ಆ್ಯಪ್ನಗರ

ಮನೆಗೆ ಹೋದರೂ ಮನೆಯೊಳಗೆ ಹೋಗದ ವೈದ್ಯಾಧಿಕಾರಿ, ಡಾಕ್ಟರ್‌ ನಡೆಗೆ ಭಾರಿ ಮೆಚ್ಚುಗೆ

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವೈದ್ಯರ ಫೋಟೋವನ್ನು ಟ್ವೀಟ್‌ ಮಾಡಿದ್ದು, ಡಾ. ಸುಧೀರ್‌ ದೆಹರಿಯಾ ಅವರಂತೆ ಸಾವಿರಾರು, ಲಕ್ಷಾಂತರ ಜನ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳು. ನಿಮ್ಮ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದಿದ್ದಾರೆ.

Agencies 31 Mar 2020, 10:33 pm

ಭೋಪಾಲ್‌: ಕೊರೊನಾ ಸೋಂಕಿನ ವಿರುದ್ಧ ವಿಶ್ವವೇ ಹೋರಾಟ ನಡೆಸುತ್ತಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ಈ ನಡುವೆ ಮನೆ - ಕುಟುಂಬ ಮರೆತು ಸೋಂಕಿನ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಮಧ್ಯ ಪ್ರದೇಶದ ಭೋಪಾಲ್‌ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ (ಸಿಎಂಎಚ್‌ಒ) ಡಾ. ಸುಧೀರ್‌ ದೆಹರಿಯಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Vijaya Karnataka Web Bhopal Doctor


ಭೋಪಾಲ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದ್ದು, ಈ ಬಗ್ಗೆ ನಿಗಾ ಇಟ್ಟಿರುವ ಡಾ. ಸುಧೀರ್‌ ಸತತ ಐದು ದಿನ ಮನೆಗೇ ಹೋಗದೆ ಕೆಲಸಮಾಡಿದ್ದರು. ಸೋಮವಾರ ಮನೆಗೆ ತೆರಳಿದ ಅವರು ಕುಟುಂಬದ ಸದಸ್ಯರನ್ನು ಮಾತನಾಡಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಮನೆಗೆ ಹೋದರೂ ಮನೆಯೊಳಗೆ ಪ್ರವೇಶಿಸದೇ ಮನೆಯ ಹೊರಗೆಯೇ ಕುಳಿತು ಅವರು ಟೀ ಸೇವಿಸಿದ್ದರು. ಕುಟುಂಬದ ಸದಸ್ಯರು ಸುರಕ್ಷಿತವಾಗಿರಲಿ ಎಂಬ ಕಾರಣಕ್ಕೆ ಅವರು ಗೇಟಿನ ಹೊರಗೆಯೇ ಕುಳಿತಿದ್ದು, ಮನೆಯವರೆಲ್ಲಾ ಗೇಟಿನ ಒಳಗೆ ನಿಂತು ಅವರೊಂದಿಗೆ ಮಾತನಾಡಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ರಾಜ್ಯದ 25 ಸಾವಿರ ವೈದ್ಯರಿಗೆ ಆನ್‌ಲೈನ್‌ ತರಬೇತಿ!

ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಎಲ್ಲರೂ ಡಾ. ಸುಧೀರ್‌ ಅವರ ಕಾರ್ಯನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಈ ಫೋಟೋವನ್ನು ಟ್ವೀಟ್‌ ಮಾಡಿದ್ದು, ಡಾ. ಸುಧೀರ್‌ ದೆಹರಿಯಾ ಅವರಂತೆ ಸಾವಿರಾರು, ಲಕ್ಷಾಂತರ ಜನ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳು. ನಿಮ್ಮ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದಿದ್ದಾರೆ.

ಮೊದಲಿಗೆ ಮುಂಬಯಿಯ ಚಲನಚಿತ್ರ ನಿರ್ದೇಶಕ ಚಾರುದತ್ತ ಆಚಾರ್ಯ ಈ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ಡಾ. ಸುಧೀರ್‌ ದೆಹರಿಯಾರ ಕರ್ತವ್ಯನಿಷ್ಠೆಯ ಬಗ್ಗೆ ಬರೆದಿದ್ದರು. ಹೀರೋಗಳ ಎಂಟ್ರಿ ಹೀಗಿರುತ್ತದೆ ನೋಡಿ ಎಂದು ಸಿನಿಮಾ ಶೈಲಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇವರ ಪೋಸ್ಟ್‌ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದರು. ಈ ಫೋಟೋ ಸಾವಿರಾರು ಕತೆ ಹೇಳುತ್ತಿದೆ. ಕೊರೊನಾ ವಿರುದ್ಧ ಹೋರಡಾತ್ತಿರುವವ ವೈದ್ಯರು ಮತ್ತು ಇತರ ಸಿಬ್ಬಂದಿ ಎದುರಿಸುತ್ತಿರುವ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ