ಮುಂಬಯಿ: ದಾದರ್‌ನಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಉದ್ಧವ್‌ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶಿವಸೇನೆ ಕಾರ್ಯಕರ್ತರಿಗೆ ಶಿವಾಜಿ ಕ್ರೀಡಾಂಗಣ ಪವಿತ್ರ ಸ್ಥಳವಾಗಿದೆ.
Vijaya Karnataka Web Uddhav Thackeray CM


ಬಾಳಾಸಾಹೇಬ್‌ ಠಾಕ್ರೆ ಅವರು ಪ್ರತಿ ವರ್ಷ ದಸರಾದಂದು ಇಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರ ನಿಧನದ ಬಳಿಕ ಉದ್ಧವ್‌ ಸಹ ಇದೇ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಕ್ರೀಡಾಂಗಣದಲ್ಲಿಯೇ ಬಾಳಾಸಾಹೇಬ್‌ ಅವರ ಸಮಾಧಿ ಇದ್ದು, ಅದನ್ನು ಪಕ್ಷದ ಕಾರ್ಯಕರ್ತರು 'ಶಿವತೀರ್ಥ' ಎಂದು ಕರೆಯುತ್ತಾರೆ.

ಈ ನಡುವೆ, ಶಿವಾಜಿ ಕ್ರೀಡಾಂಗಣದಲ್ಲಿ ರಾಜಕೀಯ ಸಮಾರಂಭ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ''ಗುರುವಾರದ ಕಾರ್ಯಕ್ರಮಕ್ಕೆ ತಡೆ ನೀಡುವುದಿಲ್ಲ. ಆದರೆ ಇಂತಹ ಕಾರ್ಯಕ್ರಮದ ಸಂದರ್ಭ ಭದ್ರತೆಯ ಆಥಂಕ ನಮ್ಮನ್ನು ಕಾಡುತ್ತಿದೆ,'' ಎಂದು ಕಳವಳ ವ್ಯಕ್ತ ಪಡಿಸಿದೆ. 2010ರಲ್ಲಿ ಈ ಉದ್ಯಾನವನವನ್ನು ಹೈಕೋರ್ಟ್‌ 'ನಿಶ್ಯಬ್ಧ ವಲಯ' ಎಂದು ಘೋಷಿಸಿದೆ.

ಮಹಾರಾಷ್ಟ್ರದಲ್ಲಿನ್ನು 'ಹುಲಿ' ರಾಜ್ಯಭಾರ; ಸಂಜೆ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಉದ್ಧವ್‌ ಠಾಕ್ರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ 400 ರೈತರಿಗೆ ಆಹ್ವಾನ ನೀಡಲಾಗಿದೆ ಎಂದು ಶಿವಸೇನೆ ತಿಳಿಸಿದೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ಕೆಲವು ರೈತರ ಕುಟುಂಬ ಸದಸ್ಯರಿಗೂ ಆಮಂತ್ರಣ ನೀಡಲಾಗಿದೆ. ತಮ್ಮ ಸರಕಾರ ರೈತಪರ ಎಂಬುದನ್ನು ಆರಂಭದಿಂದಲೇ ತೋರಿಸಿಕೊಳ್ಳುವ ಉದ್ದೇಶದಿಂದ ಪಕ್ಷ ಈ ತೀರ್ಮಾನ ಕೈಗೊಂಡಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎಲ್ಲ ಕಾಂಗ್ರೆಸ್‌ ಮುಖ್ಯಮಂತ್ರಿಗಳು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಡಿಎಂಕೆ ನಾಯಕ ಎಂಕೆ ಸ್ಟಾಲಿನ್‌ ಅವರಿಗೆ ಆಹ್ವಾನ ನೀಡಲಾಗಿದೆ. ''ಆಹ್ವಾನ ಬಂದಿರುವುದು ನಿಜ, ಆದರೆ ಭಾಗವಹಿಸುವ ಕುರಿತು ಮಮತಾ ಬ್ಯಾನರ್ಜಿ ಇನ್ನೂ ನಿರ್ಧರಿಸಿಲ್ಲ,'' ಎಂದು ಪಶ್ಚಿಮ ಬಂಗಾಳ ಸಿಎಂ ಕಚೇರಿ ತಿಳಿಸಿದೆ.

ಬೆರಳೆಣಿಕೆ ದಿನಗಳ ಕಾಲ ಮುಖ್ಯಮಂತ್ರಿಯಾಗಿ 'ಸಾಧನೆ' ಮಾಡಿದ ನಾಯಕರಿವರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ