ಬಾರಾಬಂಕಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲರಿಗಿಂತ ದೊಡ್ಡ ಗಪ್ಪು (ಕಟ್ಟು ಕಥೆ ಹೇಳುವ ವ್ಯಕ್ತಿ) ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಣಕವಾಡಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ, ಮಧ್ಯಪ್ರದೇಶದಲ್ಲಿ ಗೆದ್ದರೆ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಘೋಷಿಸಿದ್ದರು. ಆದರೆ ಇಲ್ಲಿಯವರೆಗೆ ಒಬ್ಬ ರೈತನ ಸಾಲ ಕೂಡ ಮನ್ನಾ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಎರಡು ತಿಂಗಳಲ್ಲಿ ರೈತರ ಸಾಲ ಮನ್ನಾ ಮಾಡದಿದ್ದರೆ, ಮುಖ್ಯಮಂತ್ರಿಯನ್ನೇ ಕಿತ್ತೊಗೆಯುತ್ತೇನೆ ಎಂದು ಸಹ ರಾಹುಲ್ ಹೇಳಿದ್ದರು. ಮುಖ್ಯ ಕಾರ್ಯದರ್ಶಿಗಳು ಕೇವಲ ಕಾಗದದಲ್ಲಿ ಬರೆದರೆ ಸಾಲ ಮನ್ನಾ ಆಗುವುದಿಲ್ಲ. ಇಲ್ಲಿಯವರೆಗೆ ಒಬ್ಬ ರೈತ ಕೂಡ ಸಾಲ ಮನ್ನಾದ ಹಣ ಪಡೆದುಕೊಳ್ಳಲು ಬ್ಯಾಂಕ್ ಕಡೆ ಹೋಗಿದ್ದು ಕಂಡಿಲ್ಲ. ಬ್ಯಾಂಕ್ಲ್ಲಿ ವಿವಿಧ ಬಣ್ಣದ ಕಾಗದಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದ ಯುಗದಲ್ಲಿ ಫಾರ್ಮ್ ತುಂಬಿಸುವ ನಾಟಕವನ್ನಾಡಲಾಗುತ್ತಿದೆ. ಫಾರ್ಮ್ ತುಂಬಿ ಆಗುವವರೆಗೆ ಲೋಕಸಭಾ ಚುನಾವಣೆ ಮುಗಿದಿರುತ್ತದೆ ಎಂದು ಆಡಳಿತಾರೂಢ ಸರಕಾರವನ್ನು ಟೀಕಿಸಿದ್ದಾರೆ ಶಿವರಾಜ್ ಸಿಂಗ್ .
ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಉಲ್ಲೇಖಿಸಿದ ಅವರು ರಾಜ್ಯದಲ್ಲಿ ಚುನಾವಣೆ ವಿಚಿತ್ರವಾಗಿತ್ತು. ನಾವು ಗೆಲ್ಲಲಿಲ್ಲ, ಕಾಂಗ್ರೆಸ್ ಸಹ ಗೆಲ್ಲಲಿಲ್ಲ. ಈ ಸರಕಾರ ಯಾವಾಗ ಬಿದ್ದು ಹೋಗತ್ತೋ ಗೊತ್ತಿಲ್ಲ ಎಂದಿದ್ದಾರೆ.
ನಾವು ಗೆದ್ದಿದ್ದು 109 ಸ್ಥಾನಗಳನ್ನು, ಕಾಂಗ್ರೆಸ್ ಗೆದ್ದಿದ್ದು 102 ಸ್ಥಾನಗಳನ್ನು. ಮತ ಹಂಚಿಕೆ ಕೂಡ ನಮಗೆ ಹೆಚ್ಚಿದೆ. ನನಗೂ ಸಮ್ಮಿಶ್ರ ಸರಕಾರ ರಚಿಸುವ ಆಫರ್ ಬಂದಿತ್ತು. ಆದರೆ ನಾನು ಸ್ಪಷ್ಟ ಬಹುಮತ ಸಿಕ್ಕಾಗ ಸರಕಾರ ರಚಿಸುವ ತೀರ್ಮಾನ ತೆಗೆದುಕೊಂಡೆ ಎಂದವರು ಹೇಳಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ, ಮಧ್ಯಪ್ರದೇಶದಲ್ಲಿ ಗೆದ್ದರೆ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಘೋಷಿಸಿದ್ದರು. ಆದರೆ ಇಲ್ಲಿಯವರೆಗೆ ಒಬ್ಬ ರೈತನ ಸಾಲ ಕೂಡ ಮನ್ನಾ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಎರಡು ತಿಂಗಳಲ್ಲಿ ರೈತರ ಸಾಲ ಮನ್ನಾ ಮಾಡದಿದ್ದರೆ, ಮುಖ್ಯಮಂತ್ರಿಯನ್ನೇ ಕಿತ್ತೊಗೆಯುತ್ತೇನೆ ಎಂದು ಸಹ ರಾಹುಲ್ ಹೇಳಿದ್ದರು. ಮುಖ್ಯ ಕಾರ್ಯದರ್ಶಿಗಳು ಕೇವಲ ಕಾಗದದಲ್ಲಿ ಬರೆದರೆ ಸಾಲ ಮನ್ನಾ ಆಗುವುದಿಲ್ಲ. ಇಲ್ಲಿಯವರೆಗೆ ಒಬ್ಬ ರೈತ ಕೂಡ ಸಾಲ ಮನ್ನಾದ ಹಣ ಪಡೆದುಕೊಳ್ಳಲು ಬ್ಯಾಂಕ್ ಕಡೆ ಹೋಗಿದ್ದು ಕಂಡಿಲ್ಲ. ಬ್ಯಾಂಕ್ಲ್ಲಿ ವಿವಿಧ ಬಣ್ಣದ ಕಾಗದಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದ ಯುಗದಲ್ಲಿ ಫಾರ್ಮ್ ತುಂಬಿಸುವ ನಾಟಕವನ್ನಾಡಲಾಗುತ್ತಿದೆ. ಫಾರ್ಮ್ ತುಂಬಿ ಆಗುವವರೆಗೆ ಲೋಕಸಭಾ ಚುನಾವಣೆ ಮುಗಿದಿರುತ್ತದೆ ಎಂದು ಆಡಳಿತಾರೂಢ ಸರಕಾರವನ್ನು ಟೀಕಿಸಿದ್ದಾರೆ ಶಿವರಾಜ್ ಸಿಂಗ್ .
ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಉಲ್ಲೇಖಿಸಿದ ಅವರು ರಾಜ್ಯದಲ್ಲಿ ಚುನಾವಣೆ ವಿಚಿತ್ರವಾಗಿತ್ತು. ನಾವು ಗೆಲ್ಲಲಿಲ್ಲ, ಕಾಂಗ್ರೆಸ್ ಸಹ ಗೆಲ್ಲಲಿಲ್ಲ. ಈ ಸರಕಾರ ಯಾವಾಗ ಬಿದ್ದು ಹೋಗತ್ತೋ ಗೊತ್ತಿಲ್ಲ ಎಂದಿದ್ದಾರೆ.
ನಾವು ಗೆದ್ದಿದ್ದು 109 ಸ್ಥಾನಗಳನ್ನು, ಕಾಂಗ್ರೆಸ್ ಗೆದ್ದಿದ್ದು 102 ಸ್ಥಾನಗಳನ್ನು. ಮತ ಹಂಚಿಕೆ ಕೂಡ ನಮಗೆ ಹೆಚ್ಚಿದೆ. ನನಗೂ ಸಮ್ಮಿಶ್ರ ಸರಕಾರ ರಚಿಸುವ ಆಫರ್ ಬಂದಿತ್ತು. ಆದರೆ ನಾನು ಸ್ಪಷ್ಟ ಬಹುಮತ ಸಿಕ್ಕಾಗ ಸರಕಾರ ರಚಿಸುವ ತೀರ್ಮಾನ ತೆಗೆದುಕೊಂಡೆ ಎಂದವರು ಹೇಳಿದ್ದಾರೆ.