ಆ್ಯಪ್ನಗರ

ಶೋಪಿಯಾನ್‌ನಲ್ಲಿ ನಾಲ್ವರು ಉಗ್ರ ಹತ್ಯೆ

ಮೃತ ಉಗ್ರರನ್ನು ಶೌಕತ್‌ ಅಹ್ಮದ್‌ ಮಿರ್‌,ರಫೀ ಹಸ್ಸನ್‌, ಸುಹೇಲ್‌ ಅಹ್ಮದ್‌ ಭಟ್‌ ಮತ್ತು ಆಜಾದ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಮೂಲತಃ ಪುಲ್ವಾಮ ನಿವಾಸಿಗಳಾದ ಇವರು ಅಲ್‌ ಕೈದಾ ಉಗ್ರ ಸಂಘಟನೆಯ ಅಂಗಸಂಸ್ಥೆ ಅನ್ಸಾರ್‌ ಗಾಜ್ವಾತುಲ್‌ ಹಿಂದ್‌ಗೆ ಸೇರಿದವರು ಎಂದು ಪತ್ತೆ ಮಾಡಲಾಗಿದೆ.

Agencies 24 Jun 2019, 5:00 am
ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಭಾನುವಾರ ಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯ್ಲಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ.
Vijaya Karnataka Web shopian encounter four militants killed in gunfight with security forces in jammu and kashmirs daramdora keegam area
ಶೋಪಿಯಾನ್‌ನಲ್ಲಿ ನಾಲ್ವರು ಉಗ್ರ ಹತ್ಯೆ


ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಅಡಗಿದ್ದಾರೆ ಎಂದು ಗುಪ್ತಚರ ಮಾಹಿತಿ ಸಿಕ್ಕಿತ್ತು. ಅದರಂತೆ ಕೀಗಾಮ್‌ನಲ್ಲಿನ ದರಾಮ್‌ದೊರಾ ಪ್ರದೇಶದಲ್ಲಿ ಶೋಧಕಾರ್ಯ ನಡೆಸಲಾಯಿತು. ನಾಲ್ವರು ಉಗ್ರರು ಪತ್ತೆಯಾದ ಕೂಡಲೇ ಭದ್ರತಾ ಪಡೆಗಳು ಗುಂಡಿಕ್ಕಿ ಅವರನ್ನು ಹೊಡೆದುರಳಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಉಗ್ರರನ್ನು ಶೌಕತ್‌ ಅಹ್ಮದ್‌ ಮಿರ್‌,ರಫೀ ಹಸ್ಸನ್‌, ಸುಹೇಲ್‌ ಅಹ್ಮದ್‌ ಭಟ್‌ ಮತ್ತು ಆಜಾದ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಮೂಲತಃ ಪುಲ್ವಾಮ ನಿವಾಸಿಗಳಾದ ಇವರು ಅಲ್‌ ಕೈದಾ ಉಗ್ರ ಸಂಘಟನೆಯ ಅಂಗಸಂಸ್ಥೆ ಅನ್ಸಾರ್‌ ಗಾಜ್ವಾತುಲ್‌ ಹಿಂದ್‌ಗೆ ಸೇರಿದವರು ಎಂದು ಪತ್ತೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶೋಪಿಯಾನ್‌ ಜಿಲ್ಲೆಯಾದ್ಯಂತ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ